<p><strong>ಬಂಗಾರಪೇಟೆ (ಕೋಲಾರ):</strong> ವಾಸಿಸಲು ಮನೆ ಇಲ್ಲ ಎಂದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ವಸತಿಗೃಹದಲ್ಲಿ ತಾತ್ಕಾಲಿಕವಾಗಿ ತಂಗಲು ಅವಕಾಶ ಮಾಡಿ ಕೊಟ್ಟರೆ, ಆತ ಸರ್ಕಾರದ ವಸತಿಗೃಹವನ್ನೇ ನೆಲಸಮಗೊಳಿಸಿ ಸ್ವಂತ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದಾನೆ.</p><p>ಕಾಮಸಮುದ್ರದ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿಯ ವಸತಿ ಗೃಹ ಅನೇಕ ದಿನಗಳಿಂದ ಖಾಲಿ ಇತ್ತು. ಹಾಗಾಗಿ ಅಲ್ಲಿ ಸ್ವಲ್ಪ ದಿನ ತಂಗಲು ನಾರಾಯಣಪ್ಪ ಎಂಬುವರಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. </p><p>ದಿನಗಳೆದಂತೆ ಅಧಿಕಾರಿಗಳು ಕೃಷಿ ಇಲಾಖೆ ವಸತಿಗೃಹವನ್ನೇ ಮರೆತುಬಿಟ್ಟಿದ್ದರು. ಇದನ್ನು ಅರಿತ ನಾರಾಯಣಪ್ಪ ಯಾರ ಗಮನಕ್ಕೂ ತಾರದೆ ವಸತಿಗೃಹವನ್ನು ಕೆಡವಿ, ಹೊಸ ಮನೆ ಕಟ್ಟಲು ಆರಂಭಿಸಿದ್ದರು. ಇಷ್ಟಾದರೂ ಈ ವಿಷಯ ಕೃಷಿ ಇಲಾಖೆ ಗಮನಕ್ಕೆ ಬಂದಿರಲಿಲ್ಲ.</p><p>ನಾರಾಯಣಪ್ಪ ರಜೆಯ ದಿನಗಳಲ್ಲಿ ಮಾತ್ರ ಹಂತ, ಹಂತವಾಗಿ ಕಟ್ಟಡ ಕಟ್ಟಿಸುತ್ತಿದ್ದರು. ಕಟ್ಟಡ ಮುಕ್ತಾಯ ಹಂತಕ್ಕೆ ತಲುಪಿದ್ದರಿಂದ ಈಚೆಗೆ ಕಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆ ಮಾಡಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.</p><p>ಗ್ರಾಮ ಪಂಚಾಯತಿ ಸಿಬ್ಬಂದಿ ಈ ವಿಷಯವನ್ನು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಾಲ್ಕು ದಿನದ ಹಿಂದೆ ಗ್ರಾಮಕ್ಕೆ ದೌಡಾಯಿಸಿದ ಹಿರಿಯ ಅಧಿಕಾರಿಗಳು ಸರ್ಕಾರಿ ವಸತಿಗೃಹದ ಜಾಗದಲ್ಲಿ ತಲೆ ಎತ್ತಿದ ನಿರ್ಮಾಣ ಹಂತದ ಕಟ್ಟಡ ಕಂಡು ಹೌಹಾರಿದ್ದಾರೆ. </p><p>ಸಹಾಯಕ ನಿರ್ದೇಶಕಿ ಪ್ರತಿಭಾ, ಸಹಾಯಕ ಕೃಷಿ ಅಧಿಕಾರಿ ವಿಜಯ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಚಂದ್ರ ಹಾಗೂ ಸಿಬ್ಬಂದಿ, ಪೊಲೀಸರ ನೆರವು ಪಡೆದು ನಿರ್ಮಾಣ ಕಾಮಗಾರಿಯನ್ನು ತಡೆದಿದ್ದಾರೆ. </p><p>ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿ ನಡೆಸದಂತೆ ನಾರಾಯಣಪ್ಪಗೆ ಎಚ್ಚರಿಸಿ, ‘ಈ ಜಾಗ ಕೃಷಿ ಇಲಾಖೆಗೆ ಸೇರಿದ್ದು’ ಎಂಬ ಫಲಕ ನೆಟ್ಟಿದ್ದಾರೆ. ಗ್ರಾಮ ಪಂಚಾಯಿತಿಗೆ ಪತ್ರ ಬರೆದು ನಾರಾಯಣಪ್ಪಗೆ ಖಾತೆ ಮಾಡದಂತೆ ಸೂಚಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><blockquote>ವಸತಿಗೃಹ ಕೆಡವಿ ಮನೆ ನಿರ್ಮಾಣ ಮಾಡುತ್ತಿರುವ ನಾರಾಯಣಪ್ಪ ಅವರ ವಿರುದ್ಧ ಕಾಮಸಮುದ್ರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.<br></blockquote><span class="attribution">– ಪ್ರತಿಭಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ</span></div>.<div><blockquote>ವಸತಿ ಗೃಹಕ್ಕೆ ಅಕ್ರಮ ಪ್ರವೇಶಿಸದಂತೆ ಸೂಚಿಸಿದ ಹೊರತಾಗಿಯೂ ನಾರಾಯಣಪ್ಪ ಮನೆ ನಿರ್ಮಾಣ ಮಾಡುತ್ತಿದ್ದರು. ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.</blockquote><span class="attribution">– ಮಧುಚಂದ್ರ, ಪಿಡಿಒ, ಕಾಮಸಮುದ್ರ</span></div>.<p><strong>ಕೊಟ್ಟು ಮರೆತ ಅಧಿಕಾರಿಗಳು!</strong></p><p>ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕೇಂದ್ರದಲ್ಲಿ ಹಲವು ದಶಕಗಳ ಹಿಂದೆ ಕೃಷಿ ಇಲಾಖೆಯ ಸಹಾಯಕ ಅಧಿಕಾರಿಗಾಗಿ ಈ ವಸತಿಗೃಹ ನಿರ್ಮಾಣ ಮಾಡಲಾಗಿತ್ತು.</p><p>ಕೆಲವು ವರ್ಷ ಅಧಿಕಾರಿಗಳು ಈ ವಸತಿಗೃಹದಲ್ಲೇ ವಾಸ ಮಾಡುತ್ತಿದ್ದರು. ವಸತಿಗೃಹ ಕಿರಿದಾಗಿದೆ ಎಂದು ಕೃಷಿ ಯಂತ್ರಗಳ ಗೋದಾಮಿನಂತೆ ಬಳಸುತ್ತಿದ್ದರು. ಗೋದಾಮಿಗೆ ಈ ಮನೆ ಸಾಲದಾಯಿತು ಎಂದು ಹೊಸ ಗೋದಾಮು ಕಟ್ಟಲಾಗಿತ್ತು. ಕೆಲವು ವರ್ಷಗಳ ಹಿಂದೆ ಅಲ್ಲಿಗೆ ಗೋದಾಮು ಸ್ಥಳಾಂತರ ಮಾಡಲಾಗಿತ್ತು.</p><p>ನಿರಾಶ್ರಿತರಾಗಿದ್ದ ನಾರಾಯಣಪ್ಪಗೆ ಖಾಲಿ ಬಿದ್ದಿದ್ದ ಹಳೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಮಾಡಿಕೊಡಲಾಗಿತ್ತು. ಸರ್ಕಾರಿ ಜಾಗದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದ. ಅದು ಆಗಲೇ ಛತ್ತಿನವರೆಗೂ ನಿರ್ಮಾಣ ಪೂರ್ಣಗೊಂಡಿದೆ.</p><p>ಇನ್ನು ಸ್ವಲ್ಪ ದಿನದಲ್ಲಿ ಛತ್ತು ಹಾಕಿಸಿ, ಗೃಹಪ್ರವೇಶಕ್ಕೂ ನಾರಾಯಣಪ್ಪ ಸಿದ್ಧತೆ ನಡೆಸಿದ್ದ ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯತಿ ಸಿಬ್ಬಂದಿ ಕೃಷಿ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸುವ ಮೂಲಕ ಅದಕ್ಕೆ ತಡೆಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ (ಕೋಲಾರ):</strong> ವಾಸಿಸಲು ಮನೆ ಇಲ್ಲ ಎಂದ ವ್ಯಕ್ತಿಯೊಬ್ಬರಿಗೆ ಸರ್ಕಾರಿ ವಸತಿಗೃಹದಲ್ಲಿ ತಾತ್ಕಾಲಿಕವಾಗಿ ತಂಗಲು ಅವಕಾಶ ಮಾಡಿ ಕೊಟ್ಟರೆ, ಆತ ಸರ್ಕಾರದ ವಸತಿಗೃಹವನ್ನೇ ನೆಲಸಮಗೊಳಿಸಿ ಸ್ವಂತ ಮನೆ ನಿರ್ಮಾಣ ಕಾರ್ಯ ಆರಂಭಿಸಿದ್ದಾನೆ.</p><p>ಕಾಮಸಮುದ್ರದ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿಯ ವಸತಿ ಗೃಹ ಅನೇಕ ದಿನಗಳಿಂದ ಖಾಲಿ ಇತ್ತು. ಹಾಗಾಗಿ ಅಲ್ಲಿ ಸ್ವಲ್ಪ ದಿನ ತಂಗಲು ನಾರಾಯಣಪ್ಪ ಎಂಬುವರಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. </p><p>ದಿನಗಳೆದಂತೆ ಅಧಿಕಾರಿಗಳು ಕೃಷಿ ಇಲಾಖೆ ವಸತಿಗೃಹವನ್ನೇ ಮರೆತುಬಿಟ್ಟಿದ್ದರು. ಇದನ್ನು ಅರಿತ ನಾರಾಯಣಪ್ಪ ಯಾರ ಗಮನಕ್ಕೂ ತಾರದೆ ವಸತಿಗೃಹವನ್ನು ಕೆಡವಿ, ಹೊಸ ಮನೆ ಕಟ್ಟಲು ಆರಂಭಿಸಿದ್ದರು. ಇಷ್ಟಾದರೂ ಈ ವಿಷಯ ಕೃಷಿ ಇಲಾಖೆ ಗಮನಕ್ಕೆ ಬಂದಿರಲಿಲ್ಲ.</p><p>ನಾರಾಯಣಪ್ಪ ರಜೆಯ ದಿನಗಳಲ್ಲಿ ಮಾತ್ರ ಹಂತ, ಹಂತವಾಗಿ ಕಟ್ಟಡ ಕಟ್ಟಿಸುತ್ತಿದ್ದರು. ಕಟ್ಟಡ ಮುಕ್ತಾಯ ಹಂತಕ್ಕೆ ತಲುಪಿದ್ದರಿಂದ ಈಚೆಗೆ ಕಾಮಸಮುದ್ರ ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆ ಮಾಡಿಸಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.</p><p>ಗ್ರಾಮ ಪಂಚಾಯತಿ ಸಿಬ್ಬಂದಿ ಈ ವಿಷಯವನ್ನು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಾಲ್ಕು ದಿನದ ಹಿಂದೆ ಗ್ರಾಮಕ್ಕೆ ದೌಡಾಯಿಸಿದ ಹಿರಿಯ ಅಧಿಕಾರಿಗಳು ಸರ್ಕಾರಿ ವಸತಿಗೃಹದ ಜಾಗದಲ್ಲಿ ತಲೆ ಎತ್ತಿದ ನಿರ್ಮಾಣ ಹಂತದ ಕಟ್ಟಡ ಕಂಡು ಹೌಹಾರಿದ್ದಾರೆ. </p><p>ಸಹಾಯಕ ನಿರ್ದೇಶಕಿ ಪ್ರತಿಭಾ, ಸಹಾಯಕ ಕೃಷಿ ಅಧಿಕಾರಿ ವಿಜಯ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಚಂದ್ರ ಹಾಗೂ ಸಿಬ್ಬಂದಿ, ಪೊಲೀಸರ ನೆರವು ಪಡೆದು ನಿರ್ಮಾಣ ಕಾಮಗಾರಿಯನ್ನು ತಡೆದಿದ್ದಾರೆ. </p><p>ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣದ ಕಾಮಗಾರಿ ನಡೆಸದಂತೆ ನಾರಾಯಣಪ್ಪಗೆ ಎಚ್ಚರಿಸಿ, ‘ಈ ಜಾಗ ಕೃಷಿ ಇಲಾಖೆಗೆ ಸೇರಿದ್ದು’ ಎಂಬ ಫಲಕ ನೆಟ್ಟಿದ್ದಾರೆ. ಗ್ರಾಮ ಪಂಚಾಯಿತಿಗೆ ಪತ್ರ ಬರೆದು ನಾರಾಯಣಪ್ಪಗೆ ಖಾತೆ ಮಾಡದಂತೆ ಸೂಚಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><blockquote>ವಸತಿಗೃಹ ಕೆಡವಿ ಮನೆ ನಿರ್ಮಾಣ ಮಾಡುತ್ತಿರುವ ನಾರಾಯಣಪ್ಪ ಅವರ ವಿರುದ್ಧ ಕಾಮಸಮುದ್ರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.<br></blockquote><span class="attribution">– ಪ್ರತಿಭಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ</span></div>.<div><blockquote>ವಸತಿ ಗೃಹಕ್ಕೆ ಅಕ್ರಮ ಪ್ರವೇಶಿಸದಂತೆ ಸೂಚಿಸಿದ ಹೊರತಾಗಿಯೂ ನಾರಾಯಣಪ್ಪ ಮನೆ ನಿರ್ಮಾಣ ಮಾಡುತ್ತಿದ್ದರು. ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.</blockquote><span class="attribution">– ಮಧುಚಂದ್ರ, ಪಿಡಿಒ, ಕಾಮಸಮುದ್ರ</span></div>.<p><strong>ಕೊಟ್ಟು ಮರೆತ ಅಧಿಕಾರಿಗಳು!</strong></p><p>ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕೇಂದ್ರದಲ್ಲಿ ಹಲವು ದಶಕಗಳ ಹಿಂದೆ ಕೃಷಿ ಇಲಾಖೆಯ ಸಹಾಯಕ ಅಧಿಕಾರಿಗಾಗಿ ಈ ವಸತಿಗೃಹ ನಿರ್ಮಾಣ ಮಾಡಲಾಗಿತ್ತು.</p><p>ಕೆಲವು ವರ್ಷ ಅಧಿಕಾರಿಗಳು ಈ ವಸತಿಗೃಹದಲ್ಲೇ ವಾಸ ಮಾಡುತ್ತಿದ್ದರು. ವಸತಿಗೃಹ ಕಿರಿದಾಗಿದೆ ಎಂದು ಕೃಷಿ ಯಂತ್ರಗಳ ಗೋದಾಮಿನಂತೆ ಬಳಸುತ್ತಿದ್ದರು. ಗೋದಾಮಿಗೆ ಈ ಮನೆ ಸಾಲದಾಯಿತು ಎಂದು ಹೊಸ ಗೋದಾಮು ಕಟ್ಟಲಾಗಿತ್ತು. ಕೆಲವು ವರ್ಷಗಳ ಹಿಂದೆ ಅಲ್ಲಿಗೆ ಗೋದಾಮು ಸ್ಥಳಾಂತರ ಮಾಡಲಾಗಿತ್ತು.</p><p>ನಿರಾಶ್ರಿತರಾಗಿದ್ದ ನಾರಾಯಣಪ್ಪಗೆ ಖಾಲಿ ಬಿದ್ದಿದ್ದ ಹಳೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅವಕಾಶ ಮಾಡಿಕೊಡಲಾಗಿತ್ತು. ಸರ್ಕಾರಿ ಜಾಗದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದ. ಅದು ಆಗಲೇ ಛತ್ತಿನವರೆಗೂ ನಿರ್ಮಾಣ ಪೂರ್ಣಗೊಂಡಿದೆ.</p><p>ಇನ್ನು ಸ್ವಲ್ಪ ದಿನದಲ್ಲಿ ಛತ್ತು ಹಾಕಿಸಿ, ಗೃಹಪ್ರವೇಶಕ್ಕೂ ನಾರಾಯಣಪ್ಪ ಸಿದ್ಧತೆ ನಡೆಸಿದ್ದ ಎಂದು ತಿಳಿದು ಬಂದಿದೆ. ಗ್ರಾಮ ಪಂಚಾಯತಿ ಸಿಬ್ಬಂದಿ ಕೃಷಿ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸುವ ಮೂಲಕ ಅದಕ್ಕೆ ತಡೆಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>