<p><strong>ಬಂಗಾರಪೇಟೆ:</strong> ಆಂಧ್ರಪ್ರದೇಶದ ಕುಪ್ಪಂಗೆ ಹರಿದ ಕೃಷ್ಣಾ ನದಿ ನೀರು ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆಗೆ ಹರಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.</p>.<p>ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆ ಈ ಭಾಗದ ದೊಡ್ಡ ಕೆರೆಯಾಗಿದ್ದು, ರೈತರಿಗೆ ಜೀವನಾಡಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಕೆರೆ ಬತ್ತಿ ಹೋಗಿ, ಅಂತರ್ಜಲ ಮಟ್ಟ ಕುಸಿದಿದೆ.</p>.<p>ತಾಲ್ಲೂಕಿನ ಗಡಿಯಿಂದ 2 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಗುಡಿಪೆಲ್ಲಿ ಗ್ರಾಮಕ್ಕೆ ಕೃಷ್ಣಾ ನದಿ ನೀರನ್ನು ಕಾಲುವೆ ಮೂಲಕ ಹರಿಸಲಾಗಿದೆ. ಕೃಷ್ಣಾ ನದಿ ಕುಡಿಯುವ ಯೋಜನೆಯಡಿ ನೀರನ್ನು ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆಗೆ ಹರಿಸಿದರೆ ಇಲ್ಲಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದ ಜನ, ಜಾನುವಾರುಗಳಿಗೆ ಸಹಾಯವಾಗಲಿದೆ.</p>.<p>ಈ ಭಾಗದ ಜನರಿಗೆ ನೀರಿನ ಮೂಲವಿಲ್ಲದೆ ಕೊಳವೆ ಬಾವಿಯನ್ನೇ ಅವಲಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹಾಗಾಗಿ ನದಿ ತಿರುವು ಮಾಡುವ ಮೂಲಕ ಈ ಭಾಗದ ಜನತೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬುದು ಈ ಭಾಗದವರ ಒತ್ತಾಯವಾಗಿದೆ.</p>.<p>ಕೃಷ್ಣಾ ನದಿಯ ನೀರನ್ನು ಈಗಾಗಲೇ ಶಾಂತಿಪುರಂ ಮತ್ತು ಗುಡಿಪೆಲ್ಲಿ ಮಂಡಲಂ, ಕುಪ್ಪಂ ಮಂಡಲಂ ವ್ಯಾಪ್ತಿಯ ಸಣ್ಣ ಕೆರೆಗಳಿಗೆ ಹರಿಸಲಾಗಿದೆ. ಹಾಗಾಗಿ ಕೃಷಾ ನದಿ ನೀರನ್ನು ಮುಷ್ಟ್ರಹಳ್ಳಿ ಕೆರೆಗೆ ಹರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.</p>.<div><blockquote>ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಗ್ರಾಮದವರೆಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಅದೇ ರೀತಿ ಕೃಷ್ಣಾ ನದಿ ನೀರನ್ನು ಗುಡಿವಂಕ ಹಳ್ಳದ ಮುಖಾಂತರ ಮುಷ್ಟ್ರಹಳ್ಳಿ ಕೆರೆ ಹರಿಸಿದರೆ ರೈತರ ಸಂಕಷ್ಟಗಳು ದೂರವಾಗಲಿದೆ.</blockquote><span class="attribution"> ಮಂಜುಳಾ ಎಸ್.ಕೆ.ಜಯಣ್ಣ ಅಧ್ಯಕ್ಷೆ ದೋಣಿಮಡಗು ಗ್ರಾಮ ಪಂಚಾಯಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ಆಂಧ್ರಪ್ರದೇಶದ ಕುಪ್ಪಂಗೆ ಹರಿದ ಕೃಷ್ಣಾ ನದಿ ನೀರು ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆಗೆ ಹರಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.</p>.<p>ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆ ಈ ಭಾಗದ ದೊಡ್ಡ ಕೆರೆಯಾಗಿದ್ದು, ರೈತರಿಗೆ ಜೀವನಾಡಿಯಾಗಿದೆ. ಕಳೆದ ಮೂರು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಕೆರೆ ಬತ್ತಿ ಹೋಗಿ, ಅಂತರ್ಜಲ ಮಟ್ಟ ಕುಸಿದಿದೆ.</p>.<p>ತಾಲ್ಲೂಕಿನ ಗಡಿಯಿಂದ 2 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಗುಡಿಪೆಲ್ಲಿ ಗ್ರಾಮಕ್ಕೆ ಕೃಷ್ಣಾ ನದಿ ನೀರನ್ನು ಕಾಲುವೆ ಮೂಲಕ ಹರಿಸಲಾಗಿದೆ. ಕೃಷ್ಣಾ ನದಿ ಕುಡಿಯುವ ಯೋಜನೆಯಡಿ ನೀರನ್ನು ತಾಲ್ಲೂಕಿನ ಮುಷ್ಟ್ರಹಳ್ಳಿ ಕೆರೆಗೆ ಹರಿಸಿದರೆ ಇಲ್ಲಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಇದರಿಂದ ಜನ, ಜಾನುವಾರುಗಳಿಗೆ ಸಹಾಯವಾಗಲಿದೆ.</p>.<p>ಈ ಭಾಗದ ಜನರಿಗೆ ನೀರಿನ ಮೂಲವಿಲ್ಲದೆ ಕೊಳವೆ ಬಾವಿಯನ್ನೇ ಅವಲಂಬಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹಾಗಾಗಿ ನದಿ ತಿರುವು ಮಾಡುವ ಮೂಲಕ ಈ ಭಾಗದ ಜನತೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂಬುದು ಈ ಭಾಗದವರ ಒತ್ತಾಯವಾಗಿದೆ.</p>.<p>ಕೃಷ್ಣಾ ನದಿಯ ನೀರನ್ನು ಈಗಾಗಲೇ ಶಾಂತಿಪುರಂ ಮತ್ತು ಗುಡಿಪೆಲ್ಲಿ ಮಂಡಲಂ, ಕುಪ್ಪಂ ಮಂಡಲಂ ವ್ಯಾಪ್ತಿಯ ಸಣ್ಣ ಕೆರೆಗಳಿಗೆ ಹರಿಸಲಾಗಿದೆ. ಹಾಗಾಗಿ ಕೃಷಾ ನದಿ ನೀರನ್ನು ಮುಷ್ಟ್ರಹಳ್ಳಿ ಕೆರೆಗೆ ಹರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.</p>.<div><blockquote>ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಗ್ರಾಮದವರೆಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ಅದೇ ರೀತಿ ಕೃಷ್ಣಾ ನದಿ ನೀರನ್ನು ಗುಡಿವಂಕ ಹಳ್ಳದ ಮುಖಾಂತರ ಮುಷ್ಟ್ರಹಳ್ಳಿ ಕೆರೆ ಹರಿಸಿದರೆ ರೈತರ ಸಂಕಷ್ಟಗಳು ದೂರವಾಗಲಿದೆ.</blockquote><span class="attribution"> ಮಂಜುಳಾ ಎಸ್.ಕೆ.ಜಯಣ್ಣ ಅಧ್ಯಕ್ಷೆ ದೋಣಿಮಡಗು ಗ್ರಾಮ ಪಂಚಾಯಿತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>