ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ | ಶ್ರೀಕೃಷ್ಣ ಜನ್ಮಾಷ್ಮಮಿ ಸಡಗರ: ಮೊಸರು ಗಡಿಗೆ ಒಡೆದು ಸಂಭ್ರಮ

Published : 7 ಸೆಪ್ಟೆಂಬರ್ 2023, 16:09 IST
Last Updated : 7 ಸೆಪ್ಟೆಂಬರ್ 2023, 16:09 IST
ಫಾಲೋ ಮಾಡಿ
Comments
ಕಲಬುರಗಿಯ ಇಸ್ಕಾನ್‌ ಭಕ್ತಿ ಕೇಂದ್ರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ ಮಾಡಿದ ಭಕ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಇಸ್ಕಾನ್‌ ಭಕ್ತಿ ಕೇಂದ್ರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಭಜನೆ ಮಾಡಿದ ಭಕ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿಠ್ಠಲ ಮಂದಿರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹೂವುಗಳಿಂದ ಅಲಂಕೃತವಾದ ಶ್ರೀಕೃಷ್ಣನ ಮೂರ್ತಿ –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿಠ್ಠಲ ಮಂದಿರದಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹೂವುಗಳಿಂದ ಅಲಂಕೃತವಾದ ಶ್ರೀಕೃಷ್ಣನ ಮೂರ್ತಿ –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಗುರುವಾರ ನಡೆದ ರಥೋತ್ಸದಲ್ಲಿ ಪಾಲ್ಗೊಂಡಿದ್ದ ಭಕ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯ ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಗುರುವಾರ ನಡೆದ ರಥೋತ್ಸದಲ್ಲಿ ಪಾಲ್ಗೊಂಡಿದ್ದ ಭಕ್ತರು –ಪ್ರಜಾವಾಣಿ ಚಿತ್ರ
ಶ್ರೀಕೃಷ್ಣ ಮಂದಿರದಲ್ಲಿ ರಥೋತ್ಸವ
ವಿದ್ಯಾನಗರದ ಶ್ರೀಕೃಷ್ಣ ಮಂದಿರದಲ್ಲಿ ಗುರುವಾರ ನಡೆದ ರಥೋತ್ಸವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಅಖಿಲ ಭಾರತ ಮಾಧ್ವ ಮಹಾ ಮಂಡಲ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಎರಡು ದಿನಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಗುರುವಾರ ಬೆಳಿಗ್ಗೆ ಶ್ರೀಕೃಷ್ಣನ ಮೂರ್ತಿಗೆ ಪಂಚಾಮೃತ ಅಭಿಷೇಕ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. 38 ಜನ ಪಂಡಿತರು ವಿಷ್ಣು ಸಹಸ್ರನಾಮ ಗೀತಾ ಪಾರಾಯಣ ಮಾಡಿದರು. ಜ್ಞಾನಾಂಜನ ಭಜನಾ ಮಂಡಳಿಯು ಭಜನೆ ಹಾಡು ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆ ನಂತರ ಮಂದಿರದ ಆವರಣದಲ್ಲಿ ಶ್ರೀಕೃಷ್ಣನ ರಥೋತ್ಸವ ಅದ್ದೂರಿಯಾಗಿ ಜರುಗಿತು. ಕೃಷ್ಣ ಲೀಲೋತ್ಸವ ವಿಟ್ಲಪಿಂಡಿ ಗೋಪಾಲ ಕಾವಲಿ ತೋಟ್ಟಿಲು ಸೇವೆ ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆದವು. ಪಂ. ಗೋಪಾಲಾಚಾರ್ಯ ಅಕಮಂಚಿ ಅವರು ಪ್ರವಚನ ನೀಡಿದರು. ಮಂಡಲದ ಅಧ್ಯಕ್ಷ ರಂಗನಾಥ ದೇಸಾಯಿ ಉಪಾಧ್ಯಕ್ಷ ಗಿರಿಧರ್ ಭಟ್ ಕಾರ್ಯದರ್ಶಿ ಕಿಶೋರ್ ದೇಶಪಾಂಡೆ ಜಂಟಿ ಕಾರ್ಯದರ್ಶಿ ಮಂಜುನಾಥ ಕುಲಕರ್ಣಿ ಖಜಾಂಚಿ ನಾರಾಯಣ ದೇಸಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT