ಲಾಕ್ಡೌನ್ ಆದಾಗಿನಿಂದ ರಸ್ತೆಗಳಲ್ಲಿ ಜನರ ಮತ್ತು ವಾಹನಗಳ ಓಡಾಟ ಕಡಿಮೆ ಇರುವುದರಿಂದ ಕಾಡಾನೆಗಳು ಕಾಫಿ ತೋಟವನ್ನು ಆಕ್ರಮಿಸಿಕೊಂಡು, ಎಲ್ಲೆಂದರಲ್ಲಿ ಮನ ಬಂದಂತೆ ಸುಳಿದಾಡುತ್ತಿವೆ. ಕೊಡಗಿನ ಯಾವ ರಸ್ತೆಯಲ್ಲಿ ಓಡಾಡಿದರೂ ಆನೆಗಳ ಹಿಂಡೇ ಕಂಡು ಬರುತ್ತಿದೆ. ಜತೆಗೆ, ಜನರ ಪ್ರಾಣಕ್ಕೂ ಅಪಾಯ ಉಂಟಾಗುತ್ತಿದೆ. ಹೀಗೆ, ಸುಳಿದಾಡುತ್ತಿರುವ ಆನೆಗಳಿಂದಲೇ ಸೋಮವಾರ ಪೊನ್ನಂಪೇಟೆ ಮುಖ್ಯರಸ್ತೆ ಪಕ್ಕದಲ್ಲಿರುವ ಪಿಎಚ್ಎಸ್ ಕಾಲೊನಿಯ ರಂಗಸ್ವಾಮಿ ಎಂಬುವವರು ಮೃತಪಟ್ಟಿದ್ದರು.