<p><strong>ಕಾಳಗಿ: </strong>ತಾಲ್ಲೂಕಿನಲ್ಲಿ ಡಿ.22ರಂದು ನಡೆದ 14 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪಟ್ಟಣದಲ್ಲಿ ಬುಧವಾರ ನಡೆಯಿತು.</p>.<p>ಮೊದಲ ಸುತ್ತಿನ ಮತ ಎಣಿಕೆ ಮಧ್ಯಾಹ್ನ 2 ಗಂಟೆಗೆ ಮುಗಿದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ ಅಭ್ಯರ್ಥಿಗಳು ಗೆಲುವು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.</p>.<p>ಇಲ್ಲಿನ ಜಗದ್ಗುರು ರೇವಣಸಿದ್ದೇಶ್ವರ ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುವ ಮುನ್ನವೇ ಸುತ್ತಲಿನ ಹಳ್ಳಿಗಳ ಜನರು ಬೈಕ್, ಆಟೊ, ಜೀಪು, ಟಂಟಂ, ಕಾರು ಮತ್ತಿತರ ವಾಹನಗಳ ಮೂಲಕ ಕಾಲೇಜಿನತ್ತ ಬರತೊಡಗಿದರು.</p>.<p>ಅಭ್ಯರ್ಥಿ ಅಥವಾ ಏಜೆಂಟ್ ಎಣಿಕೆ ಕೇಂದ್ರದೊಳಗೆ ಪ್ರವೇಶ ಮಾಡಿದರೆ, ಅವರ ಬೆಂಬಲಿಗರು ಹೊರಭಾಗದಲ್ಲಿ ನಿಂತುಕೊಂಡಿದ್ದರು. ಪೊಲೀಸ್ ಠಾಣೆಯ ರಸ್ತೆ ಮತ್ತು ಗೋಟೂರ ರಸ್ತೆ, ಜೆಸ್ಕಾಂ ಕಚೇರಿ ಜನರಿಂದ ಗಿಜುಗಿಡುತ್ತಿದ್ದವು. ಅಕ್ಕಪಕ್ಕದ ಹೊಲಗಳಲ್ಲಿ ಜನರು ತಂಡೋಪ ತಂಡವಾಗಿ ಸೇರಿದರು.</p>.<p>ಮತ ಎಣಿಕೆ ಆರಂಭವಾಗುತ್ತಿದ್ದಂತೆ ಹೊರಗಿದ್ದ ಜನರ ಕಿವಿಗಳು ಫಲಿತಾಂಶಕ್ಕಾಗಿ ಧ್ವನಿವರ್ಧಕದ ಕಡೆಗೆ ನಿಮಿರತೊಡಗಿದವು. ಶಬ್ದ ಕೇಳಿಬರುತ್ತಿದ್ದಂತೆ ಮತ್ತು ತಮ್ಮ ಏಜೆಂಟ್ ಅಥವಾ ಅಭ್ಯರ್ಥಿ ಹೊರಗಡೆ ಬರುತ್ತಿದ್ದಂತೆ ಗೆದ್ದ ಅಭ್ಯರ್ಥಿಯ ಜನರು ಸಂತಸ ತಡೆಯದೆ ಬ್ಯಾರಿಕೇಡ್ ಒಳನುಗ್ಗಿ ಬರುತ್ತಿರುವುದು ಕಂಡುಬಂತು.</p>.<p>ಸ್ಥಳೀಯ ಪಿಎಸ್ಐ ದಿವ್ಯಾ ಶ್ರೀಶೈಲ ಅಂಬಾಟಿ ತಮ್ಮ ಜೀಪಿನ ಧ್ವನಿವರ್ಧಕದ ಮೂಲಕ ಜನರು ಒಳನುಗ್ಗದಂತೆ ಸೂಚಿಸಿದರು. ಒಳನುಗ್ಗಿದವರಿಗೆ ಪೊಲೀಸರು ಲಾಠಿ ಮೂಲಕ ಚದುರಿಸಲು ಮುಂದಾದರು. ಈ ಮಧ್ಯೆ ಹೋಟೆಲ್, ಕಬ್ಬಿನ ಹಾಲು, ಕುಡಿಯುವ ನೀರಿನ ವ್ಯಾಪಾರ ಜೋರಾಗಿತ್ತು.</p>.<p>ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಡಿ.ಬಿ.ಕಟ್ಟಿಮನಿ, ರಟಕಲ್ ಪಿಎಸ್ಐ ಶಿವಶಂಕರ ಸುಬೇದಾರ, ಮಾಡಬೂಳ ಪಿಎಸ್ಐ ವಿಜಯಕುಮಾರ ನಾಯಕ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ: </strong>ತಾಲ್ಲೂಕಿನಲ್ಲಿ ಡಿ.22ರಂದು ನಡೆದ 14 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪಟ್ಟಣದಲ್ಲಿ ಬುಧವಾರ ನಡೆಯಿತು.</p>.<p>ಮೊದಲ ಸುತ್ತಿನ ಮತ ಎಣಿಕೆ ಮಧ್ಯಾಹ್ನ 2 ಗಂಟೆಗೆ ಮುಗಿದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ ಅಭ್ಯರ್ಥಿಗಳು ಗೆಲುವು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.</p>.<p>ಇಲ್ಲಿನ ಜಗದ್ಗುರು ರೇವಣಸಿದ್ದೇಶ್ವರ ನಾಗರತ್ನಮ್ಮ ಶಿವಶರಣಪ್ಪ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುವ ಮುನ್ನವೇ ಸುತ್ತಲಿನ ಹಳ್ಳಿಗಳ ಜನರು ಬೈಕ್, ಆಟೊ, ಜೀಪು, ಟಂಟಂ, ಕಾರು ಮತ್ತಿತರ ವಾಹನಗಳ ಮೂಲಕ ಕಾಲೇಜಿನತ್ತ ಬರತೊಡಗಿದರು.</p>.<p>ಅಭ್ಯರ್ಥಿ ಅಥವಾ ಏಜೆಂಟ್ ಎಣಿಕೆ ಕೇಂದ್ರದೊಳಗೆ ಪ್ರವೇಶ ಮಾಡಿದರೆ, ಅವರ ಬೆಂಬಲಿಗರು ಹೊರಭಾಗದಲ್ಲಿ ನಿಂತುಕೊಂಡಿದ್ದರು. ಪೊಲೀಸ್ ಠಾಣೆಯ ರಸ್ತೆ ಮತ್ತು ಗೋಟೂರ ರಸ್ತೆ, ಜೆಸ್ಕಾಂ ಕಚೇರಿ ಜನರಿಂದ ಗಿಜುಗಿಡುತ್ತಿದ್ದವು. ಅಕ್ಕಪಕ್ಕದ ಹೊಲಗಳಲ್ಲಿ ಜನರು ತಂಡೋಪ ತಂಡವಾಗಿ ಸೇರಿದರು.</p>.<p>ಮತ ಎಣಿಕೆ ಆರಂಭವಾಗುತ್ತಿದ್ದಂತೆ ಹೊರಗಿದ್ದ ಜನರ ಕಿವಿಗಳು ಫಲಿತಾಂಶಕ್ಕಾಗಿ ಧ್ವನಿವರ್ಧಕದ ಕಡೆಗೆ ನಿಮಿರತೊಡಗಿದವು. ಶಬ್ದ ಕೇಳಿಬರುತ್ತಿದ್ದಂತೆ ಮತ್ತು ತಮ್ಮ ಏಜೆಂಟ್ ಅಥವಾ ಅಭ್ಯರ್ಥಿ ಹೊರಗಡೆ ಬರುತ್ತಿದ್ದಂತೆ ಗೆದ್ದ ಅಭ್ಯರ್ಥಿಯ ಜನರು ಸಂತಸ ತಡೆಯದೆ ಬ್ಯಾರಿಕೇಡ್ ಒಳನುಗ್ಗಿ ಬರುತ್ತಿರುವುದು ಕಂಡುಬಂತು.</p>.<p>ಸ್ಥಳೀಯ ಪಿಎಸ್ಐ ದಿವ್ಯಾ ಶ್ರೀಶೈಲ ಅಂಬಾಟಿ ತಮ್ಮ ಜೀಪಿನ ಧ್ವನಿವರ್ಧಕದ ಮೂಲಕ ಜನರು ಒಳನುಗ್ಗದಂತೆ ಸೂಚಿಸಿದರು. ಒಳನುಗ್ಗಿದವರಿಗೆ ಪೊಲೀಸರು ಲಾಠಿ ಮೂಲಕ ಚದುರಿಸಲು ಮುಂದಾದರು. ಈ ಮಧ್ಯೆ ಹೋಟೆಲ್, ಕಬ್ಬಿನ ಹಾಲು, ಕುಡಿಯುವ ನೀರಿನ ವ್ಯಾಪಾರ ಜೋರಾಗಿತ್ತು.</p>.<p>ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಡಿ.ಬಿ.ಕಟ್ಟಿಮನಿ, ರಟಕಲ್ ಪಿಎಸ್ಐ ಶಿವಶಂಕರ ಸುಬೇದಾರ, ಮಾಡಬೂಳ ಪಿಎಸ್ಐ ವಿಜಯಕುಮಾರ ನಾಯಕ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>