<p><strong>ಸೋಮವಾರಪೇಟೆ</strong>: ಇಲ್ಲಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಬಳಿಯ ಆಂಜನೇಯ ದೇವಾಲಯದ ಆವರಣದಲ್ಲಿ ನೂತನವಾಗಿ ₹ 4 ಕೋಟಿ ವೆಚ್ಚದಲ್ಲಿ ದೇವಾಲಯದ ಕಟ್ಟಡ ನಿರ್ಮಾಣವಾಗುತ್ತಿದ್ದು, ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ.</p>.<p>ಚೌಡ್ಲು ಗ್ರಾಮದ ಚಿಕ್ಕ ಗುಡಿಯಲ್ಲಿ 800 ವರ್ಷಗಳಿಂದಲೂ ಆಂಜನೇಯ ವಿಗ್ರಹವನ್ನು ಪೂಜಿಸಲಾಗುತ್ತಿದೆ. ನಂತರದ ದಿನಗಳಲ್ಲಿ ಸ್ವಲ್ಪ ವಿಸ್ತರಿಸಿದರೂ, ಹಳೆಯ ಕಟ್ಟಡದಲ್ಲಿಯೇ ದೇವಸ್ಥಾನವಿದ್ದು, ಇದು ಚಿಕ್ಕದಾಗಿತ್ತು. ಇದನ್ನು ಅರಿತ ದೇವಾಲಯ ಸಮಿತಿ, ನೂತನ ದೇವಾಲಯ ನಿರ್ಮಿಸಲು ರೂಪುರೇಷೆ ತಯಾರಿಸಿ ಸಮಿತಿ ರಚಿಸಿ 4 ವರ್ಷಗಳಿಂದ ಪ್ರಯತ್ನಿಸುತ್ತಿದೆ.</p>.<p>‘ಜನಪ್ರತಿನಿಧಿಗಳು, ಮುಜರಾಯಿ ಇಲಾಖೆ ಮತ್ತು ಸಾರ್ವಜನಿಕರು ದೇಣಿಗೆ ನೀಡುತ್ತಿದ್ದು, ತಮಿಳುನಾಡಿನ ಸೇಲಂ ಜಿಲ್ಲೆಯ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ. ಗೋಪುರದ ಕಾಮಗಾರಿ ಮುಗಿದಿದ್ದು, ಒಳಾಂಗಣದ ಕೆಲಸ ಭರದಿಂದ ಸಾಗುತ್ತಿದೆ’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ತಿಳಿಸಿದರು.</p>.<p>ದೇವಾಲಯಕ್ಕೆ ಹೆಚ್ಚಿನ ಹಣಕಾಸಿನ ನೆರವು ಬೇಕಾಗಿದೆ. ಹಿಂದಿನ ಮತ್ತು ಹಾಲಿ ಶಾಸಕರ ನೆರವಿನಿಂದ ₹ 3 ಕೋಟಿಗೂ ಹೆಚ್ಚಿನ ಹಣ ವ್ಯಯಿಸಲಾಗಿದೆ. ದಾನಿಗಳು ನೆರವು ನೀಡಬೇಕು’ ಎಂದು ಸಮಿತಿ ಅಧ್ಯಕ್ಷ ಸೀತಾರಾಮ್ ಮನವಿ ಮಾಡಿದರು.</p>.<p><strong>ಪುರಾತನ ಇತಿಹಾಸ:</strong></p>.<p>ಈ ದೇಗುಲಕ್ಕೆ ತಲೆಮಾರುಗಳ ಇತಿಹಾಸ ಇದೆ. ಕಕ್ಕೆಹೊಳೆಯ ಸಮೀಪ ಇರುವ ಈ ಆಂಜನೇಯಸ್ವಾಮಿ ಮೂರ್ತಿ ಇದ್ದ ಚಿಕ್ಕಗುಡಿಯ ಸುತ್ತ ಗಿಡಗಳು ಬೆಳೆದುಕೊಂಡಿತ್ತು. ದನ ಮೇಯಿಸಲು ಹೋದವರು ಆ ವಿಗ್ರಹವನ್ನು ಕಂಡು ಕಾಡುಗುಲಾಬಿ ಹೂವು ಮತ್ತು ಲಕ್ಕೆಸೊಪ್ಪುಗಳಿಂದ ಪೂಜೆ ಸಲ್ಲಿಸುತ್ತಿದ್ದರು. ದನಕರುಗಳಿಗೆ ಕಾಯಿಲೆಗಳು ಬಂದಾಗ ಈ ಆಂಜನೇಯ ದೇವರಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಗುಣಮುಖವಾಗುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿತು.</p>.<p>ಅಧಿಕಾರಿಯಾಗದ್ದವರೊಬ್ಬರು ದೇವರಲ್ಲಿ ಹರಕೆಹೊತ್ತು ತಮ್ಮ ಇಷ್ಟಾರ್ಥವನ್ನು ಪಡೆದಿದ್ದರಂತೆ. ದೇವರಲ್ಲಿ ನಂಬಿಕೆ ಇಟ್ಪ ಅಧಿಕಾರಿ ಮತ್ತು ದನಗಾಹಿಗಳು ಒಟ್ಟು ಸೇರಿ ಕಾಡುಕಲ್ಲುಗಳನ್ನೇ ಜೋಡಿಸಿ ಪುಟ್ಪ ಗುಡಿಯೊಂದನ್ನು ಕಟ್ಟಿ ಅದರಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬ ಪ್ರತೀತಿ ಇದೆ.</p>.<p>ಈಗ ನೂರಾರು ಮಂದಿ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದು, ಚಿಕ್ಕಗುಡಿಯನ್ನು ನವೀಕರಣ ಮಾಡಿ ದೊಡ್ಡ ದೇಗುಲ ಕಟ್ಟುವ ಕಾರ್ಯ ನಡೆಯುತ್ತಿದೆ.</p>.<p>ಈಗ 4 ಅಂತಸ್ತುಗಳ 43 ಅಡಿ ಎತ್ತರದ ಬೃಹತ್ ಗೋಪುರ ನಿರ್ಮಾಣವಾಗುತ್ತಿದ್ದು, ಇಷ್ಟು ದೊಡ್ಡ ಗೋಪುರವುಳ್ಳ ದೇಗುಲ ಈ ಭಾಗದಲ್ಲಿ ಇಲ್ಲ ಎಂಬುದು ವಿಶೇಷ. ಕಾಮಗಾರಿ ಪೂರ್ಣಗೊಂಡ ನಂತರ ಈ ದೇಗುಲ ಜಿಲ್ಲೆಯ ಪ್ರಮುಖ ದೇಗುಲಗಳ ಸಾಲಿನಲ್ಲಿ ಸೇರಲಿದೆ ಎಂಬುದು ಸ್ಥಳೀಯರ ವಿಶ್ವಾಸ.</p>.<p><strong>43 ಅಡಿ ಎತ್ತರದ ಗೋಪುರ</strong></p>.<p> ‘ಇಲ್ಲಿನ ಆಂಜನೇಯ ದೇವಾಲಯದಲ್ಲಿ ನಿರ್ಮಿಸುತ್ತಿರುವ ರಾಜಗೋಪುರ 43 ಅಡಿಗಳಷ್ಟು ಎತ್ತರವಿದ್ದು 4 ಅಂತಸ್ತನ್ನು ಹೊಂದಿದ್ದು ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಮಾದರಿಯ ಗೋಪುರದಲ್ಲಿ ಸಾಕಷ್ಟು ಕಲಾಕೃತಿಗಳಿದ್ದು ಆಕರ್ಷಕವಾಗಿರುತ್ತದೆ. ಅಕ್ಕಪಕ್ಕದಲ್ಲಿ ಎರಡು ಚಿಕ್ಕ ಗೋಪುರಗಳೊಂದಿಗೆ ಮಧ್ಯದಲ್ಲಿ ಪ್ರಧಾನ ಗೋಪುರ ಇರುತ್ತದೆ’ ಎಂದು ಗೋಪುರ ನಿರ್ಮಿಸುತ್ತಿರುವ ಶಪತಿ ತಮಿಳುನಾಡಿನ ಅನ್ಬು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೋಮವಾರಪೇಟೆ</strong>: ಇಲ್ಲಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಬಳಿಯ ಆಂಜನೇಯ ದೇವಾಲಯದ ಆವರಣದಲ್ಲಿ ನೂತನವಾಗಿ ₹ 4 ಕೋಟಿ ವೆಚ್ಚದಲ್ಲಿ ದೇವಾಲಯದ ಕಟ್ಟಡ ನಿರ್ಮಾಣವಾಗುತ್ತಿದ್ದು, ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ.</p>.<p>ಚೌಡ್ಲು ಗ್ರಾಮದ ಚಿಕ್ಕ ಗುಡಿಯಲ್ಲಿ 800 ವರ್ಷಗಳಿಂದಲೂ ಆಂಜನೇಯ ವಿಗ್ರಹವನ್ನು ಪೂಜಿಸಲಾಗುತ್ತಿದೆ. ನಂತರದ ದಿನಗಳಲ್ಲಿ ಸ್ವಲ್ಪ ವಿಸ್ತರಿಸಿದರೂ, ಹಳೆಯ ಕಟ್ಟಡದಲ್ಲಿಯೇ ದೇವಸ್ಥಾನವಿದ್ದು, ಇದು ಚಿಕ್ಕದಾಗಿತ್ತು. ಇದನ್ನು ಅರಿತ ದೇವಾಲಯ ಸಮಿತಿ, ನೂತನ ದೇವಾಲಯ ನಿರ್ಮಿಸಲು ರೂಪುರೇಷೆ ತಯಾರಿಸಿ ಸಮಿತಿ ರಚಿಸಿ 4 ವರ್ಷಗಳಿಂದ ಪ್ರಯತ್ನಿಸುತ್ತಿದೆ.</p>.<p>‘ಜನಪ್ರತಿನಿಧಿಗಳು, ಮುಜರಾಯಿ ಇಲಾಖೆ ಮತ್ತು ಸಾರ್ವಜನಿಕರು ದೇಣಿಗೆ ನೀಡುತ್ತಿದ್ದು, ತಮಿಳುನಾಡಿನ ಸೇಲಂ ಜಿಲ್ಲೆಯ ಕಾರ್ಮಿಕರು ಶ್ರಮವಹಿಸುತ್ತಿದ್ದಾರೆ. ಗೋಪುರದ ಕಾಮಗಾರಿ ಮುಗಿದಿದ್ದು, ಒಳಾಂಗಣದ ಕೆಲಸ ಭರದಿಂದ ಸಾಗುತ್ತಿದೆ’ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ತಿಳಿಸಿದರು.</p>.<p>ದೇವಾಲಯಕ್ಕೆ ಹೆಚ್ಚಿನ ಹಣಕಾಸಿನ ನೆರವು ಬೇಕಾಗಿದೆ. ಹಿಂದಿನ ಮತ್ತು ಹಾಲಿ ಶಾಸಕರ ನೆರವಿನಿಂದ ₹ 3 ಕೋಟಿಗೂ ಹೆಚ್ಚಿನ ಹಣ ವ್ಯಯಿಸಲಾಗಿದೆ. ದಾನಿಗಳು ನೆರವು ನೀಡಬೇಕು’ ಎಂದು ಸಮಿತಿ ಅಧ್ಯಕ್ಷ ಸೀತಾರಾಮ್ ಮನವಿ ಮಾಡಿದರು.</p>.<p><strong>ಪುರಾತನ ಇತಿಹಾಸ:</strong></p>.<p>ಈ ದೇಗುಲಕ್ಕೆ ತಲೆಮಾರುಗಳ ಇತಿಹಾಸ ಇದೆ. ಕಕ್ಕೆಹೊಳೆಯ ಸಮೀಪ ಇರುವ ಈ ಆಂಜನೇಯಸ್ವಾಮಿ ಮೂರ್ತಿ ಇದ್ದ ಚಿಕ್ಕಗುಡಿಯ ಸುತ್ತ ಗಿಡಗಳು ಬೆಳೆದುಕೊಂಡಿತ್ತು. ದನ ಮೇಯಿಸಲು ಹೋದವರು ಆ ವಿಗ್ರಹವನ್ನು ಕಂಡು ಕಾಡುಗುಲಾಬಿ ಹೂವು ಮತ್ತು ಲಕ್ಕೆಸೊಪ್ಪುಗಳಿಂದ ಪೂಜೆ ಸಲ್ಲಿಸುತ್ತಿದ್ದರು. ದನಕರುಗಳಿಗೆ ಕಾಯಿಲೆಗಳು ಬಂದಾಗ ಈ ಆಂಜನೇಯ ದೇವರಲ್ಲಿ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಗುಣಮುಖವಾಗುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿತು.</p>.<p>ಅಧಿಕಾರಿಯಾಗದ್ದವರೊಬ್ಬರು ದೇವರಲ್ಲಿ ಹರಕೆಹೊತ್ತು ತಮ್ಮ ಇಷ್ಟಾರ್ಥವನ್ನು ಪಡೆದಿದ್ದರಂತೆ. ದೇವರಲ್ಲಿ ನಂಬಿಕೆ ಇಟ್ಪ ಅಧಿಕಾರಿ ಮತ್ತು ದನಗಾಹಿಗಳು ಒಟ್ಟು ಸೇರಿ ಕಾಡುಕಲ್ಲುಗಳನ್ನೇ ಜೋಡಿಸಿ ಪುಟ್ಪ ಗುಡಿಯೊಂದನ್ನು ಕಟ್ಟಿ ಅದರಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂಬ ಪ್ರತೀತಿ ಇದೆ.</p>.<p>ಈಗ ನೂರಾರು ಮಂದಿ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದು, ಚಿಕ್ಕಗುಡಿಯನ್ನು ನವೀಕರಣ ಮಾಡಿ ದೊಡ್ಡ ದೇಗುಲ ಕಟ್ಟುವ ಕಾರ್ಯ ನಡೆಯುತ್ತಿದೆ.</p>.<p>ಈಗ 4 ಅಂತಸ್ತುಗಳ 43 ಅಡಿ ಎತ್ತರದ ಬೃಹತ್ ಗೋಪುರ ನಿರ್ಮಾಣವಾಗುತ್ತಿದ್ದು, ಇಷ್ಟು ದೊಡ್ಡ ಗೋಪುರವುಳ್ಳ ದೇಗುಲ ಈ ಭಾಗದಲ್ಲಿ ಇಲ್ಲ ಎಂಬುದು ವಿಶೇಷ. ಕಾಮಗಾರಿ ಪೂರ್ಣಗೊಂಡ ನಂತರ ಈ ದೇಗುಲ ಜಿಲ್ಲೆಯ ಪ್ರಮುಖ ದೇಗುಲಗಳ ಸಾಲಿನಲ್ಲಿ ಸೇರಲಿದೆ ಎಂಬುದು ಸ್ಥಳೀಯರ ವಿಶ್ವಾಸ.</p>.<p><strong>43 ಅಡಿ ಎತ್ತರದ ಗೋಪುರ</strong></p>.<p> ‘ಇಲ್ಲಿನ ಆಂಜನೇಯ ದೇವಾಲಯದಲ್ಲಿ ನಿರ್ಮಿಸುತ್ತಿರುವ ರಾಜಗೋಪುರ 43 ಅಡಿಗಳಷ್ಟು ಎತ್ತರವಿದ್ದು 4 ಅಂತಸ್ತನ್ನು ಹೊಂದಿದ್ದು ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಈ ಮಾದರಿಯ ಗೋಪುರದಲ್ಲಿ ಸಾಕಷ್ಟು ಕಲಾಕೃತಿಗಳಿದ್ದು ಆಕರ್ಷಕವಾಗಿರುತ್ತದೆ. ಅಕ್ಕಪಕ್ಕದಲ್ಲಿ ಎರಡು ಚಿಕ್ಕ ಗೋಪುರಗಳೊಂದಿಗೆ ಮಧ್ಯದಲ್ಲಿ ಪ್ರಧಾನ ಗೋಪುರ ಇರುತ್ತದೆ’ ಎಂದು ಗೋಪುರ ನಿರ್ಮಿಸುತ್ತಿರುವ ಶಪತಿ ತಮಿಳುನಾಡಿನ ಅನ್ಬು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>