ಪಕ್ಕದ ವಿಜಯಪುರ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3400 ದರ ನಿಗದಿ ಮಾಡಿದ್ದಾರೆ. ಇಲ್ಲಿ ಅಷ್ಟು ಕೊಡಲು ಏನು ತೊಂದರೆ? ನೀವು ಹೇಳುವ ನೆಪಗಳನ್ನೆಲ್ಲ ನಾವು ಕೇಳಲು ತಯಾರಿಲ್ಲ.
-ಬಿ.ಆರ್.ಪಾಟೀಲ, ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷ
ನನ್ನ ಮಾತುಗಳು ಕಠಿಣವೆನಿಸಬೇಕು. ಕೆಲ ಕಾರ್ಖಾನೆಯವರು ಸಕ್ಕರೆ ಸಚಿವರು ಶಾಸಕರಿಗೆ ನನ್ನ ವಿರುದ್ಧ ದೂರು ನೀಡಿದ್ದೀರಿ. ಆದರೆ ರೈತರಿಗೆ ಎಷ್ಟು ದರ ನೀಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು.
-ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
ಕಬ್ಬು ನುರಿಸುವ ಹಂಗಾಮು ಶುರುವಾಗುತ್ತಿದ್ದಂತೆಯೇ ದರ ನಿಗದಿಗೊಳಿಸಿ ಕಬ್ಬು ಖರೀದಿಸಬೇಕು. ಇಷ್ಟು ವಿಳಂಬ ಮಾಡಿದರೆ ರೈತರು ಏನು ಮಾಡಬೇಕು?.