<p><strong>ಆಳಂದ (ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ಬೋಧನ -ಕಮಲಾನಗರ ಗ್ರಾಮದ ಮಧ್ಯದ ಸೇತುವೆ ಮೇಲಿಂದ ನೀರು ತುಂಬಿ ಹರಿಯುತ್ತಿರುವ ಪ್ರಮಾಣ ಹೆಚ್ಚಿದ್ದು, ಮುಖ್ಯ ರಸ್ತೆ ಸಂಚಾರವು ಭಾನುವಾರ ದಿನವಿಡೀ ಸ್ಥಗಿತಗೊಂಡಿದೆ.</p><p> ಕಲಬುರಗಿ, ಬಸವ ಕಲ್ಯಾಣ, ನರೋಣಾ, ವಿಕೆ ಸಲಗರ, ಚಿಂಚನಸೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿನ ವಿವಿಧ ಗ್ರಾಮಗಳಲ್ಲಿನ ಜನರು ಪರದಾಡಿದರು. ನೆರೆಯ ಮಹಾರಾಷ್ಟ್ರದ ಬೆಣ್ಣೆತೋರಾ ನದಿಯ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದ ಕಳೆದ ನಾಲ್ಕು ದಿನಗಳಿಂದ ಹಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಕಮಲಾನಗರ -ಬೋಧನ ಗ್ರಾಮದ ದೇವಸ್ಥಾನದಲ್ಲಿ ಪ್ರಯಾಣಿಕರು ನೀರಿನ ಪ್ರವಾಹ ಕಡಿಮೆಯಾದರೆ ತಮ್ಮ ಮನೆಗಳಿಗೆ ತೆರಳಲು ಕಾದುಕುಳಿತ್ತಿದ್ದಾರೆ. ಸುತ್ತಲಿನ ರೈತರ ಹೊಲ ಗದ್ದೆಗಳಲ್ಲಿನ ಕಬ್ಬು, ಬಾಳೆ, ತೊಗರಿ, ಸೋಯಾಬಿನ್ ಬೆಳೆಯೂ ಸಂಪೂರ್ಣ ಜಲಾವೃತವಾಗಿವೆ.</p><p>ಮಹಾಲಯ ಅಮಾವಾಸ್ಯೆ ನಿಮಿತ್ತ ತುಳಜಾಪುರ, ಹುಮನಾಬಾದ್, ಗುರಣಾಪುರ, ಬಸವಣ್ಣ ಸಂಗೋಳಗಿ ಗ್ರಾಮಗಳಿಗೆ ತೆರಳಿದ ಭಕ್ತರು ಸ್ವಗ್ರಾಮಕ್ಕೆ ತಲುಪಲು ಬೋಧನ ಗ್ರಾಮದ ದೇವಸ್ಥಾನದಲ್ಲಿ ಬೀಡು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ (ಕಲಬುರಗಿ ಜಿಲ್ಲೆ):</strong> ತಾಲ್ಲೂಕಿನ ಬೋಧನ -ಕಮಲಾನಗರ ಗ್ರಾಮದ ಮಧ್ಯದ ಸೇತುವೆ ಮೇಲಿಂದ ನೀರು ತುಂಬಿ ಹರಿಯುತ್ತಿರುವ ಪ್ರಮಾಣ ಹೆಚ್ಚಿದ್ದು, ಮುಖ್ಯ ರಸ್ತೆ ಸಂಚಾರವು ಭಾನುವಾರ ದಿನವಿಡೀ ಸ್ಥಗಿತಗೊಂಡಿದೆ.</p><p> ಕಲಬುರಗಿ, ಬಸವ ಕಲ್ಯಾಣ, ನರೋಣಾ, ವಿಕೆ ಸಲಗರ, ಚಿಂಚನಸೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿನ ವಿವಿಧ ಗ್ರಾಮಗಳಲ್ಲಿನ ಜನರು ಪರದಾಡಿದರು. ನೆರೆಯ ಮಹಾರಾಷ್ಟ್ರದ ಬೆಣ್ಣೆತೋರಾ ನದಿಯ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದ ಕಳೆದ ನಾಲ್ಕು ದಿನಗಳಿಂದ ಹಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಕಮಲಾನಗರ -ಬೋಧನ ಗ್ರಾಮದ ದೇವಸ್ಥಾನದಲ್ಲಿ ಪ್ರಯಾಣಿಕರು ನೀರಿನ ಪ್ರವಾಹ ಕಡಿಮೆಯಾದರೆ ತಮ್ಮ ಮನೆಗಳಿಗೆ ತೆರಳಲು ಕಾದುಕುಳಿತ್ತಿದ್ದಾರೆ. ಸುತ್ತಲಿನ ರೈತರ ಹೊಲ ಗದ್ದೆಗಳಲ್ಲಿನ ಕಬ್ಬು, ಬಾಳೆ, ತೊಗರಿ, ಸೋಯಾಬಿನ್ ಬೆಳೆಯೂ ಸಂಪೂರ್ಣ ಜಲಾವೃತವಾಗಿವೆ.</p><p>ಮಹಾಲಯ ಅಮಾವಾಸ್ಯೆ ನಿಮಿತ್ತ ತುಳಜಾಪುರ, ಹುಮನಾಬಾದ್, ಗುರಣಾಪುರ, ಬಸವಣ್ಣ ಸಂಗೋಳಗಿ ಗ್ರಾಮಗಳಿಗೆ ತೆರಳಿದ ಭಕ್ತರು ಸ್ವಗ್ರಾಮಕ್ಕೆ ತಲುಪಲು ಬೋಧನ ಗ್ರಾಮದ ದೇವಸ್ಥಾನದಲ್ಲಿ ಬೀಡು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>