ಅರ್ಚಕ ಜಗದೀಶ್ ಉಡುಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 8ಕ್ಕೆ ಮಹಾಗಣಪತಿ ಹೋಮ, 10ಕ್ಕೆ ದುರ್ಗಾ ಹೋಮ ಹಾಗೂ ಕಳಸ ಪ್ರತಿಷ್ಠಾಪನೆ, 11-30ಕ್ಕೆ ನವಕ ಕಳಸ ಪ್ರತಿಷ್ಠಾಪನೆ, ಕಳಶಾಭಿಷೇಕ, ಸಂಜೆ 5ಕ್ಕೆ ಪಂಚ ದುರ್ಗಾದೀಪ ನಮಸ್ಕಾರ, 7-30ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಪೂಜಾ ಸಂದರ್ಭ ಸಮಿತಿ ಅಧ್ಯಕ್ಷ ಸುರೇಶ್ ಬಾಬು, ಗೌರವಾಧ್ಯಕ್ಷ ಡಿ.ಕೆ. ದೊರೆ, ಕಾರ್ಯದರ್ಶಿ ವಿ.ಸಿ. ಲೋಕೇಶ್, ಪ್ರಮುಖರಾದ ಬಿ.ಬಿ. ಮೋಹನ್, ಎನ್.ಪಿ. ಗೋವಿಂದ, ಆರ್.ಸಿ. ಅಣ್ಣಪ್ಪ, ತಿಮ್ಮಶೆಟ್ಟಿ ಇದ್ದರು.