ಬೇರೆ ಜಿಲ್ಲೆಗೆ ಹೋಲಿಸಿದರೆ ಉತ್ತಮ ಸೇವೆ
ಟೀಕೆಗಳು ಏನೇ ಇದ್ದರೂ ಕೊಡಗಿನಲ್ಲಿ ಬೇರೆ ಜಿಲ್ಲೆಗೆ ಹೋಲಿಸಿದರೆ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಹಳಷ್ಟು ಮಂದಿ ರೋಗಿಗಳು ಹೇಳುತ್ತಾರೆ. ಲಂಚಗುಳಿತನ ಸತಾಯಿಸುವುದು ನಿರ್ಲಕ್ಷ್ಯ ಇಲ್ಲಿ ಕಡಿಮೆ ಇದೆ. ಹೆಚ್ಚಿನ ವೈದ್ಯರು ಲಂಚ ಕೇಳುವುದಿಲ್ಲ ಸತಾಯಿಸುವುದಿಲ್ಲ ಉಚಿತ ಔಷಧಿಗಳನ್ನು ನೀಡುತ್ತಾರೆ ಹೆಚ್ಚಿನ ನಿಗಾ ವಹಿಸುತ್ತಾರೆ ಎಂಬ ಅಭಿಪ್ರಾಯ ಹೊರ ಜಿಲ್ಲೆಗಳಲ್ಲಿದೆ. ಇದರಿಂದಾಗಿ ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಾತ್ರವಲ್ಲ ಹುಣಸೂರಿನಿಂದಲೂ ನಿತ್ಯವೂ ಇಲ್ಲಿಗೆ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಇದು ಕೊಡಗು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಹೆಗ್ಗಳಿಕೆ ಎನಿಸಿದೆ.