<p><strong>ಮಡಿಕೇರಿ:</strong> 1820ರಲ್ಲಿ ಕೊಡಗಿನ ರಾಜ 2ನೇ ಲಿಂಗರಾಜ ಒಡೆಯ ಅವರು ಇಲ್ಲಿ ನಿರ್ಮಿಸಿದ್ದ ಓಂಕಾರೇಶ್ವರ ದೇವಾಲಯದಲ್ಲಿ ಸದ್ಯ ಇರುವುದು ಕೇವಲ 22 ಗ್ರಾಂ 100 ಮಿಲಿ ಚಿನ್ನ ಮಾತ್ರ!</p>.<p>ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.</p>.<p>‘2012ರಲ್ಲಿ ಮೌಲ್ಯಮಾಪನ ಮಾಡಿರುವ ಕುರಿತ ದಾಖಲೆ ಇದ್ದರೂ ಸಮರ್ಪಕವಾಗಿಲ್ಲ. ಆದರೆ, ಈಗ ಖಚಿತವಾಗಿ ಸಿಕ್ಕಿದ ಚಿನ್ನಾಭರಣಗಳ ಪಟ್ಟಿ ಬಹಿರಂಗಪಡಿಸಿದ್ದೇವೆ’ ಎಂದರು.</p>.<p>‘ಮೌಲ್ಯಮಾಪಕರ ಮೇಲುಸ್ತುವಾರಿಯಲ್ಲಿ ಪರಿಶೀಲಿಸಿದಾಗ ಚಿನ್ನದೊಂದಿಗೆ 83 ಕೆ.ಜಿ ಬೆಳ್ಳಿ, 40 ಕೆ.ಜಿ. ಹಿತ್ತಾಳೆ, 3 ಕೆ.ಜಿ ಕಂಚು ಪತ್ತೆಯಾಯಿತು. ಸಮೀಪದ ಆಂಜನೇಯ ದೇವಾಲಯದಲ್ಲಿ 1 ಗ್ರಾಂ ಚಿನ್ನ, 29 ಕೆ.ಜಿ ಬೆಳ್ಳಿ, ಕೋಟೆ ಗಣಪತಿ ದೇವಾಲಯದಲ್ಲಿ 120 ಗ್ರಾಂ ಚಿನ್ನ, 10 ಕೆ.ಜಿ ಬೆಳ್ಳಿ ಸಿಕ್ಕಿದೆ’ ಎಂದರು.</p>.<p>ಸಮಿತಿ ಸದಸ್ಯ, ವಕೀಲ ನಿರಂಜನ್, ‘ದೇಗುಲದ ಭೂಮಿ ಸ್ವಾಧೀನಕ್ಕೆ ಲಭ್ಯವಾಗಿಲ್ಲ. ಬಹುತೇಕ ಒತ್ತುವರಿ ಆಗಿದೆ. ಈ ಬಗ್ಗೆ ಕಾನೂನು ಹೋರಾಟ ರೂಪಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> 1820ರಲ್ಲಿ ಕೊಡಗಿನ ರಾಜ 2ನೇ ಲಿಂಗರಾಜ ಒಡೆಯ ಅವರು ಇಲ್ಲಿ ನಿರ್ಮಿಸಿದ್ದ ಓಂಕಾರೇಶ್ವರ ದೇವಾಲಯದಲ್ಲಿ ಸದ್ಯ ಇರುವುದು ಕೇವಲ 22 ಗ್ರಾಂ 100 ಮಿಲಿ ಚಿನ್ನ ಮಾತ್ರ!</p>.<p>ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.</p>.<p>‘2012ರಲ್ಲಿ ಮೌಲ್ಯಮಾಪನ ಮಾಡಿರುವ ಕುರಿತ ದಾಖಲೆ ಇದ್ದರೂ ಸಮರ್ಪಕವಾಗಿಲ್ಲ. ಆದರೆ, ಈಗ ಖಚಿತವಾಗಿ ಸಿಕ್ಕಿದ ಚಿನ್ನಾಭರಣಗಳ ಪಟ್ಟಿ ಬಹಿರಂಗಪಡಿಸಿದ್ದೇವೆ’ ಎಂದರು.</p>.<p>‘ಮೌಲ್ಯಮಾಪಕರ ಮೇಲುಸ್ತುವಾರಿಯಲ್ಲಿ ಪರಿಶೀಲಿಸಿದಾಗ ಚಿನ್ನದೊಂದಿಗೆ 83 ಕೆ.ಜಿ ಬೆಳ್ಳಿ, 40 ಕೆ.ಜಿ. ಹಿತ್ತಾಳೆ, 3 ಕೆ.ಜಿ ಕಂಚು ಪತ್ತೆಯಾಯಿತು. ಸಮೀಪದ ಆಂಜನೇಯ ದೇವಾಲಯದಲ್ಲಿ 1 ಗ್ರಾಂ ಚಿನ್ನ, 29 ಕೆ.ಜಿ ಬೆಳ್ಳಿ, ಕೋಟೆ ಗಣಪತಿ ದೇವಾಲಯದಲ್ಲಿ 120 ಗ್ರಾಂ ಚಿನ್ನ, 10 ಕೆ.ಜಿ ಬೆಳ್ಳಿ ಸಿಕ್ಕಿದೆ’ ಎಂದರು.</p>.<p>ಸಮಿತಿ ಸದಸ್ಯ, ವಕೀಲ ನಿರಂಜನ್, ‘ದೇಗುಲದ ಭೂಮಿ ಸ್ವಾಧೀನಕ್ಕೆ ಲಭ್ಯವಾಗಿಲ್ಲ. ಬಹುತೇಕ ಒತ್ತುವರಿ ಆಗಿದೆ. ಈ ಬಗ್ಗೆ ಕಾನೂನು ಹೋರಾಟ ರೂಪಿಸಲಾಗುವುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>