ಕಾರ್ಗಲ್: ಇಲ್ಲಿನ ಮಹಾತ್ಮ ಗಾಂಧಿ ವಿದ್ಯುದಾಗಾರದ ಬಳಿ ಇರುವ ಎಮ್ಮಲಗ ಗುಂಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ನೀರು ಪಾಲಾಗಿದ್ದಾನೆ.
ಹಾವೇರಿ ಮೂಲದ ಗಣೇಶ ಬಂಡಸಿದ್ದಣ್ಣನವರ್ (21) ಮೃತ ಯುವಕ.
ಸೇತುವೆಕಾಮಗಾರಿಯ ಗಾರೆ ಕೆಲಸ ಮುಗಿಸಿದ ನಂತರ ಸ್ನಾನಕ್ಕೆ ಬಂದಿದ್ದಾರೆ. ಆ ಸಮಯದಲ್ಲಿ ಸ್ನೇಹಿತರ ಜತೆ ಸೆಲ್ಫಿ ತೆಗೆದುಕೊಳ್ಳುವಾಗ ಅವಘಡ ನಡೆದಿದೆ. ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.