<p>ಪ್ರಜಾವಾಣಿ ವಾರ್ತೆ</p>.<p>ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಬ್ರೆಹಿಲೂಲ್ ಷಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆಯ ಭಕ್ತಿ ಶ್ರದ್ಧೆಯಿಂದ ಭಾನುವಾರ ಜರುಗಿತು.<br /> ಉರುಸ್ ಅಂಗವಾಗಿ ದರ್ಗಾಕ್ಕೆ ವಿದ್ಯುದ್ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.</p>.<p>ಸಂಪ್ರದಾಯದಂತೆ ಜಹಿರುದ್ದೀನ್ ಪಟೇಲ ಮನೆಯಿಂದ ಗಂಧದ ಮೆರವಣಿಗೆ ಪ್ರಾರಂಭವಾಯಿತು. ಮುಖ್ಯ ಬೀದಿಗಳ ಮೂಲಕ ದೇವರನಾಮ ಸ್ಮರಣೆ ಜತೆಗೆ ಮೀಲಾದ ಹಾಡುವ ತಂಡ, ಹಲಗಿ, ಬ್ಯಾಂಡ್ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಗಂಧದ ಚಾದರನ್ನು ದರ್ಗಾಕ್ಕೆ ತರಲಾಯಿತು.</p>.<p>ಪ್ರಾರ್ಥನೆ ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಿದರು. ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ಹರಕೆ ಸಲ್ಲಿಸಿದರು.</p>.<p>ಮರಳಿ ಮೆರವಣಿಗೆ ಮೂಲಕ ಸಂದಲ್ ಸಾಹೇಬ, ಮೈಬೂಬಸುಭಾನಿ ದರ್ಗಾ, ನವಾಬ ಸಾಹೇಬ ಹಾಗೂ ಷಾಹ ಹುಸೇನ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪುನಃ ಗಂಧದ ಮೆರವಣಿಗೆಯು ಜಹಿರೋದ್ದಿನ ಪಟೇಲ್ ಅವರ ಮನಗೆ ಬಂದು ಮುಕ್ತಾಯಗೊಂಡಿತು.</p>.<p>ಮೆರವಣಿಗೆಯಲ್ಲಿ ಜಾಮಿಯಾ ಮಜೀದ್ ಮೌಲಾನಾ ಹುಸೇನ್ ಹಾಷ್ಮಿ ಜಹಿರೊದ್ದೀನ್ ಪಟೇಲ್, ಚಾಂದಪಾಷಾ ಮೋಮಿನ, ರಹೀಂ ಸಾಬ್, ತಯ್ಯಬ ಮೋಮೀನ, ಜಾಕೀರ ಪಟೇಲ, ಮನ್ನಾನ ಮೋಮಿನ, ರಜಾಕ ಪಟೇಲ, ರೋಷನ್ ಆಲಿ ಮೋಮಿನ,ಅಹ್ಮದ ಖಾನ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಚಿಂಚೋಳಿ: ತಾಲೂಕಿನ ಸುಲೇಪೇಟ ಗ್ರಾಮದ ಬ್ರೆಹಿಲೂಲ್ ಷಾಹ ದರ್ಗಾದ ಉರುಸ್ ಪ್ರಯುಕ್ತ ಗಂಧದ ಮೆರವಣಿಗೆಯ ಭಕ್ತಿ ಶ್ರದ್ಧೆಯಿಂದ ಭಾನುವಾರ ಜರುಗಿತು.<br /> ಉರುಸ್ ಅಂಗವಾಗಿ ದರ್ಗಾಕ್ಕೆ ವಿದ್ಯುದ್ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.</p>.<p>ಸಂಪ್ರದಾಯದಂತೆ ಜಹಿರುದ್ದೀನ್ ಪಟೇಲ ಮನೆಯಿಂದ ಗಂಧದ ಮೆರವಣಿಗೆ ಪ್ರಾರಂಭವಾಯಿತು. ಮುಖ್ಯ ಬೀದಿಗಳ ಮೂಲಕ ದೇವರನಾಮ ಸ್ಮರಣೆ ಜತೆಗೆ ಮೀಲಾದ ಹಾಡುವ ತಂಡ, ಹಲಗಿ, ಬ್ಯಾಂಡ್ಸೆಟ್ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಗಂಧದ ಚಾದರನ್ನು ದರ್ಗಾಕ್ಕೆ ತರಲಾಯಿತು.</p>.<p>ಪ್ರಾರ್ಥನೆ ಸಲ್ಲಿಸುವ ಮೂಲಕ ಗಂಧವನ್ನು ದರ್ಗಾಕ್ಕೆ ಸಮರ್ಪಿಸಿದರು. ಭಕ್ತರು ದರ್ಗಾದ ದರ್ಶನ ಪಡೆದು ವಿಶೇಷ ಹರಕೆ ಸಲ್ಲಿಸಿದರು.</p>.<p>ಮರಳಿ ಮೆರವಣಿಗೆ ಮೂಲಕ ಸಂದಲ್ ಸಾಹೇಬ, ಮೈಬೂಬಸುಭಾನಿ ದರ್ಗಾ, ನವಾಬ ಸಾಹೇಬ ಹಾಗೂ ಷಾಹ ಹುಸೇನ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪುನಃ ಗಂಧದ ಮೆರವಣಿಗೆಯು ಜಹಿರೋದ್ದಿನ ಪಟೇಲ್ ಅವರ ಮನಗೆ ಬಂದು ಮುಕ್ತಾಯಗೊಂಡಿತು.</p>.<p>ಮೆರವಣಿಗೆಯಲ್ಲಿ ಜಾಮಿಯಾ ಮಜೀದ್ ಮೌಲಾನಾ ಹುಸೇನ್ ಹಾಷ್ಮಿ ಜಹಿರೊದ್ದೀನ್ ಪಟೇಲ್, ಚಾಂದಪಾಷಾ ಮೋಮಿನ, ರಹೀಂ ಸಾಬ್, ತಯ್ಯಬ ಮೋಮೀನ, ಜಾಕೀರ ಪಟೇಲ, ಮನ್ನಾನ ಮೋಮಿನ, ರಜಾಕ ಪಟೇಲ, ರೋಷನ್ ಆಲಿ ಮೋಮಿನ,ಅಹ್ಮದ ಖಾನ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>