‘ಮತದಾನ ಮಾಡಿದಿದ್ದರೆ ನಮ್ಮ ಅಸ್ಮಿತೆಯನ್ನೇ ಕಳೆದುಕೊಂಡಂತೆ’
ಮತದಾನವು ಮುಖ್ಯವಾದ ಸಂಗತಿ. ಅದು ನಮ್ಮ ಹಕ್ಕು. ಮತದಾನ ಮಾಡದೇ ಸುಮ್ಮನಿರುವವರು ಅನೇಕ ಮಂದಿ ಇದ್ದಾರೆ. ಇದು ಸರಿಯಲ್ಲ. ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದರೆ ಮಾತ್ರವೇ ಭಾರತ ಅಭಿವೃದ್ಧಿಯಾಗುತ್ತದೆ.
ಮತದಾನ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ಹಣ ಸೇರಿದಂತೆ ಯಾವುದೇ ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ, ಯಾವುದೇ ಪೂರ್ವಾಗ್ರಹ ಭಾವನೆಗಳಿಲ್ಲದೇ, ಸೂಕ್ತ ವ್ಯಕ್ತಿಗೆ ಮತದಾನ ಮಾಡಬೇಕು.
ಒಂದು ವೇಳೆ ಮತದಾನ ಮಾಡದೇ ಇದ್ದರೆ, ನಾವೇ ನಮ್ಮ ಅಸ್ಮಿತೆಯನ್ನು ಕಳೆದುಕೊಂಡಂತೆ. ಸೂಕ್ತ ಜನಪ್ರತಿನಿಧಿ ಆಯ್ಕೆಯಾಗದೇ ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ. ಹಾಗಾಗಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಲೇಬೇಕು.
–ಅಂಕಿತಾ ಸುರೇಶ್, ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರು. (ಕೊಡಗು ಜಿಲ್ಲೆಯ ಕಂಬಿಬಾಣೆಯ ನಿವಾಸಿ)