ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಡಿಮೆಯಾಗುತ್ತಿದೆ ಮಣ್ಣಿನ ರಸಸಾರ: ಪರೀಕ್ಷೆ ಮಾಡಿಸಲು ಕೃಷಿ ವಿಜ್ಞಾನಿಗಳ ಮನವಿ

Published : 5 ಡಿಸೆಂಬರ್ 2024, 6:31 IST
Last Updated : 5 ಡಿಸೆಂಬರ್ 2024, 6:31 IST
ಫಾಲೋ ಮಾಡಿ
Comments
ಕೃಷಿ ಇಲಾಖೆಯ ಶಾಲಾ ಮಣ್ಣು ಪರೀಕ್ಷಾ ಯೋಜನೆಯ ಅಂಗವಾಗಿ ವಿರಾಜಪೇಟೆ ತಾಲ್ಲೂಕಿನ ಬಾಳಗೂಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರೈತರ ಜಮೀನುಗಳಿಗೆ ತೆರಳಿ ಪರೀಕ್ಷೆಗೆಂದು ಮಣ್ಣು ತೆಗೆಯುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿತರು
ಕೃಷಿ ಇಲಾಖೆಯ ಶಾಲಾ ಮಣ್ಣು ಪರೀಕ್ಷಾ ಯೋಜನೆಯ ಅಂಗವಾಗಿ ವಿರಾಜಪೇಟೆ ತಾಲ್ಲೂಕಿನ ಬಾಳಗೂಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರೈತರ ಜಮೀನುಗಳಿಗೆ ತೆರಳಿ ಪರೀಕ್ಷೆಗೆಂದು ಮಣ್ಣು ತೆಗೆಯುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿತರು
ಕೊಡಗಿನಲ್ಲಿ ಇನ್ನೂ ಮೂಡಬೇಕಿದೆ ವೈಜ್ಞಾನಿಕ ಅರಿವು ಆದ್ಯತೆ ವಿಷಯವಾಗಬೇಕಿದೆ ಮಣ್ಣು ಸಂರಕ್ಷಣೆ  ಎಲ್ಲ ಬೆಳೆಗಾರರೂ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಲು ಸಲಹೆ
ಅವೈಜ್ಞಾನಿಕವಾಗಿ ಗೊಬ್ಬರ ಹಾಕುವುದನ್ನು ಬಿಡಬೇಕು. ಮಣ್ಣು ಪರೀಕ್ಷೆ ಮಾಡಿಸಿಯೇ ಶಿಫಾರಸ್ಸಿನ ಪ್ರಕಾರ ಗೊಬ್ಬರ ನೀಡಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಮಣ್ಣಿನಿಂದ ದೂರ ಹಾಕಬೇಕು
ಡಾ.ನಡಾಫ್ ಮಣ್ಣು ವಿಜ್ಞಾನಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರ
ಕನಿಷ್ಠ 3 ವರ್ಷಕ್ಕೆ ಒಮ್ಮೆಯಾದರೂ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಎಲ್ಲ ಬೆಳೆಗಾರರೂ ಮಾಡಿಸಲೇಬೇಕು. ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರ್ಪಡೆ ಮಾಡಬೇಕು
ಡಾ.ಕೆ.ವಿ.ವೀರೇಂದ್ರಕುಮಾರ್ ವಿಜ್ಞಾನಿ ಸಸ್ಯ ಸಂರಕ್ಷಣೆ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ
ಮಣ್ಣಿನಲ್ಲಿ ಸಾವಯವ ಇಂಗಾಲ ಹಾಗೂ ಲಘು ಪೋಷಾಕಾಂಶಗಳು ಕಡಿಮೆಯಾಗುತ್ತಿವೆ. ಪ್ರತಿ 2ರಿಂದ 3 ವರ್ಷಗಳಿಗೆ ಒಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿಸಬೇಕು
ಚಂದ್ರಶೇಖರ್ ಕೃಷಿ ಇಲಾಖೆಯ ಜಂಟಿ ನಿರ್ದೇಶಕ
ಕೇಂದ್ರ ಸರ್ಕಾರದ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮಕ್ಕಳಿಗೆ ಮಣ್ಣು ಪರೀಕ್ಷೆಯ ಪ್ರಾಯೋಗಿಕ ಅರಿವು ಮೂಡಿಸಲಾಗಿದೆ
ಮೈತ್ರಿ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ
ಕೊಡಗಿನಲ್ಲಿ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ
ಕೇಂದ್ರ ಸರ್ಕಾರದ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಮೂಲಕ ಜಾರಿಯಾಗಿದ್ದು ವಿರಾಜಪೇಟೆ ತಾಲ್ಲೂಕಿನ ಬಾಳಗೋಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮಣ್ಣಿನ ಪರೀಕ್ಷೆ ವಿಶ್ಲೇಷಣೆಗಳನ್ನು ಕಲಿಸಲಾಗಿದೆ. ಪರಿಸರ ದಿನಾಚರಣೆಯಂದು ಈ ಯೋಜನೆಗೆ ಚಾಲನೆ ನೀಡಲಾಯಿತು. ಕೃಷಿ ಇಲಾಖೆ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶಾಲೆಯ ವತಿಯಿಂದ 25 ಮಕ್ಕಳಿಗೆ ಮಣ್ಣು ಪರೀಕ್ಷೆಯ ತರಬೇತಿ ನೀಡಲಾಯಿತು. 50 ರೈತರ ಜಮೀನುಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಂದಲೇ ಮಾದರಿಯನ್ನು ಸಂಗ್ರಹಿಸಲಾಯಿತು. ಜಮೀನಿನಲ್ಲಿ ಮಣ್ಣಿನ ಮಾದರಿಯನ್ನು ತೆಗೆಯುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿಸಲಾಯಿತು. ಬಳಿಕ ಸರ್ಕಾರ ನೀಡಿದ್ದ ಕಿಟ್‌ಗಳ ಮೂಲಕ ಸಂಗ್ರಹಿಸಿದ ಮಣ್ಣನ್ನು ವಿಶ್ಲೇಷಿಸಲಾಯಿತು. ಇದರಲ್ಲಿ ವಿದ್ಯಾರ್ಥಿಗಳೇ ವಿಶ್ಲೇಷಣೆ ಮಾಡಿ ರೈತರಿಗೆ ಸಲಹೆ ನೀಡಿದ್ದು ವಿಶೇಷವಾಗಿತ್ತು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈ ಯೋಜನೆಯ ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಹಾಗೂ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ ಮೈತ್ರಿ ‘ಈ ಯೋಜನೆಯ ಮೂಲಕ ಮಕ್ಕಳಿಗೆ ಮಣ್ಣು ಪರೀಕ್ಷೆಯ ಪ್ರಾಯೋಗಿಕ ವಿಧಾನವನ್ನು ಕಲಿಸಲಾಯಿತು. ಮಕ್ಕಳೇ ಮಣ್ಣನ್ನು ವಿಶ್ಲೇಷಣೆ ಮಾಡಿದ್ದು ಈ ಯೋಜನೆಯ ವಿಶೇಷ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT