<p><strong>ಕಾಳಗಿ:</strong> ಪಟ್ಟಣದಿಂದ ಕಲಬುರಗಿ ನಗರಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕಿಸಲಿದ್ದ ತಾಲ್ಲೂಕಿನ ಗೋಟೂರ-ಚಿಂಚೋಳಿ (ಎಚ್) ನಡುವಿನ 5 ಕಿ.ಮೀ ಜಿಲ್ಲಾ ಮುಖ್ಯರಸ್ತೆ 3-4 ವರ್ಷಗಳಿಂದ ಬಂದ್ ಆಗಿದೆ.</p>.<p>ಆದರೆ ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಮತ್ತಿತರ ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.</p>.<p>ಕಾಳಗಿ–ಕಲಬುರಗಿ ನಡುವೆ ಸಂಚರಿಸಲು ಒಂದು ಮಾಡಬೂಳ, ಇನ್ನೊಂದು ಚಿಂಚೋಳಿ (ಎಚ್) ಮಾರ್ಗವಿದೆ. ಮಾರ್ಕೆಟ್, ಹೆಬ್ಬಾಳ ಹೋಗುವ ವಾಹನಗಳಿಗೆ ಚಿಂಚೋಳಿ (ಎಚ್) ರಸ್ತೆ ಮಾರ್ಗವೇ ಅತ್ಯಂತ ಸಮೀಪವಾಗಿದೆ.</p>.<p>ಆದರೆ ಈ ರಸ್ತೆ ಮಳೆನೀರಿನ ಹಳ್ಳದ ಪ್ರವಾಹಕ್ಕೆ ಕೆಲವೊಂದಿಷ್ಟು ಕೊಚ್ಚಿಹೋಗಿದೆ. ಆಗ ಇದು ದುರಸ್ತಿಗೊಳ್ಳದೆ ಉಳಿದುಕೊಂಡಿದೆ. ಅಷ್ಟರಲ್ಲೇ ಗೋಟೂರ ಗ್ರಾಮದ ರೈತರೊಬ್ಬರು ಈ ರಸ್ತೆ ನಮ್ಮ ಜಮೀನಿನಲ್ಲಿದೆ. ಸರ್ಕಾರ ನಮಗೆ ಪರಿಹಾರ ಕೊಟ್ಟಿಲ್ಲ ಎಂದು ತಕರಾರು ತೆಗೆದಿದ್ದರು ಎನ್ನಲಾಗಿದೆ. ಆದರೂ ಈ ಮಧ್ಯೆ ಸಣ್ಣಪುಟ್ಟ ವಾಹನಗಳು ಹಾಗೊ ಹೀಗೊ ಸಂಚರಿಸುತ್ತಿದ್ದವು. ಸರ್ಕಾರಿ ಬಸ್, ದೊಡ್ಡ ವಾಹನಗಳು ಮಾತ್ರ ಮಾರ್ಗ ಬದಲಾಯಿಸಿದವು. ಈಚೆಗೆ ಗೋಟೂರ ಗ್ರಾಮದ ಆ ರೈತ ಮಾರ್ಗಮಧ್ಯೆ ಬ್ರಿಡ್ಜ್ ಬಳಿ ರಸ್ತೆಗೆ ಸಿಕ್ಕಾಪಟ್ಟೆ ಮುಳ್ಳು ಬಡಿದು ಸಂಚರಿಸಲು ಬರದಂತೆ ಸಂಪೂರ್ಣ ಬಂದ್ ಮಾಡಿದ್ದಾರೆ.</p>.<p>ಮೊದಲೇ ಪ್ರವಾಹಕ್ಕೆ ರಸ್ತೆ ಕೊಚ್ಚಿಹೋಗಿ ದುರಸ್ತಿಯಾಗದೆ 5 ಕಿ.ಮೀ ಪೂರ್ತಿ ಹಾಳಾಗಿದೆ. ಈಗ ಮುಳ್ಳು ಬಡಿದು ರಸ್ತೆಯೇ ಸಂಪೂರ್ಣ ಬಂದ್ ಮಾಡಿದ್ದರಿಂದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ರಸ್ತೆ ಮಾರ್ಗದ ಗೋಟೂರ ಕೃಷಿಕರು 3-4 ಕಿ.ಮೀ ಬದಲು ಅಶೋಕನಗರ, ಹೆಬ್ಬಾಳ, ಚಿಂಚೋಳಿ (ಎಚ್) ಮಾರ್ಗವಾಗಿ 12-14 ಕಿ.ಮೀ ಸುತ್ತಿಬಳಸಿ ತಮ್ಮ ಹೊಲಗಳಿಗೆ ಬರುವಂತಾಗಿದೆ.</p>.<p>ಹಳೆ ಹೆಬ್ಬಾಳ, ಚಿಂಚೋಳಿ (ಎಚ್) ಜನರು ಕಾಳಗಿಗೆ ಬರಲು ಸುಗೂರ (ಕೆ) ಮಾರ್ಗವಾಗಿ 3 ಕಿ.ಮೀ ಹೆಚ್ಚಿಗೆ ಕ್ರಮಿಸಬೇಕಾಗಿದೆ. ಕಾಳಗಿ ಜನರು ಕಲಬುರಗಿ ಮಾರ್ಕೆಟ್ ಹೋಗಲು ಮತ್ತು ಬಣಬಿ, ಹುಳಗೇರಾ, ಕಂದಗೂಳ, ಕಲ್ಲಹಿಪ್ಪರಗಿ, ಶೆಳ್ಳಗಿ, ಹಳೆ ಹೆಬ್ಬಾಳ, ಹೇರೂರ (ಕೆ) ಜನರು ಸುತ್ತಿಬಳಸಿ ಪರದಾಡುವಂತಾಗಿದೆ.</p>.<p>‘ಸಂಬಂಧಪಟ್ಟ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಿ, ನಮ್ಮ ತೊಂದರೆ ತಪ್ಪಿಸಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಚಿಂಚೋಳಿ (ಎಚ್) ಗ್ರಾಮದ ಮಶಾಖ ಪಟೇಲ್ ದಂಡೋತಿ ಮನವಿ ಮಾಡಿದ್ದಾರೆ.</p>.<div><blockquote>ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಲಾಗಿದೆ. ಅವರು ರಸ್ತೆಯಲ್ಲಿ ಮುಳ್ಳುಹಾಕಿದ ರೈತನೊಂದಿಗೆ ಚರ್ಚಿಸಿದ್ದಾರೆ </blockquote><span class="attribution">ಶಿವಕುಮಾರ ಕಮಕನೂರ ಗೋಟೂರ ಗ್ರಾ.ಪಂ ಅಧ್ಯಕ್ಷ</span></div>.<div><blockquote>ನಮ್ಮೂರಿನ 15–20 ಜನರು ಈಚೆಗೆ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ರಸ್ತೆ ಸುಗಮಗೊಳಿಸುವಂತೆ ಕೋರಿದ್ದೇವೆ. ಅವರು ಸಂಬಂಧಿತರ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ </blockquote><span class="attribution">ಅಣ್ಣರಾವ ಸಲಗರ ಚಿಂಚೋಳಿ (ಎಚ್) ಗ್ರಾಮಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಪಟ್ಟಣದಿಂದ ಕಲಬುರಗಿ ನಗರಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕಿಸಲಿದ್ದ ತಾಲ್ಲೂಕಿನ ಗೋಟೂರ-ಚಿಂಚೋಳಿ (ಎಚ್) ನಡುವಿನ 5 ಕಿ.ಮೀ ಜಿಲ್ಲಾ ಮುಖ್ಯರಸ್ತೆ 3-4 ವರ್ಷಗಳಿಂದ ಬಂದ್ ಆಗಿದೆ.</p>.<p>ಆದರೆ ಈ ಬಗ್ಗೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಮತ್ತಿತರ ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ.</p>.<p>ಕಾಳಗಿ–ಕಲಬುರಗಿ ನಡುವೆ ಸಂಚರಿಸಲು ಒಂದು ಮಾಡಬೂಳ, ಇನ್ನೊಂದು ಚಿಂಚೋಳಿ (ಎಚ್) ಮಾರ್ಗವಿದೆ. ಮಾರ್ಕೆಟ್, ಹೆಬ್ಬಾಳ ಹೋಗುವ ವಾಹನಗಳಿಗೆ ಚಿಂಚೋಳಿ (ಎಚ್) ರಸ್ತೆ ಮಾರ್ಗವೇ ಅತ್ಯಂತ ಸಮೀಪವಾಗಿದೆ.</p>.<p>ಆದರೆ ಈ ರಸ್ತೆ ಮಳೆನೀರಿನ ಹಳ್ಳದ ಪ್ರವಾಹಕ್ಕೆ ಕೆಲವೊಂದಿಷ್ಟು ಕೊಚ್ಚಿಹೋಗಿದೆ. ಆಗ ಇದು ದುರಸ್ತಿಗೊಳ್ಳದೆ ಉಳಿದುಕೊಂಡಿದೆ. ಅಷ್ಟರಲ್ಲೇ ಗೋಟೂರ ಗ್ರಾಮದ ರೈತರೊಬ್ಬರು ಈ ರಸ್ತೆ ನಮ್ಮ ಜಮೀನಿನಲ್ಲಿದೆ. ಸರ್ಕಾರ ನಮಗೆ ಪರಿಹಾರ ಕೊಟ್ಟಿಲ್ಲ ಎಂದು ತಕರಾರು ತೆಗೆದಿದ್ದರು ಎನ್ನಲಾಗಿದೆ. ಆದರೂ ಈ ಮಧ್ಯೆ ಸಣ್ಣಪುಟ್ಟ ವಾಹನಗಳು ಹಾಗೊ ಹೀಗೊ ಸಂಚರಿಸುತ್ತಿದ್ದವು. ಸರ್ಕಾರಿ ಬಸ್, ದೊಡ್ಡ ವಾಹನಗಳು ಮಾತ್ರ ಮಾರ್ಗ ಬದಲಾಯಿಸಿದವು. ಈಚೆಗೆ ಗೋಟೂರ ಗ್ರಾಮದ ಆ ರೈತ ಮಾರ್ಗಮಧ್ಯೆ ಬ್ರಿಡ್ಜ್ ಬಳಿ ರಸ್ತೆಗೆ ಸಿಕ್ಕಾಪಟ್ಟೆ ಮುಳ್ಳು ಬಡಿದು ಸಂಚರಿಸಲು ಬರದಂತೆ ಸಂಪೂರ್ಣ ಬಂದ್ ಮಾಡಿದ್ದಾರೆ.</p>.<p>ಮೊದಲೇ ಪ್ರವಾಹಕ್ಕೆ ರಸ್ತೆ ಕೊಚ್ಚಿಹೋಗಿ ದುರಸ್ತಿಯಾಗದೆ 5 ಕಿ.ಮೀ ಪೂರ್ತಿ ಹಾಳಾಗಿದೆ. ಈಗ ಮುಳ್ಳು ಬಡಿದು ರಸ್ತೆಯೇ ಸಂಪೂರ್ಣ ಬಂದ್ ಮಾಡಿದ್ದರಿಂದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ರಸ್ತೆ ಮಾರ್ಗದ ಗೋಟೂರ ಕೃಷಿಕರು 3-4 ಕಿ.ಮೀ ಬದಲು ಅಶೋಕನಗರ, ಹೆಬ್ಬಾಳ, ಚಿಂಚೋಳಿ (ಎಚ್) ಮಾರ್ಗವಾಗಿ 12-14 ಕಿ.ಮೀ ಸುತ್ತಿಬಳಸಿ ತಮ್ಮ ಹೊಲಗಳಿಗೆ ಬರುವಂತಾಗಿದೆ.</p>.<p>ಹಳೆ ಹೆಬ್ಬಾಳ, ಚಿಂಚೋಳಿ (ಎಚ್) ಜನರು ಕಾಳಗಿಗೆ ಬರಲು ಸುಗೂರ (ಕೆ) ಮಾರ್ಗವಾಗಿ 3 ಕಿ.ಮೀ ಹೆಚ್ಚಿಗೆ ಕ್ರಮಿಸಬೇಕಾಗಿದೆ. ಕಾಳಗಿ ಜನರು ಕಲಬುರಗಿ ಮಾರ್ಕೆಟ್ ಹೋಗಲು ಮತ್ತು ಬಣಬಿ, ಹುಳಗೇರಾ, ಕಂದಗೂಳ, ಕಲ್ಲಹಿಪ್ಪರಗಿ, ಶೆಳ್ಳಗಿ, ಹಳೆ ಹೆಬ್ಬಾಳ, ಹೇರೂರ (ಕೆ) ಜನರು ಸುತ್ತಿಬಳಸಿ ಪರದಾಡುವಂತಾಗಿದೆ.</p>.<p>‘ಸಂಬಂಧಪಟ್ಟ ಮೇಲಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಿ, ನಮ್ಮ ತೊಂದರೆ ತಪ್ಪಿಸಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಚಿಂಚೋಳಿ (ಎಚ್) ಗ್ರಾಮದ ಮಶಾಖ ಪಟೇಲ್ ದಂಡೋತಿ ಮನವಿ ಮಾಡಿದ್ದಾರೆ.</p>.<div><blockquote>ತಹಶೀಲ್ದಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಮನವಿ ಮಾಡಲಾಗಿದೆ. ಅವರು ರಸ್ತೆಯಲ್ಲಿ ಮುಳ್ಳುಹಾಕಿದ ರೈತನೊಂದಿಗೆ ಚರ್ಚಿಸಿದ್ದಾರೆ </blockquote><span class="attribution">ಶಿವಕುಮಾರ ಕಮಕನೂರ ಗೋಟೂರ ಗ್ರಾ.ಪಂ ಅಧ್ಯಕ್ಷ</span></div>.<div><blockquote>ನಮ್ಮೂರಿನ 15–20 ಜನರು ಈಚೆಗೆ ಜಿಲ್ಲಾಧಿಕಾರಿಗೆ ಭೇಟಿ ಮಾಡಿ ರಸ್ತೆ ಸುಗಮಗೊಳಿಸುವಂತೆ ಕೋರಿದ್ದೇವೆ. ಅವರು ಸಂಬಂಧಿತರ ಗಮನಕ್ಕೆ ತಂದು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ </blockquote><span class="attribution">ಅಣ್ಣರಾವ ಸಲಗರ ಚಿಂಚೋಳಿ (ಎಚ್) ಗ್ರಾಮಸ್ಥ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>