ಶಿಷ್ಟಾಚಾರ ಉಲ್ಲಂಘನೆ ಕುರಿತು ಸಮಜಾಯಿಷಿ ನೀಡಿದ ಸಂಸದ ಡಾ.ಜಾಧವ, ‘ಕಾರ್ಯಕ್ರಮಕ್ಕೆ ಬಹಳ ಜನ ನಾಯಕರು ಬಂದಿದ್ದರು. ಪ್ರಮುಖ ಮುಖಂಡರು ಬಂದರೆ ಅವರಿಗೆ ವೇದಿಕೆಯಲ್ಲಿ ಜಾಗ ಕಲ್ಪಿಸುವಂತೆ ನಾನೇ ಖುದ್ದಾಗಿ ಮನವಿ ಮಾಡಿದ್ದೆ. ವೇದಿಕೆಯಲ್ಲಿ ಶಿಷ್ಟಾಚಾರದ ಪಟ್ಟಿಯಲ್ಲಿ ಹೆಸರಿಲ್ಲದ ಮಾಜಿ ಸಂಸದ ಡಾ.ಬಸವರಾಜ ಪಾಟೀಲ ಸೇಡಂ, ಮಾಲೀಕಯ್ಯ ಗುತ್ತೇದಾರ ಅವರೂ ಕುಳಿತಿದ್ದರು. ಒಮ್ಮೊಮ್ಮೆ ಹೀಗಾಗುತ್ತದೆ.ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬರಬೇಡಿ ಎಂದು ಹೇಳಿರಲಿಲ್ಲ. ಅವರಿಗೂ ಆಹ್ವಾನ ನೀಡಲಾಗಿತ್ತು’ ಎಂದರು.