ಆರೋಪಿಯಿಂದ ವಶಕ್ಕೆ ಪಡೆದ ಚಿನ್ನ–ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಕಮಿಷನರ್ ಶರಣಪ್ಪ ಎಸ್.ಡಿ. ಪರಿಶೀಲಿಸಿದರು. ಎಸಿಪಿ ಶರಣಬಸಪ್ಪ ಸುಬೇದಾರ ಇನ್ಸ್ಪೆಕ್ಟರ್ ಗುರುಲಿಂಗಪ್ಪ ಪಾಟೀಲ ಇದ್ದಾರೆ
ನಾಗರಿಕರು ಮನೆಗಳಿಗೆ ಕನಿಷ್ಠ ಸುರಕ್ಷತಾ ಸಲಕರಣೆ ಅಳವಡಿಸಿಕೊಳ್ಳಬೇಕು. ದೂರಿನಲ್ಲಿ ಪ್ರಾಮಾಣಿಕವಾದ ಮಾಹಿತಿ ಕೊಡಬೇಕು
ಶರಣಪ್ಪ ಎಸ್.ಡಿ. ನಗರ ಪೊಲೀಸ್ ಕಮಿಷನರ್
‘ಸುಳ್ಳು ಹೇಳಿದ್ದ ದೂರುದಾರ!’
‘ದೂರು ಕೊಡುವಾಗ ಸಂತ್ರಸ್ತರು 40 ತೊಲ ಬಂಗಾರ ಕಳುವಾಗಿದೆ ಎಂದು ಹೇಳಿದ್ದರು. ಆದರೆ ಬಂಗಾರ ವಶಕ್ಕೆ ಪಡೆದು ಪರಿಶೀಲಿದಾಗ ಅದರಲ್ಲಿ 23 ತೊಲ ಚಿನ್ನ ನಕಲಿ (ರೋಡ್ ಗೋಲ್ಡ್) ಹಾಗೂ 17 ತೊಲದಷ್ಟು ಮಾತ್ರವೇ ಅಸಲಿ ಚಿನ್ನವೆಂದು ಗೊತ್ತಾಗಿದೆ. ಈ ಬಗೆಗೆ ವಿಚಾರಿಸಿದಾಗ ಮನೆಯಲ್ಲೂ ಒಬ್ಬರಿಗೆ ಬಿಟ್ಟು ಮಿಕ್ಕವರಿಗೆ ಈ ವಿಷಯ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ’ ಎಂದು ಶರಣಪ್ಪ ಹೇಳಿದರು.