ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೈತನ್ಯ ಮಹಾರಾಜರ ಆರಾಧನೆ ಆರಂಭ

Last Updated 8 ಜನವರಿ 2021, 7:14 IST
ಅಕ್ಷರ ಗಾತ್ರ

ಮುಳಬಾಗಿಲು: ನಗರದ ಬ್ರಹ್ಮಚೈತನ್ಯ ಮಂದಿರದಲ್ಲಿ ಬ್ರಹ್ಮ ಚೈತನ್ಯ ಟ್ರಸ್ಟ್ ಆಶ್ರಯದಲ್ಲಿ ಸದ್ಗುರು ಬ್ರಹ್ಮ ಚೈತನ್ಯ ಮಹಾರಾಜರ ಆರಾಧನೆ ಗುರುವಾರ ಪ್ರಾರಂಭವಾಯಿತು.

ಕಾಕಡಾರತಿ, ರಾಮನಾಮ ಸ್ಮರಣೆ, ಕಳಶ ಸ್ಥಾಪನೆ, ಶ್ರೀರಾಮದೇವರಿಗೆ ಅಭಿಷೇಕ ಮತ್ತು ಪೂಜೆ, ಶ್ರೀರಾಮ ಭಜನೆ ಮಂಡಳಿಯಿಂದ ಭಜನೆ ಹಾಗೂ ಹೆಣ್ಣುಮಕ್ಕಳಿಂದ ಭಜನೆ ಕಾರ್ಯಕ್ರಮ ನಡೆಯಿತು.

ಡಿ. 8ರಂದು ಕಾಕಡಾರತಿ, ರಾಮನಾಮ ಸ್ಮರಣೆ, ಕಳಶ ಸ್ಥಾಪನೆ, ಶ್ರೀರಾಮದೇವರಿಗೆ ಅಭಿಷೇಕ ಪೂಜೆ ಕಾರ್ಯಕ್ರಮ ನಡೆಯಲಿದೆ.

ಶುಕ್ಲ ಯಜುರ್ವೇದ ಸಂಘದ ಅಧ್ಯಕ್ಷ ಎಂ.ಕೆ. ವಾಸುದೇವ್ ಅಧ್ಯಕ್ಷತೆವಹಿಸುವರು. ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮವಿದೆ. ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ಹರಿಕಥೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಲಂಗೂರು ಗುರುಶಂಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT