<p><strong>ಕಲಬುರಗಿ:</strong> ‘ಆಧುನಿಕತೆಯ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸ್ಪರ್ಧಾತ್ಮಕತೆಯ ಕೌಶಲ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ ಹೇಳಿದರು.</p>.<p>ಅಫಜಲಪುರ ತಾಲ್ಲೂಕಿನ ಚವಡಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ರಸ್ತೆ ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕಾಗೆಯಂತೆ ನಿರಂತರ ಪ್ರಯತ್ನ, ಬಕಪಕ್ಷಿಯಂತೆ ಧ್ಯಾನ, ನಾಯಿಯಂತೆ ನಿದ್ರೆ, ಗೃಹತ್ಯಾಗ, ಮಿತಾಹಾರ’ ಅಳವಡಿಸಿಕೊಳ್ಳಬೇಕು’ ಎಂದು ಪಂಚತಂತ್ರಗಳ ಮುಖಾಂತರ ವಿದ್ಯಾರ್ಥಿಗಳಿಗೆ ಸಾಧನೆಯ ರಹಸ್ಯ ಬಿಚ್ಚಿಟ್ಟರು.</p>.<p>‘ಪೋಲಿಸ್ ಎಂದರೆ ಭಯ ಬೇಡ ಸಮಾಜದಲ್ಲಿ ಜನರ ಸಲುವಾಗಿ ಅಭಯವನ್ನು ನೀಡುವುದು’ ಎಂದು ಹೇಳಿದರು.</p>.<p>ಸಂಸ್ಥೆಯ ಪ್ರಾಚಾರ್ಯರಾದ ಸುಭಾಷ ಯವಳೆ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಅಧಿಕಾರಿ ಪ್ರವೀಣ ಮಳ್ಳಿ ಸ್ವಾಗತಿಸಿದರು. ಸಿದ್ದಪ್ಪಾ ಜಮಾದಾರ ವಂದಿಸಿದರು. ದೇವಿಂದ್ರಪ್ಪಾ ಕುಂಬಾರ ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಆಧುನಿಕತೆಯ ಇಂದಿನ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸ್ಪರ್ಧಾತ್ಮಕತೆಯ ಕೌಶಲ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಅಫಜಲಪುರ ಸಿಪಿಐ ಚನ್ನಯ್ಯ ಹಿರೇಮಠ ಹೇಳಿದರು.</p>.<p>ಅಫಜಲಪುರ ತಾಲ್ಲೂಕಿನ ಚವಡಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ರಸ್ತೆ ಸಂಚಾರಿ ನಿಯಮಗಳು ಮತ್ತು ರಸ್ತೆ ಸುರಕ್ಷತೆ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕಾಗೆಯಂತೆ ನಿರಂತರ ಪ್ರಯತ್ನ, ಬಕಪಕ್ಷಿಯಂತೆ ಧ್ಯಾನ, ನಾಯಿಯಂತೆ ನಿದ್ರೆ, ಗೃಹತ್ಯಾಗ, ಮಿತಾಹಾರ’ ಅಳವಡಿಸಿಕೊಳ್ಳಬೇಕು’ ಎಂದು ಪಂಚತಂತ್ರಗಳ ಮುಖಾಂತರ ವಿದ್ಯಾರ್ಥಿಗಳಿಗೆ ಸಾಧನೆಯ ರಹಸ್ಯ ಬಿಚ್ಚಿಟ್ಟರು.</p>.<p>‘ಪೋಲಿಸ್ ಎಂದರೆ ಭಯ ಬೇಡ ಸಮಾಜದಲ್ಲಿ ಜನರ ಸಲುವಾಗಿ ಅಭಯವನ್ನು ನೀಡುವುದು’ ಎಂದು ಹೇಳಿದರು.</p>.<p>ಸಂಸ್ಥೆಯ ಪ್ರಾಚಾರ್ಯರಾದ ಸುಭಾಷ ಯವಳೆ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಅಧಿಕಾರಿ ಪ್ರವೀಣ ಮಳ್ಳಿ ಸ್ವಾಗತಿಸಿದರು. ಸಿದ್ದಪ್ಪಾ ಜಮಾದಾರ ವಂದಿಸಿದರು. ದೇವಿಂದ್ರಪ್ಪಾ ಕುಂಬಾರ ನಿರೂಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>