ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ ಚಿನ್ನದ ಪದಕಗಳನ್ನು ಪಡೆದ ಬಳಿಕ ಮಾತನಾಡಿದ ಪೂರ್ಣಿಮಾ, ‘ಪಿಯು ಕಾಲೇಜು ಉಪನ್ಯಾಸಕರಾಗಿದ್ದ ತಂದೆ ಲಿಂಗಣ್ಣ ಕೆಲ ವರ್ಷಗಳ ಹಿಂದೆ ಮೃತಪಟ್ಟರು. ನಾನು ಚೆನ್ನಾಗಿ ಓದಿ ಒಂದು ಚಿನ್ನದ ಪದಕ ಪಡೆಯಲಿ ಎಂಬ ಆಸೆ ಇಟ್ಟುಕೊಂಡಿದ್ದರು. ಇಂದು 12 ಪದಕಗಳನ್ನು ಪಡೆದಿದ್ದೇನೆ. ಆ ಖುಷಿಯನ್ನು ಅನುಭವಿಸಲು ತಂದೆಯೇ ಇಲ್ಲ’ ಎಂದು ಕಣ್ಣೀರಿಟ್ಟರು.