<p><strong>ಮುಳಬಾಗಿಲು:</strong> ತಾಲ್ಲೂಕಿನ ಚೀಕೂರು ಗ್ರಾಮದಲ್ಲಿ ಕೃಷಿ ಇಲಾಖೆ, ಜುವಾರಿ ಫಾರ್ಮಾ ಹಬ್ ಲಿಮಿಟೆಡ್ ಮತ್ತು ಜೈ ಕಿಸಾನ್ ಜಂಕ್ಷನ್ ಸಹಯೋಗದಲ್ಲಿ ರೈತರ ಸಮಾವೇಶ ಬುಧವಾರ ನಡೆಯಿತು.</p>.<p>ಕೃಷಿ ಇಲಾಖೆಯ ನಾಗರಾಜ್ ಬಿರಾದಾರ್ ಅವರು ಮಣ್ಣಿನ ಸವಕಳಿ, ತೇವಾಂಶ, ಮಣ್ಣಿನ ವಿಧಗಳು, ಮಣ್ಣಿನ ಸತ್ವಕ್ಕೆ ತಕ್ಕ ಬೆಳೆಗಳು ಸೇರಿದಂತೆ ಮತ್ತಿತರರ ವಿಚಾರಗಳ ಕುರಿತು ಮಾಹಿತಿ ನೀಡಿದರು.</p>.<p>ಕೃಷಿ ಅಧಿಕಾರಿ ಮನೋಹರ್ ಮಾತನಾಡಿ, ರೈತರು ಎಲ್ಲ ಋತುಗಳಲ್ಲಿ ಒಂದೇ ಬೆಳೆ ಬೆಳೆಯದೆ, ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. </p>.<p>ಇತ್ತೀಚಿಗೆ ತಾಲ್ಲೂಕಿನಾದ್ಯಂತ ಟೊಮೆಟೊ ಬೆಳೆಯನ್ನು ಅವೈಜ್ಞಾನಿಕವಾಗಿ ಬೆಳೆಯಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಟೊಮೆಟೊ ಋತುವಿನಲ್ಲಿ ಇತರೆ ಬೆಳೆಗಳನ್ನು ಬೆಳೆದು ಲಾಭ ಗಳಿಸಬಹುದು ಎಂದರು. </p>.<p>ಶಿವಕುಮಾರ್, ಸತೀಶ್ ಹಾಗೂ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು:</strong> ತಾಲ್ಲೂಕಿನ ಚೀಕೂರು ಗ್ರಾಮದಲ್ಲಿ ಕೃಷಿ ಇಲಾಖೆ, ಜುವಾರಿ ಫಾರ್ಮಾ ಹಬ್ ಲಿಮಿಟೆಡ್ ಮತ್ತು ಜೈ ಕಿಸಾನ್ ಜಂಕ್ಷನ್ ಸಹಯೋಗದಲ್ಲಿ ರೈತರ ಸಮಾವೇಶ ಬುಧವಾರ ನಡೆಯಿತು.</p>.<p>ಕೃಷಿ ಇಲಾಖೆಯ ನಾಗರಾಜ್ ಬಿರಾದಾರ್ ಅವರು ಮಣ್ಣಿನ ಸವಕಳಿ, ತೇವಾಂಶ, ಮಣ್ಣಿನ ವಿಧಗಳು, ಮಣ್ಣಿನ ಸತ್ವಕ್ಕೆ ತಕ್ಕ ಬೆಳೆಗಳು ಸೇರಿದಂತೆ ಮತ್ತಿತರರ ವಿಚಾರಗಳ ಕುರಿತು ಮಾಹಿತಿ ನೀಡಿದರು.</p>.<p>ಕೃಷಿ ಅಧಿಕಾರಿ ಮನೋಹರ್ ಮಾತನಾಡಿ, ರೈತರು ಎಲ್ಲ ಋತುಗಳಲ್ಲಿ ಒಂದೇ ಬೆಳೆ ಬೆಳೆಯದೆ, ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. </p>.<p>ಇತ್ತೀಚಿಗೆ ತಾಲ್ಲೂಕಿನಾದ್ಯಂತ ಟೊಮೆಟೊ ಬೆಳೆಯನ್ನು ಅವೈಜ್ಞಾನಿಕವಾಗಿ ಬೆಳೆಯಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಟೊಮೆಟೊ ಋತುವಿನಲ್ಲಿ ಇತರೆ ಬೆಳೆಗಳನ್ನು ಬೆಳೆದು ಲಾಭ ಗಳಿಸಬಹುದು ಎಂದರು. </p>.<p>ಶಿವಕುಮಾರ್, ಸತೀಶ್ ಹಾಗೂ ರೈತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>