ಕಾಗಿಣಾ ನದಿದಂಡೆಯ ತೆಲ್ಕೂರ, ಹೆಡ್ಡಳ್ಳಿ, ಬಿಬ್ಬಳ್ಳಿ, ಸಟಪಟನಹಳ್ಳಿ, ಮಳಖೇಡ, ಸಂಗಾವಿ(ಎಂ), ಮೀನಹಾಬಾಳ ಗ್ರಾಮಗಳಲ್ಲಿ ನದಿ ನೀರು ಬುಧವಾರ ರಾತ್ರಿಯೇ ನುಗ್ಗಿತ್ತು. ಗುರುವಾರ ಕೂಡ ನೀರಿನ ಪ್ರಮಾಣ ತಗ್ಗದ ಕಾರಣ ಜನ ಕಂಗಾಲಾಗಿದ್ದಾರೆ. ಗುರುವಾರ ಇಡೀ ದಿನ ಮನೆಯ ಸ್ವಚ್ಛತೆ ಹಾಗೂ ಧವಸ ಧಾನ್ಯಗಳ ರಕ್ಷಣೆ ಮಾಡುವುದರಲ್ಲಿಯೇ ಹರಸಾಹಸ ಪಡುವಂತಾಯಿತು.