ಕೊಡಗು: ಜೆಡಿಎಸ್ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ರಫೀಕ್ ಖಾನ್ ಹಾಗೂ ನಾಸೀರ್ ಬಂಧಿತರು. ಎಲ್ಲರೂ ಸುಂಟಿಕೊಪ್ಪದವರು.
ಭಾನುವಾರ ರಾತ್ರಿ, ಕುಶಾಲನಗರದಿಂದ ಕಾರಿನಲ್ಲಿ ಮಡಿಕೇರಿಗೆ ಬರುತ್ತಿದ್ದ ಯೋಧ ಅಶೋಕ್ ಕುಮಾರ್ ಹಾಗೂ ಅವರ ಕುಟುಂಬದ ಮೇಲೆ ಬಂಧಿತರು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಯೋಧನ ಕುಟುಂಬದ ಸದಸ್ಯರು ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.