ಪ್ರತಿ ವರ್ಷ ಏಪ್ರಿಲ್ ಅಂತ್ಯದವರೆಗೆ ಚಂದ್ರಂಪಳ್ಳಿ ಜಲಾಶಯದಿಂದ ಕಾಲುವೆ ಜಮೀನಿಗೆ ನೀರು ಬಿಡಲಾಗುತ್ತಿತ್ತು. ಇದನ್ನೇ ನಂಬಿ ಪ್ರಸಕ್ತ ವರ್ಷ ಅಚ್ಚುಕಟ್ಟು ಪ್ರದೇಶದ ವಿವಿಧೆಡೆ ರೈತರು ಮೆಕ್ಕೆಜೋಳ, ಈರುಳ್ಳಿ, ಚಿಯಾ, ಶೇಂಗಾ ಮತ್ತಿತರರು ಬೆಳೆಗಳ ಬೇಸಾಯ ನಡೆಸುತ್ತಿದ್ದಾರೆ. ಆದರೆ ಕಳೆದ 15 ದಿನಗಳಿಂದ ನೀರು ಪೂರೈಕೆ ನಿಲ್ಲಿಸಿದ್ದರಿಂದ ಬೆಳೆಗಳು ಒಣಗುತ್ತಿವೆ ಎಂದು ಈರುಳ್ಳಿ ಬೆಳೆಗಾರ ಶಿವಕುಮಾರ ಪೋಚಾಲಿ ತಿಳಿಸಿದ್ದಾರೆ.