<p><strong>ನಾಪೋಕ್ಲು:</strong> ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕಾಫಿ ಕೊಯ್ಲು ಬಿರುಸಿನಿಂದ ಸಾಗುತ್ತಿದ್ದರೆ ಸಮೀಪದ ಬೊಳಿಬಾಣೆ ಎಂಬಲ್ಲಿ ಕಾರ್ಮಿಕರು ಅಡಿಕೆ ಸುಲಿಯುವ, ಬೇಯಿಸುವ, ಒಣಗಿಸುವ ಕೆಲಸದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ.</p>.<p>ಕೊಡಗಿನಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವ ಅಡಿಕೆಯನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಮಾರಾಟ ಮಾಡುವ ಉದ್ಯಮವನ್ನು ರೂಪಿಸಿಕೊಂಡು ಹತ್ತಾರು ಕುಟುಂಬಗಳಿಗೆ ಉದ್ಯೋಗ ನೀಡುವ ಕಾರ್ಯದಲ್ಲಿ ಕೊಟ್ಟಮುಡಿಯ ಉಸ್ಮಾನ್ ನಿರತರಾಗಿದ್ದಾರೆ.</p>.<p>ಮಲೆನಾಡಿನಂತೆ ಇಲ್ಲಿ ಅಡಿಕೆ ಕೊಯ್ಲು ಸಂಸ್ಕರಣೆಯ ಕಾರ್ಯಗಳು ಕಂಡುಬರುವುದು ಅಪರೂಪ. ಆದರೆ ಕಳೆದ ಹತ್ತು ವರ್ಷಗಳಿಂದ ಉಸ್ಮಾನ್ ಅಡಿಕೆ ಸಂಸ್ಕರಣೆಯಲ್ಲಿ ನಿರತರಾಗಿದ್ದಾರೆ. ಅಡಿಕೆ ವಹಿವಾಟಿನಲ್ಲಿ ಯಶಸ್ಸು ಕಂಡಿದ್ದಾರೆ.</p>.<p>ಮಲೆನಾಡಿನಲ್ಲಿರುವಂತೆ ಅಡಿಕೆ ಕೊಯ್ಲು, ಸಂಸ್ಕರಣೆಯ ಕಾರ್ಯಗಳು ಕಂಡುಬರುವುದು ಅಪರೂಪ. ಉಪಬೆಳೆಯಾಗಿ ಅಡಿಕೆಯನ್ನು ರೈತರು ಬೆಳೆಯ ಹೊರಟು ಕಾರ್ಮಿಕರ ಕೊರತೆ ಎದುರಿಸತೊಡಗಿದಾಗ ಉಸ್ಮಾನ್ ಅಡಿಕೆ ಸಂಸ್ಕರಣೆಗೆ ಒಲವು ತೋರಿದರು.</p>.<p>ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಅಡಿಕೆ ಬೆಳೆಯಲಾಗುತ್ತಿದೆ. ನವೆಂಬರ್ ತಿಂಗಳಿನಿಂದ ಮಾರ್ಚ್ ತನಕವೂ ಅಡಿಕೆಯ ಸುಗ್ಗಿ ಕಾಲ. ಈ ಅವಧಿಯಲ್ಲಿ ಕಾಫಿ ತೋಟದ ಕೆಲಸಗಳಿಗೆ ಕಾರ್ಮಿಕರು ಸಿಗುವುದಿಲ್ಲ, ಇಂಥ ಸಮಯದಲ್ಲಿ ಕಾರ್ಮಿಕರನ್ನು ಕಲೆಹಾಕುವುದು ಕಷ್ಟ ಎನ್ನುತ್ತಾರೆ ಉಸ್ಮಾನ್.</p>.<p>ಬೊಳಿಬಾಣೆಯ ಹಲವು ಕಡೆ ಅಡಿಕೆ ಸಂಸ್ಕರಣೆಯ ದೃಶ್ಯಗಳು ಕಾಣಸಿಗುತ್ತವೆ. ಅಡಿಕೆ ಸುಲಿಯುವ, ಬೇಯಿಸುತ್ತಿರುವ ಹಾಗೂ ಸುಲಿದ ಅಡಿಕೆಯನ್ನು ಒಣಗಿಸಿ ಸಂಸ್ಕರಿಸುತ್ತಿರುವ ಕಾರ್ಮಿಕರು ಇಲ್ಲಿದ್ದಾರೆ.</p>.<p>ಅಡಿಕೆ ಸಂಸ್ಕರಣೆಗೆ ಅನುಭವಿ ಕೆಲಸಗಾರರು ಬೇಕು. ಭದ್ರಾವತಿಯಿಂದ ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ವರ್ಷದ ಅರು ತಿಂಗಳು ಅಡಿಕೆ ಸುಲಿಯುವ ಕಾರ್ಮಿಕರಿಗೆ ಬಿಡುವಿಲ್ಲದಷ್ಟು ಕೆಲಸ ಎಂದರು ಉಸ್ಮಾನ್.</p>.<p>ಜಿಲ್ಲೆಯ ವಿವಿಧ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಿ ಇಲ್ಲಿಗೆ ತರಲಾಗುತ್ತದೆ. ಬಳಿಕ ಸುಲಿಸಿ, ಬೇಯಿಸಿ ಸಂಸ್ಕರಿಸಿ ಒಣಗಿಸಲಾಗುತ್ತದೆ. ಸಂಸ್ಕರಿಸಿದ ಅಡಿಕೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದರು.</p>.<p>ದಕ್ಷಿಣ ಕೊಡಗಿನಲ್ಲಿ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಗೋಣಿಕೊಪ್ಪ, ಪಾಲಿಬೆಟ್ಟ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಅಡಿಕೆ ಇಳುವರಿ ಕಡಿಮೆಯಿದ್ದು, ಬೆಳೆಗಾರರಿಗೆ ಉತ್ತಮ ದರ ಲಭಿಸುತ್ತಿದೆ’ ಎಂದರು ಕೊಟ್ಟಮುಡಿ ಉಸ್ಮಾನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಪೋಕ್ಲು:</strong> ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕಾಫಿ ಕೊಯ್ಲು ಬಿರುಸಿನಿಂದ ಸಾಗುತ್ತಿದ್ದರೆ ಸಮೀಪದ ಬೊಳಿಬಾಣೆ ಎಂಬಲ್ಲಿ ಕಾರ್ಮಿಕರು ಅಡಿಕೆ ಸುಲಿಯುವ, ಬೇಯಿಸುವ, ಒಣಗಿಸುವ ಕೆಲಸದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ.</p>.<p>ಕೊಡಗಿನಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವ ಅಡಿಕೆಯನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಮಾರಾಟ ಮಾಡುವ ಉದ್ಯಮವನ್ನು ರೂಪಿಸಿಕೊಂಡು ಹತ್ತಾರು ಕುಟುಂಬಗಳಿಗೆ ಉದ್ಯೋಗ ನೀಡುವ ಕಾರ್ಯದಲ್ಲಿ ಕೊಟ್ಟಮುಡಿಯ ಉಸ್ಮಾನ್ ನಿರತರಾಗಿದ್ದಾರೆ.</p>.<p>ಮಲೆನಾಡಿನಂತೆ ಇಲ್ಲಿ ಅಡಿಕೆ ಕೊಯ್ಲು ಸಂಸ್ಕರಣೆಯ ಕಾರ್ಯಗಳು ಕಂಡುಬರುವುದು ಅಪರೂಪ. ಆದರೆ ಕಳೆದ ಹತ್ತು ವರ್ಷಗಳಿಂದ ಉಸ್ಮಾನ್ ಅಡಿಕೆ ಸಂಸ್ಕರಣೆಯಲ್ಲಿ ನಿರತರಾಗಿದ್ದಾರೆ. ಅಡಿಕೆ ವಹಿವಾಟಿನಲ್ಲಿ ಯಶಸ್ಸು ಕಂಡಿದ್ದಾರೆ.</p>.<p>ಮಲೆನಾಡಿನಲ್ಲಿರುವಂತೆ ಅಡಿಕೆ ಕೊಯ್ಲು, ಸಂಸ್ಕರಣೆಯ ಕಾರ್ಯಗಳು ಕಂಡುಬರುವುದು ಅಪರೂಪ. ಉಪಬೆಳೆಯಾಗಿ ಅಡಿಕೆಯನ್ನು ರೈತರು ಬೆಳೆಯ ಹೊರಟು ಕಾರ್ಮಿಕರ ಕೊರತೆ ಎದುರಿಸತೊಡಗಿದಾಗ ಉಸ್ಮಾನ್ ಅಡಿಕೆ ಸಂಸ್ಕರಣೆಗೆ ಒಲವು ತೋರಿದರು.</p>.<p>ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಅಡಿಕೆ ಬೆಳೆಯಲಾಗುತ್ತಿದೆ. ನವೆಂಬರ್ ತಿಂಗಳಿನಿಂದ ಮಾರ್ಚ್ ತನಕವೂ ಅಡಿಕೆಯ ಸುಗ್ಗಿ ಕಾಲ. ಈ ಅವಧಿಯಲ್ಲಿ ಕಾಫಿ ತೋಟದ ಕೆಲಸಗಳಿಗೆ ಕಾರ್ಮಿಕರು ಸಿಗುವುದಿಲ್ಲ, ಇಂಥ ಸಮಯದಲ್ಲಿ ಕಾರ್ಮಿಕರನ್ನು ಕಲೆಹಾಕುವುದು ಕಷ್ಟ ಎನ್ನುತ್ತಾರೆ ಉಸ್ಮಾನ್.</p>.<p>ಬೊಳಿಬಾಣೆಯ ಹಲವು ಕಡೆ ಅಡಿಕೆ ಸಂಸ್ಕರಣೆಯ ದೃಶ್ಯಗಳು ಕಾಣಸಿಗುತ್ತವೆ. ಅಡಿಕೆ ಸುಲಿಯುವ, ಬೇಯಿಸುತ್ತಿರುವ ಹಾಗೂ ಸುಲಿದ ಅಡಿಕೆಯನ್ನು ಒಣಗಿಸಿ ಸಂಸ್ಕರಿಸುತ್ತಿರುವ ಕಾರ್ಮಿಕರು ಇಲ್ಲಿದ್ದಾರೆ.</p>.<p>ಅಡಿಕೆ ಸಂಸ್ಕರಣೆಗೆ ಅನುಭವಿ ಕೆಲಸಗಾರರು ಬೇಕು. ಭದ್ರಾವತಿಯಿಂದ ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ವರ್ಷದ ಅರು ತಿಂಗಳು ಅಡಿಕೆ ಸುಲಿಯುವ ಕಾರ್ಮಿಕರಿಗೆ ಬಿಡುವಿಲ್ಲದಷ್ಟು ಕೆಲಸ ಎಂದರು ಉಸ್ಮಾನ್.</p>.<p>ಜಿಲ್ಲೆಯ ವಿವಿಧ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಿ ಇಲ್ಲಿಗೆ ತರಲಾಗುತ್ತದೆ. ಬಳಿಕ ಸುಲಿಸಿ, ಬೇಯಿಸಿ ಸಂಸ್ಕರಿಸಿ ಒಣಗಿಸಲಾಗುತ್ತದೆ. ಸಂಸ್ಕರಿಸಿದ ಅಡಿಕೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದರು.</p>.<p>ದಕ್ಷಿಣ ಕೊಡಗಿನಲ್ಲಿ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಗೋಣಿಕೊಪ್ಪ, ಪಾಲಿಬೆಟ್ಟ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಅಡಿಕೆ ಇಳುವರಿ ಕಡಿಮೆಯಿದ್ದು, ಬೆಳೆಗಾರರಿಗೆ ಉತ್ತಮ ದರ ಲಭಿಸುತ್ತಿದೆ’ ಎಂದರು ಕೊಟ್ಟಮುಡಿ ಉಸ್ಮಾನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>