<p>ಸೇಡಂ (ಕಲಬುರಗಿ ಜಿಲ್ಲೆ): ದುಡಿಮೆಗಾಗಿ ಹೈದರಾಬಾದ್ಗೆ ತೆರಳಿದ್ದ ಸೇಡಂ ತಾಲ್ಲೂಕಿನ ಒಂದೇ ಕುಟುಂಬದ ಐವರು ಸಂಶಯಾಸ್ಪದ ರೀತಿಯಲ್ಲಿ ಹೈದರಾಬಾದ್ನ ಮಿಯಾಪುರ ಪ್ರದೇಶದ ಮನೆಯಲ್ಲಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ.</p>.<p>ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ಉಪ್ಪಾರ (60), ಪತ್ನಿ ವೆಂಕಟಮ್ಮ ಉಪ್ಪಾರ (55), ಅನಂತಪುರ ಗ್ರಾಮದ, ಅಳಿಯ ಅನಿಲ ಉಪ್ಪಾರ(32), ಲಕ್ಷ್ಮಯ್ಯ ಅವರ ಪುತ್ರಿ ಕವಿತಾ ಉಪ್ಪಾರ (24) ಮತ್ತು ಅವರ ಮೊಮ್ಮಗ ಅಪ್ಪು ಉಪ್ಪಾರ (2) ಮೃತಪಟ್ಟಿದ್ದಾರೆ. </p>.<p>ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ಸಂಬಂಧ ಹೈದರಾಬಾದ್ನ ಮಿಯಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಲಕ್ಷ್ಮಯ್ಯ ಕುಟುಂಬದ ಎಲ್ಲರೂ ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಗಾಗುವಷ್ಟರಲ್ಲಿ ಎರಡು ವರ್ಷದ ಮಗು ಸೇರಿ ಐವರು ಒಟ್ಟಿಗೆ ಅಸುನೀಗಿದ್ದಾರೆ’ ಎಂದು ರಂಜೋಳ ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>ಕೆಲಸಕ್ಕಾಗಿ ಹೈದರಾಬಾದ್ಗೆ</p>.<p>ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ದಂಪತಿ ಅನೇಕ ವರ್ಷಗಳಿಂದ ಕೆಲಸಕ್ಕಾಗಿ ಹೈದರಾಬಾದ್ಗೆ ತೆರಳುತ್ತಿದ್ದರು. ಹೈದರಾಬಾದ್ನ ಮಿಯಾಪುರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಲಕ್ಷ್ಮಯ್ಯನವರಿಗೆ ಒಟ್ಟು ನಾಲ್ವರು ಮಕ್ಕಳು. ಒಬ್ಬ ಪುತ್ರ, ಮೂವರು ಪುತ್ರಿಯರು.</p>.<p>‘2ನೇ ಮಗಳು ಕವಿತಾ ಅವರನ್ನು ಅನಂತಪುರದ ಅನಿಲ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆಗಾಗ ಲಕ್ಷ್ಮಯ್ಯ ದಂಪತಿ ರಂಜೋಳ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಈಚೆಗೆ ನಡೆದ ಮೊಹರಂ ಆಚರಣೆ ವೇಳೆ ಕುಟುಂಬ ಸಮೇತ ಬಂದಿದ್ದರು’ ಎಂದು ಗ್ರಾಮಸ್ಥರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೇಡಂ (ಕಲಬುರಗಿ ಜಿಲ್ಲೆ): ದುಡಿಮೆಗಾಗಿ ಹೈದರಾಬಾದ್ಗೆ ತೆರಳಿದ್ದ ಸೇಡಂ ತಾಲ್ಲೂಕಿನ ಒಂದೇ ಕುಟುಂಬದ ಐವರು ಸಂಶಯಾಸ್ಪದ ರೀತಿಯಲ್ಲಿ ಹೈದರಾಬಾದ್ನ ಮಿಯಾಪುರ ಪ್ರದೇಶದ ಮನೆಯಲ್ಲಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದೆ.</p>.<p>ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ಉಪ್ಪಾರ (60), ಪತ್ನಿ ವೆಂಕಟಮ್ಮ ಉಪ್ಪಾರ (55), ಅನಂತಪುರ ಗ್ರಾಮದ, ಅಳಿಯ ಅನಿಲ ಉಪ್ಪಾರ(32), ಲಕ್ಷ್ಮಯ್ಯ ಅವರ ಪುತ್ರಿ ಕವಿತಾ ಉಪ್ಪಾರ (24) ಮತ್ತು ಅವರ ಮೊಮ್ಮಗ ಅಪ್ಪು ಉಪ್ಪಾರ (2) ಮೃತಪಟ್ಟಿದ್ದಾರೆ. </p>.<p>ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ಸಂಬಂಧ ಹೈದರಾಬಾದ್ನ ಮಿಯಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>‘ಲಕ್ಷ್ಮಯ್ಯ ಕುಟುಂಬದ ಎಲ್ಲರೂ ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಬೆಳಗಾಗುವಷ್ಟರಲ್ಲಿ ಎರಡು ವರ್ಷದ ಮಗು ಸೇರಿ ಐವರು ಒಟ್ಟಿಗೆ ಅಸುನೀಗಿದ್ದಾರೆ’ ಎಂದು ರಂಜೋಳ ಗ್ರಾಮಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>ಕೆಲಸಕ್ಕಾಗಿ ಹೈದರಾಬಾದ್ಗೆ</p>.<p>ತಾಲ್ಲೂಕಿನ ರಂಜೋಳ ಗ್ರಾಮದ ಲಕ್ಷ್ಮಯ್ಯ ದಂಪತಿ ಅನೇಕ ವರ್ಷಗಳಿಂದ ಕೆಲಸಕ್ಕಾಗಿ ಹೈದರಾಬಾದ್ಗೆ ತೆರಳುತ್ತಿದ್ದರು. ಹೈದರಾಬಾದ್ನ ಮಿಯಾಪುರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಲಕ್ಷ್ಮಯ್ಯನವರಿಗೆ ಒಟ್ಟು ನಾಲ್ವರು ಮಕ್ಕಳು. ಒಬ್ಬ ಪುತ್ರ, ಮೂವರು ಪುತ್ರಿಯರು.</p>.<p>‘2ನೇ ಮಗಳು ಕವಿತಾ ಅವರನ್ನು ಅನಂತಪುರದ ಅನಿಲ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆಗಾಗ ಲಕ್ಷ್ಮಯ್ಯ ದಂಪತಿ ರಂಜೋಳ ಗ್ರಾಮಕ್ಕೆ ಬಂದು ಹೋಗುತ್ತಿದ್ದರು. ಈಚೆಗೆ ನಡೆದ ಮೊಹರಂ ಆಚರಣೆ ವೇಳೆ ಕುಟುಂಬ ಸಮೇತ ಬಂದಿದ್ದರು’ ಎಂದು ಗ್ರಾಮಸ್ಥರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>