<p><strong>ಗೋಣಿಕೊಪ್ಪಲು:</strong> ಹೊಸಬಗೆಯ ಅದರಲ್ಲೂ ಶ್ವೇತವಸ್ತ್ರಗಳನ್ನೇ ಹೆಚ್ಚಾಗಿ ತೊಟ್ಟ ಕ್ರೈಸ್ತ ಸಮುದಾಯದ ಪುರುಷರು, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಮಂಗಳವಾರ ಮಧ್ಯರಾತ್ರಿ ಚುಮುಚುಮು ಚಳಿಯಲ್ಲಿ ಚರ್ಚಗಳ ಕಡೆಗೆ ತೆರಳಿದರು.</p>.<p>ವಿದ್ಯುತ್ ದೀಪಗಳು ಹಾಗೂ ನಕ್ಷತ್ರ ದೀಪಗಳಿಂದ ಅಲಂಕೃತವಾಗಿದ್ದ ಚರ್ಚ್ ಸಭಾಂಗಣದಲ್ಲಿ ಸಾಮೂಹಿಕವಾಗಿ ಏಸುವನ್ನು ಪ್ರಾರ್ಥಿಸಿದರು.</p>.<p>ಚರ್ಚ್ ಸಭಾಂಗಣದ ಪೀಠದಲ್ಲಿದ್ದ ಫಾದರ್ ಅವರು ಏಸು 4 ಉದ್ದೇಶಗಳಿಗಾಗಿ ಜನ್ಮತಾಳಿ ಬಂದರು ಎನ್ನಲಾದ ಪ್ರೀತಿ, ಸಂತೋಷ, ಭರವಸೆ ಮತ್ತು ನಂಬಿಕೆಗಳನ್ನು ಬೋಧಿಸಿದರು. ಏಸುವನ್ನು ಕುರಿತ ವಿವಿಧ ಸಾಹಿತ್ಯದ ಹಾಡುಗಳನ್ನು ಸಾಮೂಹಿಕವಾಗಿ ಹಾಡಿ ಭಕ್ತಿಭಾವ ಮೆರೆದರು.</p>.<p>ಪೊನ್ನಂಪೇಟೆ ಸೇಂಟ್ ಅಂಥೋಣಿ ಚರ್ಚ್ ಮುಂದೆ ಗೋದಲಿಯನ್ನು ಸುಂದರವಾಗಿ ರೂಪಿಸಲಾಗಿತ್ತು. ಕೆಲವು ಕಾಳುಗಳನ್ನು ಮೊಳೆಗ ಕೊಟ್ಟು ಬೆಳೆಸಿ ಹುಲ್ಲಿನ ರೂಪ ಮೂಡಿಸಿ ಅದರ ಮೇಲೆ ಏಸುವಿನ ಪ್ರತಿ ರೂಪವನ್ನು ಮಲಗಿಸಲಾಗಿತ್ತು.</p>.<p>ಗೋಣಿಕೊಪ್ಪಲು, ಪಾಲಿಬೆಟ್ಟ, ಕುಟ್ಟ, ಭದ್ರಗೋಳ, ದೇವರಪುರ ಮೊದಲಾದ ಚರ್ಚ್ಗಳಲ್ಲಿಯೂ ಶ್ರದ್ಧಾಭಕ್ತಿಯ ಕ್ರಿಸ್ಮಸ್ ಜರುಗಿತು. ಮಧ್ಯರಾತ್ರಿ 1 ಗಂಟೆವರೆಗೂ ನಡೆದ ಭಜನೆಯಲ್ಲಿ ಪಾಲ್ಗೊಂಡಿದ್ದ ಜನರು ಸಮಾಜಕ್ಕೆ ಶಾಂತಿ ಸಂದೇಶ ಬೀರಿದರು.</p>.<p>ಶ್ರೀಮಂಗಲ ಜೇಸಿ ಪ್ರೌಢಶಾಲೆಯ ಶಿಕ್ಷಕ ಬಿಂದುಸಾರ, ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಬೆನಡಿಕ್ಟ ಫರ್ನಾಂಡಿಸ್, ಸ್ಟೀಫನ್, ಮರೀನಾ, ಎಲಿನಾ, ಆರೋನ್, ಗ್ಲೆನ್, ಗ್ಲಾಕಸ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ಹೊಸಬಗೆಯ ಅದರಲ್ಲೂ ಶ್ವೇತವಸ್ತ್ರಗಳನ್ನೇ ಹೆಚ್ಚಾಗಿ ತೊಟ್ಟ ಕ್ರೈಸ್ತ ಸಮುದಾಯದ ಪುರುಷರು, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಮಂಗಳವಾರ ಮಧ್ಯರಾತ್ರಿ ಚುಮುಚುಮು ಚಳಿಯಲ್ಲಿ ಚರ್ಚಗಳ ಕಡೆಗೆ ತೆರಳಿದರು.</p>.<p>ವಿದ್ಯುತ್ ದೀಪಗಳು ಹಾಗೂ ನಕ್ಷತ್ರ ದೀಪಗಳಿಂದ ಅಲಂಕೃತವಾಗಿದ್ದ ಚರ್ಚ್ ಸಭಾಂಗಣದಲ್ಲಿ ಸಾಮೂಹಿಕವಾಗಿ ಏಸುವನ್ನು ಪ್ರಾರ್ಥಿಸಿದರು.</p>.<p>ಚರ್ಚ್ ಸಭಾಂಗಣದ ಪೀಠದಲ್ಲಿದ್ದ ಫಾದರ್ ಅವರು ಏಸು 4 ಉದ್ದೇಶಗಳಿಗಾಗಿ ಜನ್ಮತಾಳಿ ಬಂದರು ಎನ್ನಲಾದ ಪ್ರೀತಿ, ಸಂತೋಷ, ಭರವಸೆ ಮತ್ತು ನಂಬಿಕೆಗಳನ್ನು ಬೋಧಿಸಿದರು. ಏಸುವನ್ನು ಕುರಿತ ವಿವಿಧ ಸಾಹಿತ್ಯದ ಹಾಡುಗಳನ್ನು ಸಾಮೂಹಿಕವಾಗಿ ಹಾಡಿ ಭಕ್ತಿಭಾವ ಮೆರೆದರು.</p>.<p>ಪೊನ್ನಂಪೇಟೆ ಸೇಂಟ್ ಅಂಥೋಣಿ ಚರ್ಚ್ ಮುಂದೆ ಗೋದಲಿಯನ್ನು ಸುಂದರವಾಗಿ ರೂಪಿಸಲಾಗಿತ್ತು. ಕೆಲವು ಕಾಳುಗಳನ್ನು ಮೊಳೆಗ ಕೊಟ್ಟು ಬೆಳೆಸಿ ಹುಲ್ಲಿನ ರೂಪ ಮೂಡಿಸಿ ಅದರ ಮೇಲೆ ಏಸುವಿನ ಪ್ರತಿ ರೂಪವನ್ನು ಮಲಗಿಸಲಾಗಿತ್ತು.</p>.<p>ಗೋಣಿಕೊಪ್ಪಲು, ಪಾಲಿಬೆಟ್ಟ, ಕುಟ್ಟ, ಭದ್ರಗೋಳ, ದೇವರಪುರ ಮೊದಲಾದ ಚರ್ಚ್ಗಳಲ್ಲಿಯೂ ಶ್ರದ್ಧಾಭಕ್ತಿಯ ಕ್ರಿಸ್ಮಸ್ ಜರುಗಿತು. ಮಧ್ಯರಾತ್ರಿ 1 ಗಂಟೆವರೆಗೂ ನಡೆದ ಭಜನೆಯಲ್ಲಿ ಪಾಲ್ಗೊಂಡಿದ್ದ ಜನರು ಸಮಾಜಕ್ಕೆ ಶಾಂತಿ ಸಂದೇಶ ಬೀರಿದರು.</p>.<p>ಶ್ರೀಮಂಗಲ ಜೇಸಿ ಪ್ರೌಢಶಾಲೆಯ ಶಿಕ್ಷಕ ಬಿಂದುಸಾರ, ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಬೆನಡಿಕ್ಟ ಫರ್ನಾಂಡಿಸ್, ಸ್ಟೀಫನ್, ಮರೀನಾ, ಎಲಿನಾ, ಆರೋನ್, ಗ್ಲೆನ್, ಗ್ಲಾಕಸ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>