<p><strong>ಕಾಳಗಿ (ಕಲಬುರಗಿ ಜಿಲ್ಲೆ):</strong> ಸ್ವಂತ ಮತ್ತು ಕಡತಿ ಹಾಕಿಕೊಂಡಿದ್ದ ಹೊಲದಲ್ಲಿ ಬೆಳೆ ಕೈಕೊಟ್ಟ ಪರಿಣಾಮ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರೊಬ್ಬರು ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ಹೊರವಲಯದ ಕರೆಕಲ್ ತಾಂಡಾದಲ್ಲಿ ಶನಿವಾರ ರಾತ್ರಿ ಜರುಗಿದೆ.</p><p>ಪ್ರಕಾಶ ಸೇವು ಜಾಧವ (57) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.</p>.ದೊಡ್ಡಬಳ್ಳಾಪುರ| ಗೃಹಣಿ ಆತ್ಮಹತ್ಯೆ: ತಲೆ ಮರೆಸಿಕೊಂಡಿದ್ದ ಮೂವರ ಸೆರೆ.<p>ಐದು ವರ್ಷದ ಹಿಂದೆ ಮಗಳ ಮದುವೆಗೆಂದು ₹10 ಲಕ್ಷ ಖಾಸಗಿ ಸಾಲ ಮಾಡಿ ತನ್ನ ಸ್ವಂತದ 2 ಎಕರೆ ಜಮೀನು ಮಾರ್ಟಿಗೇಜ್ ಮಾಡಿಕೊಟ್ಟಿದ್ದರು.</p><p>ಪ್ರತಿ ವರ್ಷ ತನ್ನ ಹೊಲದೊಂದಿಗೆ ಇತರರ ಹೊಲ ಕಡತಿ ಹಾಕಿಕೊಂಡು ಹೆಸರು, ತೊಗರಿ ಬಿತ್ತನೆ ಮಾಡುತ್ತಿದ್ದರು. ಅದರಂತೆ ಈ ವರ್ಷವೂ ಒಟ್ಟು 30 ಎಕರೆಯಲ್ಲಿ ಹೆಸರು, ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ, ಬೆಳೆ ಸರಿಯಾಗಿ ಬೆಳೆದಿಲ್ಲ. ಈ ಬಾರಿಯೂ ಅತಿವೃಷ್ಟಿಗೆ ಹೆಸರು ಕೈ ಕೊಟ್ಟಿದೆ. ಈಗ ತೊಗರಿಯು ಗೊಡ್ಡು ರೋಗಕ್ಕೆ ತುತ್ತಾಗಿದೆ.</p>.ಕಲಬುರಗಿ | ಮಗಳನ್ನು ಸಾಯಿಸಿ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ; ತಂದೆ ಬಂಧನ.<p>ಶನಿವಾರ ಹೊಲದಲ್ಲಿ ಈ ಎಲ್ಲವನ್ನು ಅವಲೋಕಿಸಿದ ಪ್ರಕಾಶ ಹೊಲದಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p><p>ಈ ರೈತನ ಹೆಸರಿನಿಂದ ಸ್ಥಳೀಯ ರೈತ ಸೇವಾ ಸಹಕಾರ ಸಂಘದಲ್ಲಿ ₹25 ಸಾವಿರ ಸಾಲವಿದೆ ಎನ್ನಲಾಗಿದೆ.</p><p>ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.</p><p>ಭಾನುವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p> . ಪಶ್ಚಿಮ ಬಂಗಾಳ | ಬೂತ್ ಅಧಿಕಾರಿ ಆತ್ಮಹತ್ಯೆ: ಎಸ್ಐಆರ್ ಒತ್ತಡದ ಆರೋಪ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ (ಕಲಬುರಗಿ ಜಿಲ್ಲೆ):</strong> ಸ್ವಂತ ಮತ್ತು ಕಡತಿ ಹಾಕಿಕೊಂಡಿದ್ದ ಹೊಲದಲ್ಲಿ ಬೆಳೆ ಕೈಕೊಟ್ಟ ಪರಿಣಾಮ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತರೊಬ್ಬರು ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ಹೊರವಲಯದ ಕರೆಕಲ್ ತಾಂಡಾದಲ್ಲಿ ಶನಿವಾರ ರಾತ್ರಿ ಜರುಗಿದೆ.</p><p>ಪ್ರಕಾಶ ಸೇವು ಜಾಧವ (57) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.</p>.ದೊಡ್ಡಬಳ್ಳಾಪುರ| ಗೃಹಣಿ ಆತ್ಮಹತ್ಯೆ: ತಲೆ ಮರೆಸಿಕೊಂಡಿದ್ದ ಮೂವರ ಸೆರೆ.<p>ಐದು ವರ್ಷದ ಹಿಂದೆ ಮಗಳ ಮದುವೆಗೆಂದು ₹10 ಲಕ್ಷ ಖಾಸಗಿ ಸಾಲ ಮಾಡಿ ತನ್ನ ಸ್ವಂತದ 2 ಎಕರೆ ಜಮೀನು ಮಾರ್ಟಿಗೇಜ್ ಮಾಡಿಕೊಟ್ಟಿದ್ದರು.</p><p>ಪ್ರತಿ ವರ್ಷ ತನ್ನ ಹೊಲದೊಂದಿಗೆ ಇತರರ ಹೊಲ ಕಡತಿ ಹಾಕಿಕೊಂಡು ಹೆಸರು, ತೊಗರಿ ಬಿತ್ತನೆ ಮಾಡುತ್ತಿದ್ದರು. ಅದರಂತೆ ಈ ವರ್ಷವೂ ಒಟ್ಟು 30 ಎಕರೆಯಲ್ಲಿ ಹೆಸರು, ತೊಗರಿ ಬಿತ್ತನೆ ಮಾಡಿದ್ದಾರೆ. ಆದರೆ, ಬೆಳೆ ಸರಿಯಾಗಿ ಬೆಳೆದಿಲ್ಲ. ಈ ಬಾರಿಯೂ ಅತಿವೃಷ್ಟಿಗೆ ಹೆಸರು ಕೈ ಕೊಟ್ಟಿದೆ. ಈಗ ತೊಗರಿಯು ಗೊಡ್ಡು ರೋಗಕ್ಕೆ ತುತ್ತಾಗಿದೆ.</p>.ಕಲಬುರಗಿ | ಮಗಳನ್ನು ಸಾಯಿಸಿ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ; ತಂದೆ ಬಂಧನ.<p>ಶನಿವಾರ ಹೊಲದಲ್ಲಿ ಈ ಎಲ್ಲವನ್ನು ಅವಲೋಕಿಸಿದ ಪ್ರಕಾಶ ಹೊಲದಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p><p>ಈ ರೈತನ ಹೆಸರಿನಿಂದ ಸ್ಥಳೀಯ ರೈತ ಸೇವಾ ಸಹಕಾರ ಸಂಘದಲ್ಲಿ ₹25 ಸಾವಿರ ಸಾಲವಿದೆ ಎನ್ನಲಾಗಿದೆ.</p><p>ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.</p><p>ಭಾನುವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p> . ಪಶ್ಚಿಮ ಬಂಗಾಳ | ಬೂತ್ ಅಧಿಕಾರಿ ಆತ್ಮಹತ್ಯೆ: ಎಸ್ಐಆರ್ ಒತ್ತಡದ ಆರೋಪ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>