ನಾಯಿಗಳು ಕಚ್ಚಿದ್ದರಿಂದ ಕೃಷ್ಣಮೃಗ ಗಾಯಗೊಂಡಿದೆ. ಒಂದು ಕಾಲು ಮುರಿದಿದ್ದು, ನರಳಾಡುತ್ತಿತ್ತು. ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿದ ಚಂದ್ರಶೇಖರ ಅವರು ಶಿವಕುಮಾರ ಅವರೊಂದಿಗೆ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಉಪ ವಲಯ ಅರಣ್ಯಾಧಿಕಾರಿ ದಯಾನಂದ ಅವರಿಗೆ ಕೃಷ್ಣಮೃಗ ಹಸ್ತಾಂತರಿಸಿದರು. ಅಧಿಕಾರಿಗಳು ಆಟೊದಲ್ಲಿ ಅದನ್ನು ಚಿಂಚೋಳಿಗೆ ಒಯ್ದರು.