<p><strong>ಕುಶಾಲನಗರ: ‘</strong>ವನ್ಯಜೀವಿಗಳ ಮೇಲೆ ಹಗೆ ಸಾಧಿಸದೆ ನಾವು ಬದುಕೋಣ, ಅವುಗಳಿಗೂ ಅನುಕೂಲ ಮಾಡಿಕೊಡೋಣ’ ಎಂದು ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಹೇಳಿದರು.</p>.<p>ಸಮೀಪದ ದೊಡ್ಡ ಅಳುವಾರ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿ ಮಾನವ–ಸಹಬಾಳ್ವೆ, ಸಾಮರಸ್ಯ ಮತ್ತು ಜವಾಬ್ದಾರಿ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ನೈಸರ್ಗಿಕ ಸಂಪನ್ಮೂಲಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ನಾವುಗಳು ವನ್ಯಜೀವಿಗಳ ಜೊತೆ ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕಾಗುತ್ತದೆ. ಸಂಘರ್ಷಕ್ಕೆ ದಾರಿ ಮಾಡಿಕೊಡದೆ ಅನುಸರಿಸಿಕೊಳ್ಳುವ ಹಾಗೂ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ಸಲಹೆ ನೀಡಿದರು.</p>.<p>ಕಾರ್ಯಾಗಾರ ಉದ್ಘಾಟಿಸಿದ ವನ್ಯಜೀವಿ ಪಶುವೈದ್ಯಕೀಯ ತಜ್ಞ ಡಾ. ಚೆಟ್ಟಿಯಪ್ಪ ಮಾತನಾಡಿ, ‘ಆನೆಗಳು ಬಹಳ ಬುದ್ದಿವಂತ ಪ್ರಾಣಿ, ಅವುಗಳಿಗೆ ಹೆಚ್ಚು ಆಹಾರ ಬೇಕಾಗುತ್ತದೆ. ಆದಷ್ಟೂ ಜನರು ಅವುಗಳ ತಂಟೆಗೆ ಹೋಗಬಾರದು’ ಎಂದರು.</p>.<p>ಬಾಗಮಂಡಲದ ಉಪವಲಯ ಅರಣ್ಯಾಧಿಕಾರಿ ಉಮಾಶಂಕರ್ ಮಾತನಾಡಿ, ವರ್ಷದಲ್ಲಿ ಯಾವ ಋತು, ದಿನದಲ್ಲಿ ಯಾವ ಅವಧಿಯಲ್ಲಿ ಸಂಘರ್ಷ ನಡೆಯುತ್ತೆ ಎಂದು ಅಂಕಿ ಅಂಶ ಸಮೇತ ವಿವರಿಸಿದರು. ಕಾಡು ಪ್ರಾಣಿಗಳು ಕಣ್ಣಿಗೆ ಬಿದ್ದರೆ ಇಲಾಖೆಯ ಸಹಾಯ ಪಡೆಯುವಂತೆ ಕೋರಿದರು.</p>.<p>ತರಬೇತಿಗೆ 60ಕ್ಕೂ ಹೆಚ್ಚು ರೈತರು, ಸಾರ್ವಜನಿಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ: ‘</strong>ವನ್ಯಜೀವಿಗಳ ಮೇಲೆ ಹಗೆ ಸಾಧಿಸದೆ ನಾವು ಬದುಕೋಣ, ಅವುಗಳಿಗೂ ಅನುಕೂಲ ಮಾಡಿಕೊಡೋಣ’ ಎಂದು ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಹೇಳಿದರು.</p>.<p>ಸಮೀಪದ ದೊಡ್ಡ ಅಳುವಾರ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ವನ್ಯಜೀವಿ ಮಾನವ–ಸಹಬಾಳ್ವೆ, ಸಾಮರಸ್ಯ ಮತ್ತು ಜವಾಬ್ದಾರಿ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.</p>.<p>‘ನೈಸರ್ಗಿಕ ಸಂಪನ್ಮೂಲಕ್ಕಾಗಿ ಸ್ಪರ್ಧೆ ನಡೆಯುತ್ತಿದೆ. ನಾವುಗಳು ವನ್ಯಜೀವಿಗಳ ಜೊತೆ ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕಾಗುತ್ತದೆ. ಸಂಘರ್ಷಕ್ಕೆ ದಾರಿ ಮಾಡಿಕೊಡದೆ ಅನುಸರಿಸಿಕೊಳ್ಳುವ ಹಾಗೂ ಎಚ್ಚರಿಕೆಯಿಂದ ಇರಬೇಕಾಗಿದೆ’ ಎಂದು ಸಲಹೆ ನೀಡಿದರು.</p>.<p>ಕಾರ್ಯಾಗಾರ ಉದ್ಘಾಟಿಸಿದ ವನ್ಯಜೀವಿ ಪಶುವೈದ್ಯಕೀಯ ತಜ್ಞ ಡಾ. ಚೆಟ್ಟಿಯಪ್ಪ ಮಾತನಾಡಿ, ‘ಆನೆಗಳು ಬಹಳ ಬುದ್ದಿವಂತ ಪ್ರಾಣಿ, ಅವುಗಳಿಗೆ ಹೆಚ್ಚು ಆಹಾರ ಬೇಕಾಗುತ್ತದೆ. ಆದಷ್ಟೂ ಜನರು ಅವುಗಳ ತಂಟೆಗೆ ಹೋಗಬಾರದು’ ಎಂದರು.</p>.<p>ಬಾಗಮಂಡಲದ ಉಪವಲಯ ಅರಣ್ಯಾಧಿಕಾರಿ ಉಮಾಶಂಕರ್ ಮಾತನಾಡಿ, ವರ್ಷದಲ್ಲಿ ಯಾವ ಋತು, ದಿನದಲ್ಲಿ ಯಾವ ಅವಧಿಯಲ್ಲಿ ಸಂಘರ್ಷ ನಡೆಯುತ್ತೆ ಎಂದು ಅಂಕಿ ಅಂಶ ಸಮೇತ ವಿವರಿಸಿದರು. ಕಾಡು ಪ್ರಾಣಿಗಳು ಕಣ್ಣಿಗೆ ಬಿದ್ದರೆ ಇಲಾಖೆಯ ಸಹಾಯ ಪಡೆಯುವಂತೆ ಕೋರಿದರು.</p>.<p>ತರಬೇತಿಗೆ 60ಕ್ಕೂ ಹೆಚ್ಚು ರೈತರು, ಸಾರ್ವಜನಿಕರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>