ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ

Last Updated 17 ಸೆಪ್ಟೆಂಬರ್ 2020, 7:34 IST
ಅಕ್ಷರ ಗಾತ್ರ
ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ
ADVERTISEMENT
""
ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ
""
ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ
""

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನಲ್ಲಿ ಬುಧವಾರ ಸುಮಾರು 180 ಮಿ.ಮೀ ಮಳೆ ಸುರಿದಿದೆ. ಸುಲೇಪೇಟ 101, ಚಿಮ್ಮನಚೋಡ 90, ಕುಂಚಾವರಂ 60, ನಿಡಗುಂದಾ 49, ಕೋಡ್ಲಿ 35 ಮಿ.ಮೀ ಮಳೆ ದಾಖಲಾಗಿದೆ.

ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯ ಹೆದ್ದಾರಿ 15ರಲ್ಲಿನ ಐನೋಳ್ಳಿ‌ ಮತ್ತು ನಾಗಾಈದಲಾಯಿ ಬಳಿ ಸೇತುವೆ ಪ್ರವಾಹದ ನೀರಿಗೆ ಕೊಚ್ಚಿಕೊಂಡು ಹೋಗಿದ್ದರಿಂದ ಚಿಂಚೋಳಿ ಬೀದರ್ ಮಧ್ಯೆ ಸಂಪರ್ಕ ಕಡಿತವಾಗಿದೆ.

ಚಿಂಚೋಳಿ ಪಟ್ಟಣದಲ್ಲಿಯೂ ಸೇತುವೆಯ ಕೆಳಭಾಗದ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಡಾಂಬರ ರಸ್ತೆ ಕುಸಿದಿದೆ. ಇದರಿಂದ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಚಿಂಚೋಳಿ ಪಟ್ಟಣದಲ್ಲಿ ನೀರು ಹರಿಯಲು ಉಂಟಾಗಿದ್ದ ಅಡೆತಡೆಗಳನ್ನು ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ಎದುರು ನಿಂತು ಜೆಸಿಬಿಯಿಂದ ತೆರವುಗೊಳಿಸಿದರು.

ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದರು.

ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ನೀನು ನುಗ್ಗಿದೆ. ಅಧಿಕ ಅಮಾವಾಸ್ಯೆ ನಿಮಿತ್ತ ದರ್ಶನ ಪಡೆಯಲು ಆಗಮಿಸಿದ ಭಕ್ತರು ಪರದಾಡುವಂತಾಯಿತು. ಕಾಳಗಿ - ಕೊಡದೂರ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ನೀರಿನ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ
ಕಾಳಗಿ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ನೀನು ನುಗ್ಗಿದೆ.
ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ
ಅಧಿಕ ಅಮಾವಾಸ್ಯೆ ನಿಮಿತ್ತ ದರ್ಶನ ಪಡೆಯಲು ಆಗಮಿಸಿದ ಭಕ್ತರು ಪರದಾಡುವಂತಾಯಿತು.
ಚಿಂಚೋಳಿ: ದಾಖಲೆಯ ಮಳೆ, ಜನಜೀವನ ಅಸ್ತವ್ಯಸ್ತ
ಕಾಳಗಿ - ಕೊಡದೂರ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT