<p><strong>ಕಲಬುರಗಿ</strong>: ರಕ್ಷಾ ಬಂಧನ ಆಚರಿಸಲು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಿಂದ ತವರು ಮನೆ ಕಲಬುರಗಿಗೆ ಬಂದಿದ್ದ ಮಹಿಳೆಯೊಬ್ಬರ ಚಿನ್ನ–ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕಾವೇರಿ ಮೇಸ್ತ್ರಿ ಆಭರಣ ಕಳೆದುಕೊಂಡವರು. </p>.<p>‘ರಕ್ಷಾ ಬಂಧನ ಹಬ್ಬಕ್ಕಾಗಿ ನಾನು ಮತ್ತು ನನ್ನ ಮಗ ಇಬ್ಬರೂ ಗಂಡನ ಮನೆಯಾದ ಮಾಧ್ವಾರದಿಂದ ಯಾದಗಿರಿಗೆ ಅಲ್ಲಿಂದ ಬಸ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ತಲುಪಿದೆ. ಲಾಲಗೇರಿ ಕ್ರಾಸ್ ಹತ್ತಿರದ ನನ್ನ ತಾಯಿ ಮನೆಗೆ ಹೋಗಲು ಆಟೊ ಹತ್ತಿದೆ. ನನ್ನ ಪಕ್ಕನೆ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು ಬಂದು ಕುಳಿತರು. ನಂತರ ಆಟೊ ಲಾಲಗೇರಿ ಕ್ರಾಸ್ ತಲುಪಿದಾಗ ಎಲ್ಲರೂ ಇಳಿದ ಹೋದೆವು. ರಾತ್ರಿ 9 ಗಂಟೆ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರೆ ಚಿನ್ನ–ಬೆಳ್ಳಿ ಆಭರಣಗಳು ಇರಲಿಲ್ಲ. 40 ಗ್ರಾಂ ಬಂಗಾರದ ತಾಳಿ ಚೈನ್, 10 ಗ್ರಾಂ ಬಂಗಾರದ 2 ಸುತ್ತುಂಗುರ, 10 ಗ್ರಾಂ ಬಂಗಾರದ ಒಂದು ಹರಳಿನ ಉಂಗುರ, 6 ಗ್ರಾಂ ಬಂಗಾರದ 2 ಕಿವಿಯೋಲೆ, 100 ಗ್ರಾಂ ಬೆಳ್ಳಿಯ ಕಾಲ ಖಡಗ, 50 ಗ್ರಾಂ ಬೆಳ್ಳಿಯ ಕಾಲ ಖಡಗ ಹೀಗೆ ಒಟ್ಟು 66 ಗ್ರಾಂ ಬಂಗಾರದ ಆಭರಣಗಳು ಹಾಗೂ 150 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು ₹ 4 ಲಕ್ಷ ಮೌಲ್ಯದ ಆಭರಣಗಳು ಕಳುವಾಗಿವೆ’ ಎಂದು ಕಾವೇರಿ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಅಪಘಾತ; ಸಾವು</strong></p>.<p>ಕಲಬುರಗಿ ತಾಲ್ಲೂಕಿನ ಸಾವಳಗಿ ಗ್ರಾಮದ ಸ್ಟೇಷನ್ ರೋಡ್ ಕ್ರಾಸ್ ಹತ್ತಿರ ವ್ಯಾನ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಮೃತಪಟ್ಟಿದ್ದು, ಬೈಕ್ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಹುಣಸಿಹಡಗಿಲ ಗ್ರಾಮದ ಮಲ್ಲಿಕಾರ್ಜುನ ದಣ್ಣೂರ (30) ಮೃತರು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಇಸ್ಪೀಟ್ ಜೂಜಾಟ</strong></p>.<p>ಕಲಬುರಗಿ: ನಗರದ ಮರಗಮ್ಮ ದೇವಸ್ಥಾನ ಹಿಂದಿನ ಖಾಲಿ ಜಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ಪೊಲೀಸರು, ಒಟ್ಟು ₹ 65 ಸಾವಿರ ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಈ ಸಂಬಂಧ ಎಂಟು ಮಂದಿ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ರಕ್ಷಾ ಬಂಧನ ಆಚರಿಸಲು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಿಂದ ತವರು ಮನೆ ಕಲಬುರಗಿಗೆ ಬಂದಿದ್ದ ಮಹಿಳೆಯೊಬ್ಬರ ಚಿನ್ನ–ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಕಾವೇರಿ ಮೇಸ್ತ್ರಿ ಆಭರಣ ಕಳೆದುಕೊಂಡವರು. </p>.<p>‘ರಕ್ಷಾ ಬಂಧನ ಹಬ್ಬಕ್ಕಾಗಿ ನಾನು ಮತ್ತು ನನ್ನ ಮಗ ಇಬ್ಬರೂ ಗಂಡನ ಮನೆಯಾದ ಮಾಧ್ವಾರದಿಂದ ಯಾದಗಿರಿಗೆ ಅಲ್ಲಿಂದ ಬಸ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ತಲುಪಿದೆ. ಲಾಲಗೇರಿ ಕ್ರಾಸ್ ಹತ್ತಿರದ ನನ್ನ ತಾಯಿ ಮನೆಗೆ ಹೋಗಲು ಆಟೊ ಹತ್ತಿದೆ. ನನ್ನ ಪಕ್ಕನೆ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು ಬಂದು ಕುಳಿತರು. ನಂತರ ಆಟೊ ಲಾಲಗೇರಿ ಕ್ರಾಸ್ ತಲುಪಿದಾಗ ಎಲ್ಲರೂ ಇಳಿದ ಹೋದೆವು. ರಾತ್ರಿ 9 ಗಂಟೆ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರೆ ಚಿನ್ನ–ಬೆಳ್ಳಿ ಆಭರಣಗಳು ಇರಲಿಲ್ಲ. 40 ಗ್ರಾಂ ಬಂಗಾರದ ತಾಳಿ ಚೈನ್, 10 ಗ್ರಾಂ ಬಂಗಾರದ 2 ಸುತ್ತುಂಗುರ, 10 ಗ್ರಾಂ ಬಂಗಾರದ ಒಂದು ಹರಳಿನ ಉಂಗುರ, 6 ಗ್ರಾಂ ಬಂಗಾರದ 2 ಕಿವಿಯೋಲೆ, 100 ಗ್ರಾಂ ಬೆಳ್ಳಿಯ ಕಾಲ ಖಡಗ, 50 ಗ್ರಾಂ ಬೆಳ್ಳಿಯ ಕಾಲ ಖಡಗ ಹೀಗೆ ಒಟ್ಟು 66 ಗ್ರಾಂ ಬಂಗಾರದ ಆಭರಣಗಳು ಹಾಗೂ 150 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು ₹ 4 ಲಕ್ಷ ಮೌಲ್ಯದ ಆಭರಣಗಳು ಕಳುವಾಗಿವೆ’ ಎಂದು ಕಾವೇರಿ ದೂರಿನಲ್ಲಿ ತಿಳಿಸಿದ್ದಾರೆ.</p>.<p>ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಅಪಘಾತ; ಸಾವು</strong></p>.<p>ಕಲಬುರಗಿ ತಾಲ್ಲೂಕಿನ ಸಾವಳಗಿ ಗ್ರಾಮದ ಸ್ಟೇಷನ್ ರೋಡ್ ಕ್ರಾಸ್ ಹತ್ತಿರ ವ್ಯಾನ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಮೃತಪಟ್ಟಿದ್ದು, ಬೈಕ್ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.</p>.<p>ಹುಣಸಿಹಡಗಿಲ ಗ್ರಾಮದ ಮಲ್ಲಿಕಾರ್ಜುನ ದಣ್ಣೂರ (30) ಮೃತರು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಇಸ್ಪೀಟ್ ಜೂಜಾಟ</strong></p>.<p>ಕಲಬುರಗಿ: ನಗರದ ಮರಗಮ್ಮ ದೇವಸ್ಥಾನ ಹಿಂದಿನ ಖಾಲಿ ಜಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ಪೊಲೀಸರು, ಒಟ್ಟು ₹ 65 ಸಾವಿರ ಜಪ್ತಿ ಮಾಡಿಕೊಂಡಿದ್ದಾರೆ.</p>.<p>ಈ ಸಂಬಂಧ ಎಂಟು ಮಂದಿ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>