ಕಡಮಕಲ್ಲು, ಕೂಜಿಮಲೆ ಸೇರಿದಂತೆ ಪುಷ್ಪಗಿರಿ ಬೆಟ್ಟ ಶ್ರೇಣಿಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ನಿಗಾ ವಹಿಸಿದ್ದಾರೆ. ಆದರೆ, ನಕ್ಸಲರ ಸುಳಿವು ಮಾತ್ರ ಪತ್ತೆಯಾಗಿಲ್ಲ.
ಸದ್ಯ, ಬಿರು ಬೇಸಿಗೆ ಇರುವುದರಿಂದ ಎಲ್ಲೆಡೆ ಕುಡಿಯುವ ನೀರು ಬತ್ತುತ್ತಿದೆ. ನೀರಿನ ಸೆಲೆ ಇರುವ ಕಡೆ ನಕ್ಸಲರು ಹೋಗಿರಬಹುದು ಎಂಬ ಅಂದಾಜು ಇದೆ. ಈಗಾಗಲೇ ಅವರು ಕೊಡಗಿನ ಗಡಿ ದಾಟಿರಬಹುದು ಎಂದು ಮೂಲಗಳು ತಿಳಿಸಿವೆ.