<p><strong>ಸುಂಟಿಕೊಪ್ಪ</strong>: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತರು ಗರಿಗಳ ಭಾನುವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.</p>.<p>ಶುಭ ಶುಕ್ರವಾರದ ಅಂಗವಾಗಿ ಕ್ರೈಸ್ತರು 40 ದಿನಗಳ ಕಾಲ ಉಪವಾಸ ಮತ್ತು ಮಾಂಸ ನಿರೋಧನೆಯೊಂದಿಗೆ ಪ್ರಾರ್ಥನೆ ವಿಶೇಷ ಧ್ಯಾನಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.</p>.<p>ಸಂತ ಅಂತೋಣಿ ಚರ್ಚ್ನ ಧರ್ಮಗುರು ವಿಜಯಕುಮಾರ್ ಮಾತನಾಡಿ, ‘ಗರಿಗಳ ಭಾನುವಾರದ ದಿನ ಬೈಬಲ್ ಶುಭಸಂದೇಶದಲ್ಲಿ ಇರುವಂತೆ ಯೇಸು ಕ್ರಿಸ್ತನನ್ನು ರಾಜರಾಗಿ ಜನರು ಘೋಷಿಸಿ ಮೆರವಣಿಗೆಯನ್ನು ನಡೆಸಿದರ ಸ್ಮರಣೆಯ ಅಂಗವಾಗಿ ಗರಿಗಳನ್ನು ಆಶೀರ್ವಚಿಸಿ ಭಕ್ತರಿಗೆ ನೀಡುವುದು ಆಚರಣೆಯ ಭಾಗವಾಗಿದೆ’ ಎಂದರು.</p>.<p>ಧರ್ಮಗುರು ವಿಜಯಕುಮಾರ್ ಅವರು ಸಂತ ಮೇರಿ ಶಾಲಾ ಆವರಣದಲ್ಲಿ ತೆಂಗಿನ ಗರಿಗಳನ್ನು ಆಶೀರ್ವಚಿಸಿ ಕ್ರೈಸ್ತ ಭಕ್ತರಿಗೆ ವಿತರಿಸಿದರು.</p>.<p>ನಂತರ ಶಾಲಾ ಆವರಣದಿಂದ ಚರ್ಚ್ವರೆಗೆ ಮೆರವಣಿಗೆಯನ್ನು ನಡೆಸಿ ವಿಶೇಷ ಗಾಯನ, ಬಲಿಪೂಜೆ, ಪ್ರಬೋಧನೆಯನ್ನು ಆರ್ಪಿಸಿದರು. ಇದರೊಂದಿಗೆ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು.</p>.<p>ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆ, ಪ್ರಬೋಧನೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ</strong>: ಇಲ್ಲಿನ ಸಂತ ಅಂತೋಣಿ ದೇವಾಲಯದಲ್ಲಿ ಕ್ರೈಸ್ತರು ಗರಿಗಳ ಭಾನುವಾರವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.</p>.<p>ಶುಭ ಶುಕ್ರವಾರದ ಅಂಗವಾಗಿ ಕ್ರೈಸ್ತರು 40 ದಿನಗಳ ಕಾಲ ಉಪವಾಸ ಮತ್ತು ಮಾಂಸ ನಿರೋಧನೆಯೊಂದಿಗೆ ಪ್ರಾರ್ಥನೆ ವಿಶೇಷ ಧ್ಯಾನಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.</p>.<p>ಸಂತ ಅಂತೋಣಿ ಚರ್ಚ್ನ ಧರ್ಮಗುರು ವಿಜಯಕುಮಾರ್ ಮಾತನಾಡಿ, ‘ಗರಿಗಳ ಭಾನುವಾರದ ದಿನ ಬೈಬಲ್ ಶುಭಸಂದೇಶದಲ್ಲಿ ಇರುವಂತೆ ಯೇಸು ಕ್ರಿಸ್ತನನ್ನು ರಾಜರಾಗಿ ಜನರು ಘೋಷಿಸಿ ಮೆರವಣಿಗೆಯನ್ನು ನಡೆಸಿದರ ಸ್ಮರಣೆಯ ಅಂಗವಾಗಿ ಗರಿಗಳನ್ನು ಆಶೀರ್ವಚಿಸಿ ಭಕ್ತರಿಗೆ ನೀಡುವುದು ಆಚರಣೆಯ ಭಾಗವಾಗಿದೆ’ ಎಂದರು.</p>.<p>ಧರ್ಮಗುರು ವಿಜಯಕುಮಾರ್ ಅವರು ಸಂತ ಮೇರಿ ಶಾಲಾ ಆವರಣದಲ್ಲಿ ತೆಂಗಿನ ಗರಿಗಳನ್ನು ಆಶೀರ್ವಚಿಸಿ ಕ್ರೈಸ್ತ ಭಕ್ತರಿಗೆ ವಿತರಿಸಿದರು.</p>.<p>ನಂತರ ಶಾಲಾ ಆವರಣದಿಂದ ಚರ್ಚ್ವರೆಗೆ ಮೆರವಣಿಗೆಯನ್ನು ನಡೆಸಿ ವಿಶೇಷ ಗಾಯನ, ಬಲಿಪೂಜೆ, ಪ್ರಬೋಧನೆಯನ್ನು ಆರ್ಪಿಸಿದರು. ಇದರೊಂದಿಗೆ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು.</p>.<p>ಈ ಸಂದರ್ಭ ಸಂತ ಕ್ಲಾರ ಕನ್ಯಾಸ್ತ್ರೀ ಮಠದ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆ, ಪ್ರಬೋಧನೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>