<p><strong>ಗೋಣಿಕೊಪ್ಪಲು:</strong> ‘ಮೊಬೈಲ್ ಹಾಗೂ ತಂತ್ರಜ್ಞಾನದ ಮೋಹವು ಓದು ಹಾಗೂ ಪುಸ್ತಕಗಳನ್ನು ಕೆಳ ಸ್ಥಾನಕ್ಕೆ ತಳ್ಳಿ ವ್ಯಕ್ತಿಯ ಉನ್ನತಿಗೆ ಮಾರಕವಾಗುತ್ತಿದೆ’ ಎಂದು ಪಂಜಾಬ್ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮೊಹಿಂದರ್ ಪ್ರತಾಪ್ ಸತಿಜ ಕಳವಳ ವ್ಯಕ್ತಪಡಿಸಿದರು.</p>.<p>ಗೋಣಿಕೊಪ್ಪಲು ಕಾವೇರಿ ಕಾಲೇಜು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರ ಹಾಗೂ ಐಕ್ಯೂಎಸಿ ಸೆಲ್ ವತಿಯಿಂದ ಶನಿವಾರ ನಡೆದ ‘ಮಾಹಿತಿ ಸಾಕ್ಷರತೆ ಮತ್ತು ಓದುವ ಹವ್ಯಾಸ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಮೊಬೈಲ್ ಫೋನ್ ಮೋಹದಿಂದ ಹೊರಬಂದು ಪುಸ್ತಕಗಳನ್ನು ಓದು ಹವ್ಯಾಸವನ್ನು ರೂಢಿಸಿಕೊಳ್ಳುವುದು ಅಗತ್ಯ. ಓದುವ ತಂತ್ರಗಾರಿಕೆ ಮತ್ತು ಹವ್ಯಾಸಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬಲ್ಲದು. ಪುಸ್ತಕಗಳಲ್ಲಿ ಜ್ಞಾನದ ಬಂಡಾರ ಅಡಗಿದ್ದು, ಜ್ಞಾನ ಸಂಪಾದನೆಗಾಗಿ ಪುಸ್ತಕಗಳನ್ನು ಓದುವುದು ಅತ್ಯಗತ್ಯ’ ಎಂದರು.</p>.<p>ಬೆಂಗಳೂರಿನ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಪ್ರಾಧ್ಯಾಪಕ ಎಂ.ಕೃಷ್ಣಮೂರ್ತಿ ಗ್ರಂಥಾಲಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ, ‘ಮೊಬೈಲ್ ತಂತ್ರಜ್ಞಾನದಿಂದ ತಿಳಿದುಕೊಂಡ ವಿಷಯಗಳು ಹೆಚ್ಚು ಸಮಯ ಮನಸ್ಸಿನಲ್ಲಿ ಉಳಿಯುವುದಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಗಳನ್ನು ಓದುವುದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.</p>.<p>ಉಪ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಡಾ.ನಯನ ತಮ್ಮಯ್ಯ, ಗ್ರಂಥಪಾಲಕಿ ಟಿ.ಕೆ.ಲತಾ, ಗ್ರಂಥಾಲಯ ಸಹಾಯಕಿ ಅನುರಾಧಾ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ‘ಮೊಬೈಲ್ ಹಾಗೂ ತಂತ್ರಜ್ಞಾನದ ಮೋಹವು ಓದು ಹಾಗೂ ಪುಸ್ತಕಗಳನ್ನು ಕೆಳ ಸ್ಥಾನಕ್ಕೆ ತಳ್ಳಿ ವ್ಯಕ್ತಿಯ ಉನ್ನತಿಗೆ ಮಾರಕವಾಗುತ್ತಿದೆ’ ಎಂದು ಪಂಜಾಬ್ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಮೊಹಿಂದರ್ ಪ್ರತಾಪ್ ಸತಿಜ ಕಳವಳ ವ್ಯಕ್ತಪಡಿಸಿದರು.</p>.<p>ಗೋಣಿಕೊಪ್ಪಲು ಕಾವೇರಿ ಕಾಲೇಜು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೇಂದ್ರ ಹಾಗೂ ಐಕ್ಯೂಎಸಿ ಸೆಲ್ ವತಿಯಿಂದ ಶನಿವಾರ ನಡೆದ ‘ಮಾಹಿತಿ ಸಾಕ್ಷರತೆ ಮತ್ತು ಓದುವ ಹವ್ಯಾಸ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ಮೊಬೈಲ್ ಫೋನ್ ಮೋಹದಿಂದ ಹೊರಬಂದು ಪುಸ್ತಕಗಳನ್ನು ಓದು ಹವ್ಯಾಸವನ್ನು ರೂಢಿಸಿಕೊಳ್ಳುವುದು ಅಗತ್ಯ. ಓದುವ ತಂತ್ರಗಾರಿಕೆ ಮತ್ತು ಹವ್ಯಾಸಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬಲ್ಲದು. ಪುಸ್ತಕಗಳಲ್ಲಿ ಜ್ಞಾನದ ಬಂಡಾರ ಅಡಗಿದ್ದು, ಜ್ಞಾನ ಸಂಪಾದನೆಗಾಗಿ ಪುಸ್ತಕಗಳನ್ನು ಓದುವುದು ಅತ್ಯಗತ್ಯ’ ಎಂದರು.</p>.<p>ಬೆಂಗಳೂರಿನ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಪ್ರಾಧ್ಯಾಪಕ ಎಂ.ಕೃಷ್ಣಮೂರ್ತಿ ಗ್ರಂಥಾಲಯದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ, ‘ಮೊಬೈಲ್ ತಂತ್ರಜ್ಞಾನದಿಂದ ತಿಳಿದುಕೊಂಡ ವಿಷಯಗಳು ಹೆಚ್ಚು ಸಮಯ ಮನಸ್ಸಿನಲ್ಲಿ ಉಳಿಯುವುದಿಲ್ಲ, ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಗಳನ್ನು ಓದುವುದರಿಂದ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದರು.</p>.<p>ಉಪ ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ಭಾರತಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಡಾ.ನಯನ ತಮ್ಮಯ್ಯ, ಗ್ರಂಥಪಾಲಕಿ ಟಿ.ಕೆ.ಲತಾ, ಗ್ರಂಥಾಲಯ ಸಹಾಯಕಿ ಅನುರಾಧಾ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>