‘ರೈಡರ್’ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಶನಿವಾರ ನಗರದ ನಾರಾಯಣಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕನ್ನಡಪರ ಸಂಘಟನೆಗಳ ಮುಖಂಡರು ಬಂದ್ ಘೋಷಣೆ ಮಾಡಿದ್ದು, ನಾನೂ ಅವರ ಜತೆ ನಿಂತುಕೊಳ್ಳುತ್ತೇನೆ. ಆದರೆ, ಬಂದ್ನಿಂದ ಪರಿವರ್ತನೆ ಆಗಬೇಕು. ಸುಮ್ಮನೆ ಬಂದ್ ಮಾಡಿದರೆ ಏನೂ ಪ್ರಯೋಜನವಿಲ್ಲ’ ಎಂದರು.