ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಕೌಶಲ ಕೇಂದ್ರ ಆರಂಭಿಸಿ: ಮಲ್ಲಿಕಾರ್ಜುನ ಖರ್ಗೆ ಸಲಹೆ

Published : 28 ಜನವರಿ 2024, 5:26 IST
Last Updated : 28 ಜನವರಿ 2024, 5:26 IST
ಫಾಲೋ ಮಾಡಿ
Comments
ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ವೈದ್ಯಕೀಯ ಸೀಟುಗಳು ದೊರೆಯುತ್ತಿವೆ. ಪ್ರತಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆಯುವುದು ನಮ್ಮ ಸರ್ಕಾರದ ಗುರಿ
ಡಾ. ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
‘ದಾನ ಮಾಡುವ ಗುಣ ಕಡಿಮೆ’
‘ಶಿರಸಂಗಿ ಲಿಂಗರಾಜರಂತಹ ಜಮೀನ್ದಾರರು ನಿಸ್ವಾರ್ಥದಿಂದ ಸಮಾಜದ ಶಿಕ್ಷಣಕ್ಕಾಗಿ ತಮ್ಮ ಆಸ್ತಿಯನ್ನು ದಾನ ಮಾಡಿದರು. ಹೀಗಾಗಿಯೇ ಇಂದು ಬೆಳಗಾವಿ ವಿಭಾಗದಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಬೆಳೆದು ಲಕ್ಷಾಂತರ ಜನರಿಗೆ ಶಿಕ್ಷಣ ನೀಡಿವೆ. ಅಂತಹ ದಾನ ಮಾಡುವ ಗುಣ ನಮ್ಮಲ್ಲಿ ಕಡಿಮೆ ಇದೆ. ದಾನ ಮಾಡುವ ಬದಲು ಏನಾದರೂ ಕೊಂಡೊಯ್ಯಲು ಸಿಗುತ್ತದೆಯೇ ಎನ್ನುವವರೇ ಅಧಿಕ‘ ಎಂದು ಮಲ್ಲಿಕಾರ್ಜುನ ಖರ್ಗೆ ವಿಷಾದಿಸಿದರು. ಸಮಾಜ ಬೆಳೆಯುವುದೇ ದಾನಿಗಳಿಂದ. ಹೀಗಾಗಿ ಉದಾರವಾಗಿ ತಮ್ಮಲ್ಲಿರುವುದನ್ನು ದಾನ ಮಾಡಬೇಕು ಎಂದು ಸಲಹೆ ನೀಡಿದರು. ಏನಾದರೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಆ ಬಗ್ಗೆ ಶ್ಲಾಘಿಸುವ ಗುಣವೂ ಇಲ್ಲ. 371 (ಜೆ) ಬಂದಿದ್ದರಿಂದ ಪ್ರತಿ ವರ್ಷ ಈ ಭಾಗ ಅಭಿವೃದ್ಧಿಯಾಗುತ್ತಿದೆ. ಇಎಸ್‌ಐ ಆಸ್ಪತ್ರೆ ಇದ್ದುದರಿಂದ ಉತ್ತಮ ಚಿಕಿತ್ಸೆ ದೊರೆಯುವ ಜೊತೆಗೆ ಮೆಡಿಕಲ್ ಸೀಟುಗಳೂ ಸಿಕ್ಕಿವೆ. ಏನೋ ಒಂದು ಸರ್ಕಾರದಿಂದ ಬಂದಿದೆ ಎನ್ನುತ್ತಾರೆಯೇ ಹೊರತು ಅದನ್ನು ತರಲು ಎಷ್ಟು ಶ್ರಮ ಹಾಕಿದ್ದೇವೆ ಎಂಬುದನ್ನು ಗಮನಿಸುವುದಿಲ್ಲ ಎಂದರು.
‘ಒಂದು ಅಂಕ ಕಡಿಮೆ ಬಂದಿದ್ದಕ್ಕೆ ಮಂತ್ರಿಯಾದೆ’
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಓದುತ್ತಿದ್ದ ವೇಳೆ ಡಿ.ಎಂ. ನಂಜುಂಡಪ್ಪ ಅವರು ವಿಭಾಗ ಮುಖ್ಯಸ್ಥರಾಗಿದ್ದರು. ನನಗೆ ಶೇ 59 ಅಂಕ ಬಂದಿತ್ತು. 60 ಕೊಟ್ಟಿದ್ದರೆ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿ ಯಾವುದೋ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುತ್ತಿದ್ದೆ. ಆದರೆ ಶೇ 59 ಅಂಕ ಬಂದಿದ್ದರಿಂದ ಕಾರ್ಮಿಕ ಸಂಘಟನೆ ನಾಯಕನಾದೆ. ನಂತರ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವನೂ ಆದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂದಿನ ದಿನಗಳನ್ನು ಮೆಲುಕು ಹಾಕಿದರು. ‘ನಾನು ಶಿಕ್ಷಣ ಸಚಿವನಾಗಿದ್ದ ವೇಳೆ ನಂಜುಂಡಪ್ಪ ಅವರು ಯೋಜನಾ ವಿಭಾಗದ ಕಾರ್ಯದರ್ಶಿಯಾಗಿದ್ದರು. ಬ್ಯಾಕ್‌ಲಾಗ್ ಹುದ್ದೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ವೇಳೆ ಅವರನ್ನು ಕರೆಸಿಕೊಂಡು ನನ್ನ ಗುರುತಿದೆಯೇ ಎಂದು ಕೇಳಿ ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ. ನೀವು ಒಂದು ಅಂಕ ಹೆಚ್ಚು ಕೊಡದೇ ಇರುವುದಕ್ಕೆ ನಾನು ಮಂತ್ರಿಯಾದೆ ಎಂದು ಅವರಿಗೆ ನೆನಪಿಸಿದೆ’ ಎಂದು ಖರ್ಗೆ ಚಟಾಕಿ ಹಾರಿಸಿದರು.
ಕಾಲಮಿತಿಯಲ್ಲಿ ಮುಗಿಸಿದ್ದೇವೆ: ಬಿಲಗುಂದಿ
ಕಲಬುರಗಿಯ ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರದ ನಿರ್ಮಾಣಕ್ಕೆ ನನ್ನ ಅಧಿಕಾರವಧಿಯಲ್ಲೇ ಶುರು ಮಾಡಿದ್ದೆ. ಇದೀಗ ಅವಧಿ ಮುಗಿಯುವುದರೊಳಗಾಗಿಯೇ ಪೂರ್ಣಗೊಳಿಸಿದ ತೃಪ್ತಿ ಇದೆ ಎಂದು ಎಚ್‌ಕೆಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಹೇಳಿದರು. ‘ಬೀದರ್‌ನಲ್ಲಿ ಸೈನಿಕ ಶಾಲೆ ಕಲಬುರಗಿಯ ಬಿದ್ದಾಪುರ ಕಾಲೊನಿಯಲ್ಲಿ ಸೊಸೈಟಿ ವತಿಯಿಂದ ಸಿಬಿಎಸ್‌ಇ ಶಾಲೆಯನ್ನು ಶೀಘ್ರ ಆರಂಭಿಸಲಾಗುವುದು. ಬೀದರ್ ರಾಯಚೂರಿನಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT