<figcaption>""</figcaption>.<p><strong>ಕೊಳ್ಳೇಗಾಲ:</strong> ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್ ಪೋಸ್ಟ್ ಸಮೀಪದ ಮಧ್ಯರಂಗನಾಥ ದೇವಾಲಯವು ವೈಕುಂಠ ಏಕಾದಶಿಗೆ ಸಜ್ಜುಗೊಂಡಿದೆ.</p>.<p>ವರ್ಷಕ್ಕೊಮ್ಮೆ ವೈಕುಂಠ ಏಕದಾಶಿ ದಿನದಂದು ಮಾತ್ರ ದೇವಾಲಯದ ಉತ್ತರದ ಬಾಗಿಲನ್ನು ತೆರೆಯಲಾಗುತ್ತದೆ. ಅಂದು ಮಧ್ಯರಂಗನಾಥ ದೇವರಿಗೆ 150 ಕೆ.ಜಿ ಬೆಣ್ಣೆ ಅಲಂಕಾರದಿಂದ ಶೃಂಗಾರ ಮಾಡಲಾಗುತ್ತದೆ. ಅಂದಿನ ದಿನದಲ್ಲಿ ಲಕ್ಷಾಂತರ ಜನರು ಬಂದು ಹೋಗುತ್ತಾರೆ.</p>.<p>ಧಾರ್ಮಿಕ ಭಾವೈಕ್ಯಕ್ಕೆ ಹೆಸರುವಾಸಿ ಯಾದ, ಜಲಪಾತ ಗಳನ್ನು ಹೊಂದಿರುವ ತಾಣವಾದ ಶಿವನಸಮುದ್ರದಲ್ಲಿ ಮಧ್ಯರಂಗನಾಥ ದೇವಾಲಯವನ್ನು ತಮಿಳುನಾಡಿನ ದೇವಾಲಯಗಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈಗ ಮುಜಾರಾಯಿ ಇಲಾಖೆಗೆ ಸೇರಿದೆ. ಈ ದೇವಾಲಯದಲ್ಲಿ ನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯ ತೆಗೆದಿರುತ್ತದೆ ಹಾಗೂ ಮಧ್ಯಾಹ್ನಾ ದಾಸೋಹದ ವ್ಯವಸ್ಥೆಯೂ ಸಹ ಪ್ರತಿನಿತ್ಯ ಇರುತ್ತದೆ. ಹಬ್ಬಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಅಂದು ಮಾತ್ರ ಮಧ್ಯರಾತ್ರಿಯವರೆಗೂ ದೇವಾಲಯ ಪ್ರವೇಶವಿರುತ್ತದೆ.</p>.<figcaption>ಮಧ್ಯರಂಗನಾಥ ಸ್ವಾಮಿ</figcaption>.<p class="Subhead"><strong>ಇತಿಹಾಸ:</strong> ಗಂಗರು ಮತ್ತು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ 400 ವರ್ಷಗಳ ಇತಿಹಾಸವಿದೆ. ಇದು ಸುಮಾರು 250 ವರ್ಷಗಳ ಹಿಂದೆ ದ್ವೀಪಗ್ರಾಮವಾಗಿತ್ತು. ಆ ನಂತರ ಚೋಳರು ಐತಿಹಾಸಿ ವೆಸ್ಲಿ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಈ ಗ್ರಾಮದಲ್ಲಿ ಸುಮಾರು 1700 ಜನರು ವಾಸ ಮಾಡುತ್ತಿದ್ದಾರೆ. ಮಧ್ಯರಂಗನಾಥ ದೇವಾಲಯ ಈ ಹಿಂದೆ ಶೈವ ಮತ್ತು ನಾಥ ಪಂಥಕ್ಕೆ ಸೇರಿತ್ತು. ಹೊಯ್ಸಳದ ರಾಜ ವಿಷ್ಣುರ್ಧನನ ಆಳ್ವಿಕೆ ಕಾಲದಲ್ಲಿ ತಮಿಳುನಾಡಿನಿಂದ ರಾಮಾನುಜಾಚಾರ್ಯರು ಬಂದು ಮಧ್ಯರಂಗನಾಥ ದೇವಾಲಯವನ್ನು ವೈಷ್ಣವ ದೇವಾಲಯವನ್ನಾಗಿ ಪರಿರ್ವತಿಸಿದ್ದರು.</p>.<p>ಶ್ರೀರಂಗಪಟ್ಟಣದಲ್ಲಿ ಇರುವ ಆದಿರಂಗ ದೇವಾಸ್ಥಾನ, ಶಿವನ ಸಮುದ್ರದ ಮಧ್ಯರಂದ ದೇವಾಸ್ಥಾನ ಹಾಗೂ ತಮಿಳುನಾಡಿನ ಶ್ರೀರಂಗದಲ್ಲಿರುವ ಅಂತ್ಯರಂಗ ದೇವಾಸ್ಥಾನವನ್ನು ವೈಕುಂಠ ಏಕದಾಶಿ ದಿನದಂದು ಸೂರ್ಯ ಉದಯಿಸುವುದರಿಂದ ಸೂರ್ಯ ಮುಳುಗಡೆಯಾಗುವುದರ ಒಳಗೆ ನೋಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಮೂರು ದೇವಾಲಯಗಳ ಸುತ್ತ ಕಾವೇರಿ ನದಿ ಹರಿಯುತ್ತದೆ. ಈ ಮೂರು ದೇವಾಲಯಗಳನ್ನು ನೋಡಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ, ಪ್ರತಿವರ್ಷವೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಬಂದು ಹೋಗುತ್ತಾರೆ ಎಂದು ದೇವಾಲಯದ ಅರ್ಚಕ ಮಾಧವನ್ ಭಟ್ಟಾಚಾರ್ ಪ್ರಜಾವಾಣಿಗೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಕೊಳ್ಳೇಗಾಲ:</strong> ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್ ಪೋಸ್ಟ್ ಸಮೀಪದ ಮಧ್ಯರಂಗನಾಥ ದೇವಾಲಯವು ವೈಕುಂಠ ಏಕಾದಶಿಗೆ ಸಜ್ಜುಗೊಂಡಿದೆ.</p>.<p>ವರ್ಷಕ್ಕೊಮ್ಮೆ ವೈಕುಂಠ ಏಕದಾಶಿ ದಿನದಂದು ಮಾತ್ರ ದೇವಾಲಯದ ಉತ್ತರದ ಬಾಗಿಲನ್ನು ತೆರೆಯಲಾಗುತ್ತದೆ. ಅಂದು ಮಧ್ಯರಂಗನಾಥ ದೇವರಿಗೆ 150 ಕೆ.ಜಿ ಬೆಣ್ಣೆ ಅಲಂಕಾರದಿಂದ ಶೃಂಗಾರ ಮಾಡಲಾಗುತ್ತದೆ. ಅಂದಿನ ದಿನದಲ್ಲಿ ಲಕ್ಷಾಂತರ ಜನರು ಬಂದು ಹೋಗುತ್ತಾರೆ.</p>.<p>ಧಾರ್ಮಿಕ ಭಾವೈಕ್ಯಕ್ಕೆ ಹೆಸರುವಾಸಿ ಯಾದ, ಜಲಪಾತ ಗಳನ್ನು ಹೊಂದಿರುವ ತಾಣವಾದ ಶಿವನಸಮುದ್ರದಲ್ಲಿ ಮಧ್ಯರಂಗನಾಥ ದೇವಾಲಯವನ್ನು ತಮಿಳುನಾಡಿನ ದೇವಾಲಯಗಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈಗ ಮುಜಾರಾಯಿ ಇಲಾಖೆಗೆ ಸೇರಿದೆ. ಈ ದೇವಾಲಯದಲ್ಲಿ ನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯ ತೆಗೆದಿರುತ್ತದೆ ಹಾಗೂ ಮಧ್ಯಾಹ್ನಾ ದಾಸೋಹದ ವ್ಯವಸ್ಥೆಯೂ ಸಹ ಪ್ರತಿನಿತ್ಯ ಇರುತ್ತದೆ. ಹಬ್ಬಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ ಅಂದು ಮಾತ್ರ ಮಧ್ಯರಾತ್ರಿಯವರೆಗೂ ದೇವಾಲಯ ಪ್ರವೇಶವಿರುತ್ತದೆ.</p>.<figcaption>ಮಧ್ಯರಂಗನಾಥ ಸ್ವಾಮಿ</figcaption>.<p class="Subhead"><strong>ಇತಿಹಾಸ:</strong> ಗಂಗರು ಮತ್ತು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ 400 ವರ್ಷಗಳ ಇತಿಹಾಸವಿದೆ. ಇದು ಸುಮಾರು 250 ವರ್ಷಗಳ ಹಿಂದೆ ದ್ವೀಪಗ್ರಾಮವಾಗಿತ್ತು. ಆ ನಂತರ ಚೋಳರು ಐತಿಹಾಸಿ ವೆಸ್ಲಿ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಈ ಗ್ರಾಮದಲ್ಲಿ ಸುಮಾರು 1700 ಜನರು ವಾಸ ಮಾಡುತ್ತಿದ್ದಾರೆ. ಮಧ್ಯರಂಗನಾಥ ದೇವಾಲಯ ಈ ಹಿಂದೆ ಶೈವ ಮತ್ತು ನಾಥ ಪಂಥಕ್ಕೆ ಸೇರಿತ್ತು. ಹೊಯ್ಸಳದ ರಾಜ ವಿಷ್ಣುರ್ಧನನ ಆಳ್ವಿಕೆ ಕಾಲದಲ್ಲಿ ತಮಿಳುನಾಡಿನಿಂದ ರಾಮಾನುಜಾಚಾರ್ಯರು ಬಂದು ಮಧ್ಯರಂಗನಾಥ ದೇವಾಲಯವನ್ನು ವೈಷ್ಣವ ದೇವಾಲಯವನ್ನಾಗಿ ಪರಿರ್ವತಿಸಿದ್ದರು.</p>.<p>ಶ್ರೀರಂಗಪಟ್ಟಣದಲ್ಲಿ ಇರುವ ಆದಿರಂಗ ದೇವಾಸ್ಥಾನ, ಶಿವನ ಸಮುದ್ರದ ಮಧ್ಯರಂದ ದೇವಾಸ್ಥಾನ ಹಾಗೂ ತಮಿಳುನಾಡಿನ ಶ್ರೀರಂಗದಲ್ಲಿರುವ ಅಂತ್ಯರಂಗ ದೇವಾಸ್ಥಾನವನ್ನು ವೈಕುಂಠ ಏಕದಾಶಿ ದಿನದಂದು ಸೂರ್ಯ ಉದಯಿಸುವುದರಿಂದ ಸೂರ್ಯ ಮುಳುಗಡೆಯಾಗುವುದರ ಒಳಗೆ ನೋಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಮೂರು ದೇವಾಲಯಗಳ ಸುತ್ತ ಕಾವೇರಿ ನದಿ ಹರಿಯುತ್ತದೆ. ಈ ಮೂರು ದೇವಾಲಯಗಳನ್ನು ನೋಡಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ, ಪ್ರತಿವರ್ಷವೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಬಂದು ಹೋಗುತ್ತಾರೆ ಎಂದು ದೇವಾಲಯದ ಅರ್ಚಕ ಮಾಧವನ್ ಭಟ್ಟಾಚಾರ್ ಪ್ರಜಾವಾಣಿಗೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>