ಶನಿವಾರ, 20 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಮೂರ್ನಾಲ್ಕು ತಿಂಗಳಲ್ಲಿ ಬೆಂಗಳೂರಿಗೆ ಹೊಸ ರೈಲು: ಉಮೇಶ ಜಾಧವ ಭರವಸೆ

Published : 29 ಜುಲೈ 2023, 16:14 IST
Last Updated : 29 ಜುಲೈ 2023, 16:14 IST
ಫಾಲೋ ಮಾಡಿ
Comments
ಟೆಕ್ಸ್‌ಟೈಲ್ ಪಾರ್ಕ್:
‘ಪ್ರಜಾವಾಣಿ’ ವರದಿ ಪ್ರಸ್ತಾಪ ಸಂವಾದದ ಸಂದರ್ಭದಲ್ಲಿ ಕಲಬುರಗಿಯ ಹೊನ್ನಕಿರಣಗಿ ಬಳಿ ಕೇಂದ್ರ ಸರ್ಕಾರದ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಪ್ರಸ್ತಾಪಿಸಿದ ಸಂಸದ ಡಾ. ಉಮೇಶ ಜಾಧವ ಅವರು ‘ಟೆಕ್ಸ್‌ಟೈಲ್ ಪಾರ್ಕ್‌ ಜಿಲ್ಲೆಗೆ ತರುವುದು ನನ್ನ ಜೀವಮಾನದ ಕನಸಾಗಿತ್ತು. ಕಲಬುರಗಿಗೆ ಪಾರ್ಕ್ ಘೋಷಣೆಯಾಗಿದ್ದು ಸುಮಾರು ಒಂದೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಪಾರ್ಕ್ ಆರಂಭಕ್ಕಾಗಿ ಕೇಂದ್ರ ಸರ್ಕಾರವು ತಂಡವೊಂದನ್ನು ರಚಿಸಿದ್ದು ಪ್ರತಿವಾರ ಸಭೆ ನಡೆಸುತ್ತಿದೆ. ರೇಮಂಡ್ಸ್‌ನಂತಹ ಪ್ರಖ್ಯಾತ ಸಂಸ್ಥೆಗಳು ಇಲ್ಲಿಗೆ ಬರಲು ಉತ್ಸಾಹ ತೋರಿಸಿವೆ. ಜೊತೆಗೆ ಇಲ್ಲಿ ಕೆಲಸ ಮಾಡುವವರಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಪಂಚತಾರಾ ಹೋಟೆಲ್‌ ಗಾಲ್ಫ್ ಕ್ಲಬ್ ತಲೆ ಎತ್ತಲಿದೆ. ಕೆಲವೇ ತಿಂಗಳಲ್ಲಿ ಪಾರ್ಕ್ ಕಾರ್ಯಾರಂಭ ಮಾಡಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ. ರಾಜ್ಯದ ಜವಳಿ ಸಚಿವ ಶಿವಾನಂದ ಪಾಟೀಲ ಅವರೂ ಪಾರ್ಕ್ ಶೀಘ್ರ ಕಾರ್ಯಾರಂಭಕ್ಕೆ ಆಸಕ್ತಿ ವಹಿಸಿದ್ದಾರೆ’ ಎಂದರು. ಇತ್ತೀಚೆಗೆ ’ಕಡತಕ್ಕೇ ಸೀಮಿತವಾದ ಜವಳಿ ಪಾರ್ಕ್‘ ಶೀರ್ಷಿಕೆಯಡಿ ಪ್ರಜಾವಾಣಿ ವರದಿ ಪ್ರಕಟಿಸಿತ್ತು.
ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಜಿಮ್ಸ್ ಆಸ್ಪತ್ರೆಯಲ್ಲಿ ಸುಸಜ್ಜಿತ ಡಯಾಲಿಸಿಸ್ ಘಟಕವನ್ನು ಆರಂಭಿಸಲು ಈಗಾಗಲೇ ಸಂಸದರ ನಿಧಿಯಿಂದ ಹಣ ತೆಗೆದಿರಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಜಿಮ್ಸ್‌ನಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲು ಬಜೆಟ್‌ನಲ್ಲಿ ಹಣ ಹೊಂದಿಸಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು. ಕೆಕೆಸಿಸಿಐ ಮಾಜಿ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ‘ಕಿಡ್ನಿ ಕಳೆದುಕೊಂಡು ಡಯಾಲಿಸಿಸ್ ಅನಿವಾರ್ಯವಾದ ಕುಟುಂಬದವರಿಗೆ ಮಾತ್ರ ಇದರ ಸಮಸ್ಯೆ ಅರ್ಥವಾಗುತ್ತದೆ. ಡಯಾಲಿಸಿಸ್ ಹಂತ ಮೀರಿದರೆ ಕಿಡ್ನಿಯನ್ನು ಬದಲಿಸಬೇಕಾಗುತ್ತದೆ. ಇದು ಅತ್ಯಂತ ದುಬಾರಿಯಾದುದು ಹಾಗೂ ಕಿಡ್ನಿ ದಾನಿಗಳು ಸಿಗುವುದಿಲ್ಲ’ ಎಂದರು. ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರವನ್ನು ಖಾಸಗಿಯವರಿಗೆ ವಹಿಸಲಾಗಿದ್ದು ಸರಿಯಾಗಿ ನಿರ್ವಹಿಸುತ್ತಿಲ್ಲ. ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಲಾಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರೋಗಿಗಳೇ ಡಯಾಲಿಸಿಸ್‌ಗೆ ಬೇಕಾದ ಪರಿಕರಗಳನ್ನು ಹೊರಗಿನಿಂದ ತರಬೇಕಿದೆ ಎಂದು ಶರಣು ಪಪ್ಪಾ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT