‘ಮಾರುಕಟ್ಟೆಯಲ್ಲಿ ಸರ್ಕಾರದ ಜಾಗ 25 ವರ್ಷಗಳಿಂದ ಖಾಲಿ ಇದ್ದು, ಅನಿಧಿಕೃತ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಸರ್ಕಾರಕ್ಕೆ ಯಾವುದೇ ಆದಾಯ ಬರುವುದಿಲ್ಲ ಎಂದು ನಂ.145, 146, 147ರ ನಿವೇಶನಗಳನ್ನು ಖರೀದಿಸಲು ಅಥವಾ 99 ವರ್ಷಗಳ ಲೀಸ್ಗೆ ಕೊಡುವಂತೆ ವಿಶ್ವನಾಥ ನಾಡಗೌಡ ಎಂಬುವವರು, ಅಂದಿನ ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸಚಿವರಿಂದ ಅನುಮೋದನೆ ಸಿಕ್ಕಿತ್ತು. ನಂತರ ಆಗಿನ ಸ್ಥಳೀಯ ಶಾಸಕರು ಖರೀದಿದಾರರ ಪರವಾಗಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಿಫಾರಸು ಪತ್ರ ಬರೆದು, ಅಧಿಕಾರ ದುರುಪಯೋಗ ಪಡೆಸಿಕೊಂಡು ಸರ್ಕಾರದ ನಿವೇಶನಗಳನ್ನು ಮಾರಾಟ ಮಾಡಿದ್ದರು’ ಎಂದರು.