ಸುಸಜ್ಜಿತ ಡಯಾಲಿಸಿಸ್ ಕೇಂದ್ರ ಸ್ಥಾಪನೆ
ಜಿಮ್ಸ್ ಆಸ್ಪತ್ರೆಯಲ್ಲಿ ಸುಸಜ್ಜಿತ ಡಯಾಲಿಸಿಸ್ ಘಟಕವನ್ನು ಆರಂಭಿಸಲು ಈಗಾಗಲೇ ಸಂಸದರ ನಿಧಿಯಿಂದ ಹಣ ತೆಗೆದಿರಿಸಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಜಿಮ್ಸ್ನಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲು ಬಜೆಟ್ನಲ್ಲಿ ಹಣ ಹೊಂದಿಸಿದ್ದಾರೆ ಎಂದು ಸಂಸದ ಡಾ. ಉಮೇಶ ಜಾಧವ ತಿಳಿಸಿದರು. ಕೆಕೆಸಿಸಿಐ ಮಾಜಿ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ‘ಕಿಡ್ನಿ ಕಳೆದುಕೊಂಡು ಡಯಾಲಿಸಿಸ್ ಅನಿವಾರ್ಯವಾದ ಕುಟುಂಬದವರಿಗೆ ಮಾತ್ರ ಇದರ ಸಮಸ್ಯೆ ಅರ್ಥವಾಗುತ್ತದೆ. ಡಯಾಲಿಸಿಸ್ ಹಂತ ಮೀರಿದರೆ ಕಿಡ್ನಿಯನ್ನು ಬದಲಿಸಬೇಕಾಗುತ್ತದೆ. ಇದು ಅತ್ಯಂತ ದುಬಾರಿಯಾದುದು ಹಾಗೂ ಕಿಡ್ನಿ ದಾನಿಗಳು ಸಿಗುವುದಿಲ್ಲ’ ಎಂದರು. ಜಿಲ್ಲಾಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರವನ್ನು ಖಾಸಗಿಯವರಿಗೆ ವಹಿಸಲಾಗಿದ್ದು ಸರಿಯಾಗಿ ನಿರ್ವಹಿಸುತ್ತಿಲ್ಲ. ಕಳಪೆ ಗುಣಮಟ್ಟದ ಸಾಧನಗಳನ್ನು ಬಳಸಲಾಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರೋಗಿಗಳೇ ಡಯಾಲಿಸಿಸ್ಗೆ ಬೇಕಾದ ಪರಿಕರಗಳನ್ನು ಹೊರಗಿನಿಂದ ತರಬೇಕಿದೆ ಎಂದು ಶರಣು ಪಪ್ಪಾ ದೂರಿದರು.