<p><strong>ಕಲಬುರ್ಗಿ:</strong> ಕಲಬುರ್ಗಿ, ಬೀದರ್, ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಹಿಂದೆ ಸದಸ್ಯತ್ವ ಪಡೆದು ಈಗ ನಿಷ್ಕ್ರಿಯವಾಗಿರುವ ಕನಿಷ್ಠ 100 ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಪ್ರಯತ್ನ ನಡೆದಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಪಾಟೀಲ ಹೇಳಿದರು.</p>.<p>ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ 450 ಸಂಘಗಳು ನಿತ್ಯ ಹಾಲು ಪೂರೈಕೆ ಮಾಡುತ್ತಿವೆ. 240 ಸಂಘಗಳು ಸ್ಥಗಿತಗೊಂಡಿವೆ. ಅವುಗಳ ಪೈಕಿ ನನ್ನ ಅಧಿಕಾರವಧಿಯಲ್ಲಿ 100 ಸಂಘಗಳ ಪುನಶ್ಚೇತನಕ್ಕೆ ಯತ್ನಿಸಲಾಗುವುದು’ ಎಂದರು.</p>.<p>ಹಾಲು ಉತ್ಪಾದಕರಿಗೆ ಸೂಕ್ತ ತರಬೇತಿ ಕೊಡಿಸುವ ಮೂಲಕ ಹಾಲಿನ ಉತ್ಪನ್ನವನ್ನು ಹೆಚ್ಚಿಸುವ, ಉತ್ತಮ ಗುಣಮಟ್ಟದ ಮೇವುಗಳನ್ನು ರಾಸುಗಳಿಗೆ ಹಾಕುವ ಕುರಿತು ತಿಳಿವಳಿಕೆ ಕೊಡಿಸಲಾಗುತ್ತಿದೆ. ₹ 7.20 ಲಕ್ಷ ವೆಚ್ಚದಲ್ಲಿ 72 ಮೇವು ಕಟಾವು ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಿ ಹಾಲು ಉತ್ಪಾದಕರಿಗೆ ವಿತರಿಸಲಾಗಿದೆ’ ಎಂದು ಹೇಳಿದರು.</p>.<p>ಕಲಬೆರಕೆ ಹಾಲು ಪ್ರವೇಶಕ್ಕೆ ತಡೆ ನೀಡಲು ಒತ್ತಾಯ: ಮಹಾರಾಷ್ಟ್ರದಿಂದ ಅಪಾಯಕಾರಿ, ಕ್ಯಾನ್ಸರ್ಕಾರಕ ಕಲಬೆರಕೆ ಹಾಲು ಜಿಲ್ಲೆಯನ್ನು ಪ್ರವೇಶಿಸುತ್ತಿದೆ. ಇದನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ನೇರವಾಗಿ ಕಲಬೆರಕೆ ಹಾಲನ್ನು ತಡೆಯುವ ಅಧಿಕಾರ ಒಕ್ಕೂಟಕ್ಕೆ ಇಲ್ಲ ಎಂದರು.</p>.<p>ಈಗಿರುವ ಸಹಕಾರ ಸಂಘಗಳಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚು ಹಾಲನ್ನು ಉತ್ಪಾದಿಸುವಂತೆ ತಿಳಿಸಲಾಗಿದೆ. ಉತ್ತಮ ತಳಿಯ ಮೇವನ್ನು ಬೆಳೆಯುವುಂತೆ ಸಲಹೆ ನೀಡಲಾಗಿದೆ. ಮೇವಿನ ಬೀಜಗಳನ್ನೂ ತರಿಸಿಕೊಡಲಾಗುತ್ತಿದೆ. ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಮೇವಿನ ಪ್ರಾತ್ಯಕ್ಷಿಕೆಯನ್ನೂ ಮಾಡಲಾಗಿದೆ ಎಂದು ಹೇಳಿದರು.</p>.<p>ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ವಿಠ್ಠಲ ರೆಡ್ಡಿ, ಭೀಮರಾವ್ ಬಳತೆ, ಈರಣ್ಣ, ರೇವಣಸಿದ್ದಪ್ಪ ಪಾಟೀಲ, ಶ್ರೀಕಾಂತ ದಾನಿ, ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಕಮಕೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ಕಲಬುರ್ಗಿ, ಬೀದರ್, ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಹಿಂದೆ ಸದಸ್ಯತ್ವ ಪಡೆದು ಈಗ ನಿಷ್ಕ್ರಿಯವಾಗಿರುವ ಕನಿಷ್ಠ 100 ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಪ್ರಯತ್ನ ನಡೆದಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಪಾಟೀಲ ಹೇಳಿದರು.</p>.<p>ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ 450 ಸಂಘಗಳು ನಿತ್ಯ ಹಾಲು ಪೂರೈಕೆ ಮಾಡುತ್ತಿವೆ. 240 ಸಂಘಗಳು ಸ್ಥಗಿತಗೊಂಡಿವೆ. ಅವುಗಳ ಪೈಕಿ ನನ್ನ ಅಧಿಕಾರವಧಿಯಲ್ಲಿ 100 ಸಂಘಗಳ ಪುನಶ್ಚೇತನಕ್ಕೆ ಯತ್ನಿಸಲಾಗುವುದು’ ಎಂದರು.</p>.<p>ಹಾಲು ಉತ್ಪಾದಕರಿಗೆ ಸೂಕ್ತ ತರಬೇತಿ ಕೊಡಿಸುವ ಮೂಲಕ ಹಾಲಿನ ಉತ್ಪನ್ನವನ್ನು ಹೆಚ್ಚಿಸುವ, ಉತ್ತಮ ಗುಣಮಟ್ಟದ ಮೇವುಗಳನ್ನು ರಾಸುಗಳಿಗೆ ಹಾಕುವ ಕುರಿತು ತಿಳಿವಳಿಕೆ ಕೊಡಿಸಲಾಗುತ್ತಿದೆ. ₹ 7.20 ಲಕ್ಷ ವೆಚ್ಚದಲ್ಲಿ 72 ಮೇವು ಕಟಾವು ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ಖರೀದಿಸಿ ಹಾಲು ಉತ್ಪಾದಕರಿಗೆ ವಿತರಿಸಲಾಗಿದೆ’ ಎಂದು ಹೇಳಿದರು.</p>.<p>ಕಲಬೆರಕೆ ಹಾಲು ಪ್ರವೇಶಕ್ಕೆ ತಡೆ ನೀಡಲು ಒತ್ತಾಯ: ಮಹಾರಾಷ್ಟ್ರದಿಂದ ಅಪಾಯಕಾರಿ, ಕ್ಯಾನ್ಸರ್ಕಾರಕ ಕಲಬೆರಕೆ ಹಾಲು ಜಿಲ್ಲೆಯನ್ನು ಪ್ರವೇಶಿಸುತ್ತಿದೆ. ಇದನ್ನು ತಡೆಯಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ನೇರವಾಗಿ ಕಲಬೆರಕೆ ಹಾಲನ್ನು ತಡೆಯುವ ಅಧಿಕಾರ ಒಕ್ಕೂಟಕ್ಕೆ ಇಲ್ಲ ಎಂದರು.</p>.<p>ಈಗಿರುವ ಸಹಕಾರ ಸಂಘಗಳಿಗೆ ಉತ್ತೇಜನ ನೀಡುವ ಮೂಲಕ ಹೆಚ್ಚು ಹಾಲನ್ನು ಉತ್ಪಾದಿಸುವಂತೆ ತಿಳಿಸಲಾಗಿದೆ. ಉತ್ತಮ ತಳಿಯ ಮೇವನ್ನು ಬೆಳೆಯುವುಂತೆ ಸಲಹೆ ನೀಡಲಾಗಿದೆ. ಮೇವಿನ ಬೀಜಗಳನ್ನೂ ತರಿಸಿಕೊಡಲಾಗುತ್ತಿದೆ. ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಮೇವಿನ ಪ್ರಾತ್ಯಕ್ಷಿಕೆಯನ್ನೂ ಮಾಡಲಾಗಿದೆ ಎಂದು ಹೇಳಿದರು.</p>.<p>ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ವಿಠ್ಠಲ ರೆಡ್ಡಿ, ಭೀಮರಾವ್ ಬಳತೆ, ಈರಣ್ಣ, ರೇವಣಸಿದ್ದಪ್ಪ ಪಾಟೀಲ, ಶ್ರೀಕಾಂತ ದಾನಿ, ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಕಮಕೇರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>