ಫೆ. 5, 6 ಹಾಗೂ 7ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಸ್ತು, ಸ್ವಚ್ಛತೆ, ಸಹಾಯ, ಮಾಹಿತಿ ವಿನಿಮಯ ಸೇರಿದಂತೆ ಅತಿ ಮುಖ್ಯ ಜವಾಬ್ದಾರಿಗಳನ್ನು ಹೊರಲು ಈ ಯುವಜನರ ತಂಡ ಸನ್ನದ್ಧವಾಗಿದೆ. ಈಗಾಗಲೇ ಪ್ರತಿಯೊಬ್ಬ ಸದಸ್ಯರ ಹೆಸರನ್ನೂ ನೋಂದಾಯಿಸಿಕೊಂಡಿದ್ದು, ಎಲ್ಲರಿಗೂ ಮಾಹಿತಿ ರವಾನಿಸಲಾಗಿದೆ.