ಶ್ರೀರಂಗಪಟ್ಟಣದಲ್ಲಿ ಇರುವ ಆದಿರಂಗ ದೇವಾಸ್ಥಾನ, ಶಿವನ ಸಮುದ್ರದ ಮಧ್ಯರಂದ ದೇವಾಸ್ಥಾನ ಹಾಗೂ ತಮಿಳುನಾಡಿನ ಶ್ರೀರಂಗದಲ್ಲಿರುವ ಅಂತ್ಯರಂಗ ದೇವಾಸ್ಥಾನವನ್ನು ವೈಕುಂಠ ಏಕದಾಶಿ ದಿನದಂದು ಸೂರ್ಯ ಉದಯಿಸುವುದರಿಂದ ಸೂರ್ಯ ಮುಳುಗಡೆಯಾಗುವುದರ ಒಳಗೆ ನೋಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಮೂರು ದೇವಾಲಯಗಳ ಸುತ್ತ ಕಾವೇರಿ ನದಿ ಹರಿಯುತ್ತದೆ. ಈ ಮೂರು ದೇವಾಲಯಗಳನ್ನು ನೋಡಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ, ಪ್ರತಿವರ್ಷವೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಬಂದು ಹೋಗುತ್ತಾರೆ ಎಂದು ದೇವಾಲಯದ ಅರ್ಚಕ ಮಾಧವನ್ ಭಟ್ಟಾಚಾರ್ ಪ್ರಜಾವಾಣಿಗೆ ಹೇಳಿದರು.