ಕೆರೆ ಸುತ್ತಮುತ್ತಲಿನ ರೈತರು ಒಂದು ವೇಳೆ ಈಗಿರುವ ಭೂಮಿಯನ್ನು ಸ್ವಚ್ಛಗೊಳಿಸಿ ಉಳುಮೆ ಮಾಡಿದ್ದಲ್ಲಿ ಬೇಸಿಗೆ ದಿನಗಳಲ್ಲಿ ಮತ್ತೇ ಭತ್ತ ಹಾಕಿ ಕೆರೆ ನೀರನ್ನು ಬಳಕೆ ಮಾಡುವ ಇರಾದೆಯನ್ನು ರೈತರು ಹೊಂದಿದ್ದಾರೆ. ಉಭಯ ಕೆರೆಗಳಲ್ಲಿ ಸಾಕಷ್ಟು ನೀರು ಸಂಗ್ರವಿದ್ದು ಪ್ರಾಣಿ, ಪಕ್ಷಿಗಳಿಗೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತಿದೆ. ಜೊತೆಗೆ ಸರ್ಕಾರ ಈ ಉಭಯ ಕೆರೆಗಳತ್ತ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಸುತ್ತಲೂ ಗಡಿ ಕಟ್ಟಿ, ನೀರನ್ನೂ ಪೋಲಾಗದಂತೆ ನೋಡಿಕೊಳ್ಳುವುದು ಬಹಳ ಉತ್ತಮ ಎನ್ನುತ್ತಾರೆ ರೈತರು.