<p>ಕಲಬುರ್ಗಿ: ಮಧ್ಯ ರೈಲ್ವೆಯು ಸೊಲ್ಲಾಪುರ ವಿಭಾಗದಲ್ಲಿ ಬರುವ ಬೊರುಟಿ–ದುಧನಿ–ಕುಲಾಲಿ ಮಧ್ಯೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಫೆ 17ರಿಂದ 26ರವರೆಗೂ ಬಹುಬೇಡಿಕೆಯ ‘ಸೊಲ್ಲಾಪುರ–ಹಾಸನ ಎಕ್ಸ್ಪ್ರೆಸ್’ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ಈ ಅವಧಿಯಲ್ಲಿ ರದ್ದುಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.</p>.<p>ಸೊಲ್ಲಾಪುರ–ಕಲಬುರ್ಗಿ ಮಧ್ಯದಲ್ಲಿ ಜೋಡಿ ಮಾರ್ಗ ನಡೆಯುತ್ತಿದೆಯೇ ಹೊರತು ಕಲಬುರ್ಗಿ–ಹಾಸನ ಮಧ್ಯೆ ಯಾವುದೇ ಕಾಮಗಾರಿ ಇಲ್ಲ. ಹೀಗಿರುವಾಗ ಸೊಲ್ಲಾಪುರ ಬದಲು ಕಲಬುರ್ಗಿಯಿಂದಲೇ ಈ ರೈಲನ್ನು ಓಡಿಸಬೇಕು ಎಂದು ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಹೋರಾಟ ಸಮಿತಿಯವರು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಇದರಿಂದ ರೈಲ್ವೆಗೂ ಎಷ್ಟು ನಷ್ಟವಾಗಲಿದೆ ಎಂಬುದನ್ನು ಅಂದಾಜು ಮಾಡಿದ್ದಾರೆ.</p>.<p>‘ಕಲಬುರ್ಗಿ ಭಾಗದ ಜನತೆ ವಿವಿಧ ಕಾರ್ಯಗಳಿಗಾಗಿ ಬೆಂಗಳೂರಿಗೆ ತೆರಳಲು ಸೊಲ್ಲಾಪುರ–ಹಾಸನ ರಸ್ತೆ ಅತ್ಯಂತ ಪ್ರಶಸ್ತವಾಗಿದೆ. ಇದೇ ರೈಲನ್ನೇ ಉದ್ಯಮಿಗಳು, ಜನಸಾಮಾನ್ಯರು ಬಳಸುತ್ತಾರೆ. ರಾತ್ರಿ ಇಲ್ಲಿಂದ ಹೊರಟು ಬೆಳಿಗ್ಗೆ ಬೆಂಗಳೂರು ತಲುಪಲಿರುವ ಈ ರೈಲನ್ನು ಸಾವಿರಾರು ಜನರು ನಿತ್ಯ ಆಶ್ರಯಿಸಿದ್ದಾರೆ. ಕಡಿಮೆ ದರದಲ್ಲಿ ಜನರಲ್ ಬೋಗಿಗಳಲ್ಲಿ ತೆರಳುವ ಬಡವರೂ ಇದ್ದಾರೆ. ಸೊಲ್ಲಾಪುರ–ಕಲಬುರ್ಗಿ ಮಧ್ಯೆ ಜೋಡಿ ಮಾರ್ಗ ನಿರ್ಮಾಣವಾಗುತ್ತಿದೆ. ಆ ಭಾಗವನ್ನು ಹೊರತುಪಡಿಸಿ ರೈಲನ್ನು ಕಲಬುರ್ಗಿಯಿಂದಲೇ ಓಡಿಸಲು ಮಧ್ಯ ರೈಲ್ವೆಗೆ ಏನಡ್ಡಿ’ ಎಂದು ಪ್ರಶ್ನಿಸುತ್ತಾರೆ ಸಮಿತಿ ಸಂಚಾಲಕ ಸುನಿಲ ಕುಲಕರ್ಣಿ.</p>.<p>‘ಬೆಳಿಗ್ಗೆ ಬರುವ ರೈಲನ್ನು ಸಂಜೆಯವರೆಗೂ ನಿಲ್ಲಿಸಲು ಕಲಬುರ್ಗಿ ನಿಲ್ದಾಣದಲ್ಲಿ ಪಿಟ್ಲೈನ್ ಇದೆ. ಹಾಗಾಗಿ, ಇದರಿಂದ ಉಳಿದ ರೈಲುಗಳಿಗೆ ಯಾವುದೇ ತೊಂದರೆಯಾಗದು. ಈ ರೈಲು 10 ದಿನಗಳ ಅವಧಿಯಲ್ಲಿ ಸಂಚರಿಸದಿದ್ದರೆ ₹ 1.5 ಕೋಟಿಯವರೆಗೂ ನಷ್ಟವಾಗಲಿದೆ. ಇತ್ತ ಜನಸಾಮಾನ್ಯರೂ ಅನಿವಾರ್ಯವಾಗಿ ಎರಡರಿಂದ ಮೂರು ಪಟ್ಟು ದರ ತೆತ್ತು ಬಸ್ಗಳಿಗೆ ಪ್ರಯಾಣಿಸಬೇಕಿದೆ’ ಎನ್ನುತ್ತಾರೆ ಸುನಿಲ.</p>.<p>ಹಾಸನದಿಂದ ಸೊಲ್ಲಾಪುರದವರೆಗೆ ಏಕಮುಖ ಸಂಚಾರ ಕೈಗೊಂಡರೆ ₹ 7 ಲಕ್ಷ ವರಮಾನ ಬರುತ್ತದೆ. 24 ಬೋಗಿಗಳುಳ್ಳ ದೊಡ್ಡ ರೈಲು ಇದಾಗಿದ್ದು, ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ರೈಲಿನ ಮೂಲಕ ಪ್ರಯಾಣ ಕೈಗೊಳ್ಳುತ್ತಾರೆ. ಅದರಲ್ಲಿಯೂ ಬಹುತೇಕರು ಕಲಬುರ್ಗಿಯಿಂದಲೇ ಹತ್ತುತ್ತಾರೆ. ಹೀಗಾಗಿ, ಈ ರೈಲನ್ನು 10 ದಿನಗಳವರೆಗೆ ರದ್ದು ಮಾಡುವ ಬದಲು ಕಲಬುರ್ಗಿಯಿಂದಲೇ ಓಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರ್ಗಿ: ಮಧ್ಯ ರೈಲ್ವೆಯು ಸೊಲ್ಲಾಪುರ ವಿಭಾಗದಲ್ಲಿ ಬರುವ ಬೊರುಟಿ–ದುಧನಿ–ಕುಲಾಲಿ ಮಧ್ಯೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಫೆ 17ರಿಂದ 26ರವರೆಗೂ ಬಹುಬೇಡಿಕೆಯ ‘ಸೊಲ್ಲಾಪುರ–ಹಾಸನ ಎಕ್ಸ್ಪ್ರೆಸ್’ ರೈಲು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ಈ ಅವಧಿಯಲ್ಲಿ ರದ್ದುಗೊಳಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.</p>.<p>ಸೊಲ್ಲಾಪುರ–ಕಲಬುರ್ಗಿ ಮಧ್ಯದಲ್ಲಿ ಜೋಡಿ ಮಾರ್ಗ ನಡೆಯುತ್ತಿದೆಯೇ ಹೊರತು ಕಲಬುರ್ಗಿ–ಹಾಸನ ಮಧ್ಯೆ ಯಾವುದೇ ಕಾಮಗಾರಿ ಇಲ್ಲ. ಹೀಗಿರುವಾಗ ಸೊಲ್ಲಾಪುರ ಬದಲು ಕಲಬುರ್ಗಿಯಿಂದಲೇ ಈ ರೈಲನ್ನು ಓಡಿಸಬೇಕು ಎಂದು ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಹೋರಾಟ ಸಮಿತಿಯವರು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಇದರಿಂದ ರೈಲ್ವೆಗೂ ಎಷ್ಟು ನಷ್ಟವಾಗಲಿದೆ ಎಂಬುದನ್ನು ಅಂದಾಜು ಮಾಡಿದ್ದಾರೆ.</p>.<p>‘ಕಲಬುರ್ಗಿ ಭಾಗದ ಜನತೆ ವಿವಿಧ ಕಾರ್ಯಗಳಿಗಾಗಿ ಬೆಂಗಳೂರಿಗೆ ತೆರಳಲು ಸೊಲ್ಲಾಪುರ–ಹಾಸನ ರಸ್ತೆ ಅತ್ಯಂತ ಪ್ರಶಸ್ತವಾಗಿದೆ. ಇದೇ ರೈಲನ್ನೇ ಉದ್ಯಮಿಗಳು, ಜನಸಾಮಾನ್ಯರು ಬಳಸುತ್ತಾರೆ. ರಾತ್ರಿ ಇಲ್ಲಿಂದ ಹೊರಟು ಬೆಳಿಗ್ಗೆ ಬೆಂಗಳೂರು ತಲುಪಲಿರುವ ಈ ರೈಲನ್ನು ಸಾವಿರಾರು ಜನರು ನಿತ್ಯ ಆಶ್ರಯಿಸಿದ್ದಾರೆ. ಕಡಿಮೆ ದರದಲ್ಲಿ ಜನರಲ್ ಬೋಗಿಗಳಲ್ಲಿ ತೆರಳುವ ಬಡವರೂ ಇದ್ದಾರೆ. ಸೊಲ್ಲಾಪುರ–ಕಲಬುರ್ಗಿ ಮಧ್ಯೆ ಜೋಡಿ ಮಾರ್ಗ ನಿರ್ಮಾಣವಾಗುತ್ತಿದೆ. ಆ ಭಾಗವನ್ನು ಹೊರತುಪಡಿಸಿ ರೈಲನ್ನು ಕಲಬುರ್ಗಿಯಿಂದಲೇ ಓಡಿಸಲು ಮಧ್ಯ ರೈಲ್ವೆಗೆ ಏನಡ್ಡಿ’ ಎಂದು ಪ್ರಶ್ನಿಸುತ್ತಾರೆ ಸಮಿತಿ ಸಂಚಾಲಕ ಸುನಿಲ ಕುಲಕರ್ಣಿ.</p>.<p>‘ಬೆಳಿಗ್ಗೆ ಬರುವ ರೈಲನ್ನು ಸಂಜೆಯವರೆಗೂ ನಿಲ್ಲಿಸಲು ಕಲಬುರ್ಗಿ ನಿಲ್ದಾಣದಲ್ಲಿ ಪಿಟ್ಲೈನ್ ಇದೆ. ಹಾಗಾಗಿ, ಇದರಿಂದ ಉಳಿದ ರೈಲುಗಳಿಗೆ ಯಾವುದೇ ತೊಂದರೆಯಾಗದು. ಈ ರೈಲು 10 ದಿನಗಳ ಅವಧಿಯಲ್ಲಿ ಸಂಚರಿಸದಿದ್ದರೆ ₹ 1.5 ಕೋಟಿಯವರೆಗೂ ನಷ್ಟವಾಗಲಿದೆ. ಇತ್ತ ಜನಸಾಮಾನ್ಯರೂ ಅನಿವಾರ್ಯವಾಗಿ ಎರಡರಿಂದ ಮೂರು ಪಟ್ಟು ದರ ತೆತ್ತು ಬಸ್ಗಳಿಗೆ ಪ್ರಯಾಣಿಸಬೇಕಿದೆ’ ಎನ್ನುತ್ತಾರೆ ಸುನಿಲ.</p>.<p>ಹಾಸನದಿಂದ ಸೊಲ್ಲಾಪುರದವರೆಗೆ ಏಕಮುಖ ಸಂಚಾರ ಕೈಗೊಂಡರೆ ₹ 7 ಲಕ್ಷ ವರಮಾನ ಬರುತ್ತದೆ. 24 ಬೋಗಿಗಳುಳ್ಳ ದೊಡ್ಡ ರೈಲು ಇದಾಗಿದ್ದು, ನಿತ್ಯ ಎರಡು ಸಾವಿರಕ್ಕೂ ಅಧಿಕ ಪ್ರಯಾಣಿಕರು ಈ ರೈಲಿನ ಮೂಲಕ ಪ್ರಯಾಣ ಕೈಗೊಳ್ಳುತ್ತಾರೆ. ಅದರಲ್ಲಿಯೂ ಬಹುತೇಕರು ಕಲಬುರ್ಗಿಯಿಂದಲೇ ಹತ್ತುತ್ತಾರೆ. ಹೀಗಾಗಿ, ಈ ರೈಲನ್ನು 10 ದಿನಗಳವರೆಗೆ ರದ್ದು ಮಾಡುವ ಬದಲು ಕಲಬುರ್ಗಿಯಿಂದಲೇ ಓಡಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>