<p><strong>ಮಡಿಕೇರಿ</strong>: ಕರವಲೆ ಭಗವತಿ ಮಹಿಷಮರ್ಧಿನಿ ದೇವಾಲಯ ಸಮಿತಿಯು ಈ ಬಾರಿ 27ನೇ ವರ್ಷದ ಮಂಟಪೋತ್ಸವಕ್ಕೆ ಭರದಿಂದ ತಯಾರಿ ನಡೆಸುತ್ತಿದೆ. ಸಾಂಪ್ರದಾಯಿಕ ಮಂಟಪಗಳು, ಕಲಾಕೃತಿಗಳು, ಅವುಗಳ ಚಲನವಲನಗಳು, ಪಟಾಕಿಗಳ ಜತೆಗೆ ಡಿಜಿಟಲ್ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲು ಮುಂದಾಗಿದೆ.</p>.<p>‘ಶೋಮ್ಯಾನ್ ಕ್ರಿಯೇಷನ್ಸ್’ನವರು ಮಂಟಪಕ್ಕೆ ವಿದ್ಯುತ್ ದೀಪಾಲಂಕಾರದ ಜತೆಗೆ ಡಿಜಿಟಲ್ ಸ್ಪರ್ಶ ನೀಡಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದಿಂದ ಮಂಟಪದಲ್ಲಿನ ಕಥಾ ಪ್ರಸ್ತುತಿಗೆ ವಿಶೇಷ ಮೆರುಗು ಸಿಗಲಿದೆ. ಈ ಮೆರುಗು ಹೇಗಿರಲಿದೆ ಎಂಬುದನ್ನು ಕಣ್ಣಾರೆ ನೋಡಿಯೇ ತಿಳಿಯಬೇಕು ಎಂದು ಹೇಳುತ್ತಾರೆ ಸಮಿತಿ ಅಧ್ಯಕ್ಷ ನೀರಜ್ ಬೋಪಣ್ಣ.</p>.<p>ಈ ಬಾರಿ ಅತ್ಯಂತ ವಿಶೇಷ ಎನಿಸಿದ ಕಥಾವಸ್ತುವನ್ನು ಪ್ರಸ್ತುತಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗಣಪತಿಯು ಗಜಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ಪ್ರಸಂಗವನ್ನು ಒಟ್ಟು 21 ಕಲಾಕೃತಿಗಳು ಮನೋಜ್ಞವಾಗಿ ಪ್ರಸ್ತುತಪಡಿಸಲಿವೆ. ಇದಕ್ಕಾಗಿ 2 ಟ್ರಾಕ್ಟರ್ಗಳನ್ನು ಬಳಕೆ ಮಾಡಲಾಗುತ್ತಿದೆ. ತಮಿಳುನಾಡಿನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಪ್ಲಾಟ್ ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರಾಕ್ಟರ್ ಸೆಟ್ಟಿಂಗ್ನ್ನು ಮಡಿಕೇರಿಯ ಶೋಮ್ಯಾನ್- ಕ್ರಿಯೇಷನ್ಸ್ ತಂಡ ಮಾಡಲಿದೆ. ಧ್ವನಿವರ್ಧಕವನ್ನು ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೊ ಲೈಟ್ಗಳನ್ನು ಮಡಿಕೇರಿಯ ಸ್ಕಂದ ಲೈಟ್ಸ್ ತಂಡ ಅಳವಡಿಸಲಿದೆ. </p>.<p>21 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಂಗಳೂರಿನ ಕಲಾವಿದರಾದ ಸ್ಪರ್ಶ ಆರ್ಟ್ಸ್ ಮತ್ತು ಸತ್ಯಶ್ರೀ ದಯಾ ಕಲಾಕೃತಿಗಳನ್ನು ನಿರ್ಮಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡುವುದು ವಿಶೇಷ.</p>.<p>ಡಿಜಿಟಲ್ ಸ್ಪರ್ಶ ಇರುವ ಪ್ರದರ್ಶನವನ್ನು ಚೌಕಿಯನ್ನು ನಸುಕಿನ 2.30ಕ್ಕೆ ನೀಡಲು ನಿರ್ಧರಿಸಲಾಗಿದೆ. ಕರವಲೆ ಭಗವತಿ ದೇಗುಲದ ಮುಂದೆ ಪ್ರದರ್ಶನ ನೀಡಿದ ನಂತರ ಮುತ್ತಪ್ಪ ದೇಗುಲದ ಮೂಲಕ ಮಹದೇವಪೇಟೆಯ ಮುಖ್ಯರಸ್ತೆಗೆ ಬಂದುಚೌಕಿಯಲ್ಲಿ ಮುಖ್ಯ ಪ್ರದರ್ಶನ ನೀಡಲಾಗುತ್ತದೆ. ಮಂಟಪಕ್ಕಾಗಿ ₹ 18 ಲಕ್ಷ ವೆಚ್ಚದ ಮಾಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕರವಲೆ ಭಗವತಿ ಮಹಿಷಮರ್ಧಿನಿ ದೇವಾಲಯ ಸಮಿತಿಯು ಈ ಬಾರಿ 27ನೇ ವರ್ಷದ ಮಂಟಪೋತ್ಸವಕ್ಕೆ ಭರದಿಂದ ತಯಾರಿ ನಡೆಸುತ್ತಿದೆ. ಸಾಂಪ್ರದಾಯಿಕ ಮಂಟಪಗಳು, ಕಲಾಕೃತಿಗಳು, ಅವುಗಳ ಚಲನವಲನಗಳು, ಪಟಾಕಿಗಳ ಜತೆಗೆ ಡಿಜಿಟಲ್ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲು ಮುಂದಾಗಿದೆ.</p>.<p>‘ಶೋಮ್ಯಾನ್ ಕ್ರಿಯೇಷನ್ಸ್’ನವರು ಮಂಟಪಕ್ಕೆ ವಿದ್ಯುತ್ ದೀಪಾಲಂಕಾರದ ಜತೆಗೆ ಡಿಜಿಟಲ್ ಸ್ಪರ್ಶ ನೀಡಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದಿಂದ ಮಂಟಪದಲ್ಲಿನ ಕಥಾ ಪ್ರಸ್ತುತಿಗೆ ವಿಶೇಷ ಮೆರುಗು ಸಿಗಲಿದೆ. ಈ ಮೆರುಗು ಹೇಗಿರಲಿದೆ ಎಂಬುದನ್ನು ಕಣ್ಣಾರೆ ನೋಡಿಯೇ ತಿಳಿಯಬೇಕು ಎಂದು ಹೇಳುತ್ತಾರೆ ಸಮಿತಿ ಅಧ್ಯಕ್ಷ ನೀರಜ್ ಬೋಪಣ್ಣ.</p>.<p>ಈ ಬಾರಿ ಅತ್ಯಂತ ವಿಶೇಷ ಎನಿಸಿದ ಕಥಾವಸ್ತುವನ್ನು ಪ್ರಸ್ತುತಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗಣಪತಿಯು ಗಜಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ಪ್ರಸಂಗವನ್ನು ಒಟ್ಟು 21 ಕಲಾಕೃತಿಗಳು ಮನೋಜ್ಞವಾಗಿ ಪ್ರಸ್ತುತಪಡಿಸಲಿವೆ. ಇದಕ್ಕಾಗಿ 2 ಟ್ರಾಕ್ಟರ್ಗಳನ್ನು ಬಳಕೆ ಮಾಡಲಾಗುತ್ತಿದೆ. ತಮಿಳುನಾಡಿನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಪ್ಲಾಟ್ ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರಾಕ್ಟರ್ ಸೆಟ್ಟಿಂಗ್ನ್ನು ಮಡಿಕೇರಿಯ ಶೋಮ್ಯಾನ್- ಕ್ರಿಯೇಷನ್ಸ್ ತಂಡ ಮಾಡಲಿದೆ. ಧ್ವನಿವರ್ಧಕವನ್ನು ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೊ ಲೈಟ್ಗಳನ್ನು ಮಡಿಕೇರಿಯ ಸ್ಕಂದ ಲೈಟ್ಸ್ ತಂಡ ಅಳವಡಿಸಲಿದೆ. </p>.<p>21 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಂಗಳೂರಿನ ಕಲಾವಿದರಾದ ಸ್ಪರ್ಶ ಆರ್ಟ್ಸ್ ಮತ್ತು ಸತ್ಯಶ್ರೀ ದಯಾ ಕಲಾಕೃತಿಗಳನ್ನು ನಿರ್ಮಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡುವುದು ವಿಶೇಷ.</p>.<p>ಡಿಜಿಟಲ್ ಸ್ಪರ್ಶ ಇರುವ ಪ್ರದರ್ಶನವನ್ನು ಚೌಕಿಯನ್ನು ನಸುಕಿನ 2.30ಕ್ಕೆ ನೀಡಲು ನಿರ್ಧರಿಸಲಾಗಿದೆ. ಕರವಲೆ ಭಗವತಿ ದೇಗುಲದ ಮುಂದೆ ಪ್ರದರ್ಶನ ನೀಡಿದ ನಂತರ ಮುತ್ತಪ್ಪ ದೇಗುಲದ ಮೂಲಕ ಮಹದೇವಪೇಟೆಯ ಮುಖ್ಯರಸ್ತೆಗೆ ಬಂದುಚೌಕಿಯಲ್ಲಿ ಮುಖ್ಯ ಪ್ರದರ್ಶನ ನೀಡಲಾಗುತ್ತದೆ. ಮಂಟಪಕ್ಕಾಗಿ ₹ 18 ಲಕ್ಷ ವೆಚ್ಚದ ಮಾಡಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>