ಸ್ಥಳದಲ್ಲಿದ್ದ ರೈತರಿಬ್ಬರಿಗೆ ಪರಿಹಾರ ಸಿಕ್ಕಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಬಯಸಿದರು. ಆ ರೈತರ ಬದಲು ಬೇರೆಯವರ ಮಾಹಿತಿ ನೀಡಲು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ರಾಜಾ ಪಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಹಾಗೂ ಕಪನೂರ ಗ್ರಾಮದ ಪಿಡಿಓ ಮುಂದಾದರು. ನಮ್ಮ ಭೇಟಿಯ ಬಗ್ಗೆ ಮುಂಚೆಯೇ ನಿಮಗೆ ಮಾಹಿತಿ ಕೊಟ್ಟಿರುತ್ತೇವೆ. ಆದರೂ ನಾವು ಬಯಸಿದ ಮಾಹಿತಿ ಕೊಡಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು.