<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ತಗ್ಗಿದೆ. ಶುಕ್ರವಾರದವರೆಗೂ ಆಗಾಗ ನಗರದಲ್ಲಿ ಅಬ್ಬರಿಸುತ್ತಿದ್ದ ವರುಣ ಶನಿವಾರ ಶಾಂತವಾಯಿತು.</p>.<p>ಶನಿವಾರ ನಸುಕು ಮತ್ತು ಬೆಳಿಗ್ಗೆ ಸಾಧಾರಣ ಮಳೆಯಾದರೂ, ನಂತರ ಮಳೆ ಇರಲಿಲ್ಲ. ಆದರೆ, ದಿನವಿಡೀ ದಟ್ಟ ಮೋಡ ಕವಿದ ವಾತಾವರಣವಿದ್ದು, ಇನ್ನೇನೂ ಮಳೆ ಬರಬಹುದು ಎಂಬಂತಿತ್ತು. ಆದರೆ, ಮಳೆ ಹನಿಗಳು ಉದುರಲಿಲ್ಲ.</p>.<p>ಇಲ್ಲಿಯವರೆಗೂ ನಿರಂತರ ಮಳೆಯಾಗುತ್ತಿದ್ದು, ಸದ್ಯ ಒಂದು ದಿನ ಮಳೆ ಬಿಡುವು ನೀಡಿದ್ದರಿಂದ ತುಸು ಆರಿದ ನೆಲ ಕಂಡುಬಂತು.</p>.<p>ಶೀತಗಾಳಿ ಬಿರುಸು ಇಲ್ಲದಿದ್ದರೂ ಮುಂದುವರಿದಿದೆ. ಇದರಿಂದ ನಗರದಲ್ಲಿ ವಿಪರೀತ ಚಳಿ ಆವರಿಸಿದೆ.</p>.<p><strong>ಮುಂದೆ ಮಳೆ ಬಿರುಸುಗೊಳ್ಳುವ ನಿರೀಕ್ಷೆ:</strong></p>.<p>ಒಂದು ದಿನದ ಮಟ್ಟಿಗೆ ಮಳೆ ಬಿಡುವು ನೀಡಿದ್ದರೂ, ಮಳೆ ತಗ್ಗುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಇಲ್ಲವೇ ಸೋಮವಾರ ಮತ್ತೆ ಮಳೆ ಬಿರುಸಾಗಲಿದೆ ಎಂದು ಮುನ್ನಚ್ಚರಿಕೆ ನೀಡಿದೆ.</p>.<p><strong>ಭಾಗಮಂಡಲದಲ್ಲಿ 3.4 ಸೆಂ.ಮೀ ಮಳೆ:</strong></p>.<p>ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲ ವ್ಯಾಪ್ತಿಯಲ್ಲಿ 3.4 ಸೆಂ.ಮೀ ಮಳೆಯಾಗಿದೆ. ಮಡಿಕೇರಿಯಲ್ಲಿ 3, ಸಂಪಾಜೆಯಲ್ಲಿ 2.5, ಹುದಿಕೇರಿ, ನಾಪೋಕ್ಲು ಹಾಗೂ ಶಾಂತಳ್ಳಿ ಭಾಗದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ತಗ್ಗಿದೆ. ಶುಕ್ರವಾರದವರೆಗೂ ಆಗಾಗ ನಗರದಲ್ಲಿ ಅಬ್ಬರಿಸುತ್ತಿದ್ದ ವರುಣ ಶನಿವಾರ ಶಾಂತವಾಯಿತು.</p>.<p>ಶನಿವಾರ ನಸುಕು ಮತ್ತು ಬೆಳಿಗ್ಗೆ ಸಾಧಾರಣ ಮಳೆಯಾದರೂ, ನಂತರ ಮಳೆ ಇರಲಿಲ್ಲ. ಆದರೆ, ದಿನವಿಡೀ ದಟ್ಟ ಮೋಡ ಕವಿದ ವಾತಾವರಣವಿದ್ದು, ಇನ್ನೇನೂ ಮಳೆ ಬರಬಹುದು ಎಂಬಂತಿತ್ತು. ಆದರೆ, ಮಳೆ ಹನಿಗಳು ಉದುರಲಿಲ್ಲ.</p>.<p>ಇಲ್ಲಿಯವರೆಗೂ ನಿರಂತರ ಮಳೆಯಾಗುತ್ತಿದ್ದು, ಸದ್ಯ ಒಂದು ದಿನ ಮಳೆ ಬಿಡುವು ನೀಡಿದ್ದರಿಂದ ತುಸು ಆರಿದ ನೆಲ ಕಂಡುಬಂತು.</p>.<p>ಶೀತಗಾಳಿ ಬಿರುಸು ಇಲ್ಲದಿದ್ದರೂ ಮುಂದುವರಿದಿದೆ. ಇದರಿಂದ ನಗರದಲ್ಲಿ ವಿಪರೀತ ಚಳಿ ಆವರಿಸಿದೆ.</p>.<p><strong>ಮುಂದೆ ಮಳೆ ಬಿರುಸುಗೊಳ್ಳುವ ನಿರೀಕ್ಷೆ:</strong></p>.<p>ಒಂದು ದಿನದ ಮಟ್ಟಿಗೆ ಮಳೆ ಬಿಡುವು ನೀಡಿದ್ದರೂ, ಮಳೆ ತಗ್ಗುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ ಇಲ್ಲವೇ ಸೋಮವಾರ ಮತ್ತೆ ಮಳೆ ಬಿರುಸಾಗಲಿದೆ ಎಂದು ಮುನ್ನಚ್ಚರಿಕೆ ನೀಡಿದೆ.</p>.<p><strong>ಭಾಗಮಂಡಲದಲ್ಲಿ 3.4 ಸೆಂ.ಮೀ ಮಳೆ:</strong></p>.<p>ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲ ವ್ಯಾಪ್ತಿಯಲ್ಲಿ 3.4 ಸೆಂ.ಮೀ ಮಳೆಯಾಗಿದೆ. ಮಡಿಕೇರಿಯಲ್ಲಿ 3, ಸಂಪಾಜೆಯಲ್ಲಿ 2.5, ಹುದಿಕೇರಿ, ನಾಪೋಕ್ಲು ಹಾಗೂ ಶಾಂತಳ್ಳಿ ಭಾಗದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>