<p><strong>ಕೋಲಾರ</strong>: ಮೊಬೈಲ್ ಸಖ್ಯ ವಿಪರೀತವಾಗಿ ಮನುಷ್ಯನ ಸಹಜ ಸಹವಾಸ ಸುಖ, ಒಡನಾಟ ವಂಚಿತರಾದ ಕೆಟ್ಟಕಾಲದಲ್ಲಿದ್ದೇವೆ. ಯುವಕರು ಮೊಬೈಲ್ ಸಖ್ಯದಿಂದ ಹೊರಬಂದು ಸಮತೆ–ಮಮತೆಯ ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಾಹಿತಿ ಜಯಂತ ಕಾಯ್ಕಿಣಿ ಸಲಹೆ ನೀಡಿದರು.</p>.<p>ತಾಲ್ಲೂಕಿನ ಮಂಗಸಂದ್ರದ ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಮಾಜದ ವಿಕಾಸ ಹಾವು–ಏಣಿ ಆಟವಿದ್ದಂತೆ. ಸುಮಾರು ವರ್ಷಗಳಿಂದ ನಾವು ಇದರಲ್ಲಿ ಆಟವಾಡುತ್ತ ಗೆಲ್ಲುತ್ತಾ, ಸೋಲುತ್ತಾ ಬರುತ್ತಿದ್ದೇವೆ. ಅಸಮಾನತೆಯ ಹಾವು ನುಂಗಿದಾಗ ವಚನಕಾರರು ಏಣಿಯಂತೆ ಬಂದರು, ನಂತರ ಸೋಲುಗಳು ಎದುರಾದಾಗ ದಾಸ ಸಾಹಿತ್ಯ, ಶಿಕ್ಷಣವೆಂಬ ಏಣಿಗಳನ್ನು ಹತ್ತುತ್ತಾ ಸಾಗಿ ಬಂದಿದ್ದೇವೆ’ ಎಂದರು.</p>.<p>‘ಇದೀಗ ಮಮತೆ–ಸಮತೆ ಬಿಟ್ಟು ಏಣಿ ಹತ್ತಲು ಹೋದರೆ ಮೇಲಿರುವ ದೊಡ್ಡ ಹಾವು ನಮ್ಮನ್ನು ನುಂಗಿದರೆ ಮತ್ತೆ ಶಿಲಾಯುಗಕ್ಕೆ ಬಂದು ತಲುಪುತ್ತೇವೆ. ಆದ್ದರಿಂದ ಎಚ್ಚರಿಕೆಯಿಂದ ಸಮತೆ– ಮಮತೆಯೊಂದಿಗೆ ಮನುಷ್ಯ ಸಹವಾಸದೊಂದಿಗೆ ಬದುಕು ಸಾಗಿಸಬೇಕು’ ಎಂದು ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.</p>.<p>ವಿಜ್ಞಾನ-ಸಾಹಿತ್ಯ ಒಂದಕ್ಕೊಂದು ಸಂಬಂಧವಿದೆ. ಕಲೆ, ಸಾಹಿತ್ಯ ಬೇರೆಯಲ್ಲ; ವಿಜ್ಞಾನ ಬೇರೆಯಲ್ಲ, ವೈದ್ಯಕೀಯ ವಿಜ್ಞಾನ, ಸಾಹಿತ್ಯ ಎರಡೂ ಬೇರೆಯಲ್ಲ. ಎರಡರ ಉದ್ದೇಶವೂ ಮನುಷ್ಯನ ಅಭಿವೃದ್ಧಿಯೇ ಆಗಿದೆ. ಕುವೆಂಪು, ಬೇಂದ್ರೆ ಸೇರಿದಂತೆ ಮಹಾನ್ ಕವಿಗಳು ವಿಜ್ಞಾನದ ಆಸಕ್ತಿ ಹೊಂದಿದ್ದವರೇ ಎಂದು ಉದಾಹರಿಸಿದರು.</p>.<p>ಏಕ ವಿಷಯದ ಅಧ್ಯಯನದಿಂದ ಮೂಲತತ್ವ ಮರೆತು ಬಿಟ್ಟಿದ್ದೇವೆ, ಪುಸ್ತಕಗಳನ್ನು ಓದಿ. ಅದರಿಂದ ದೊಡ್ಡ ಜೀವನಸತ್ವ ತಮ್ಮನ್ನು ಕಾಪಾಡುತ್ತದೆ ಎಂದರು.</p>.<p>ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ‘ವಿಶ್ವವಿದ್ಯಾಲಯದಿಂದ 3 ವರ್ಷಗಳಿಂದ ಉತ್ತರೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಈ ಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನ್ಯಾಯ ಒದಗಿಸಿದಂತಾಗಿದೆ’ ಎಂದು ಹೇಳಿದರು.</p>.<p>ಚಿಕ್ಕಬಳ್ಳಾಪುರ ಬಿ.ಇಡಿ ಕಾಲೇಜಿನ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅವರು ಆಚರಿಸಿದ ಸಂಸ್ಥಾಪನ ದಿನಾಚರಣೆಯಂತೆ ನಾವೂ ಆಚರಿಸಬೇಕೆಂದು ಯೋಚಿಸಿ ನಿರ್ಧಾರ ಕೈಗೊಳ್ಳಲಾಯಿತು ಎಂದರು.</p>.<p>ಕವಿ ಬಿ.ಆರ್.ಲಕ್ಷ್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್, ತೊಗಲು ಗೊಂಬೆ ಕಲಾವಿದೆ ಸುಮಲತಾ, ಆದರ್ಶ ರೈತ ದಂಪತಿ ಕೃಷ್ಣೇಗೌಡ– ಮಂಜುಳಮ್ಮ ಅವರಿಗೆ ‘ಉತ್ತರೋತ್ತರ ಪ್ರಶಸ್ತಿ’ಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.</p>.<p>ಪ್ರಶಸ್ತಿಯು ₹10 ಸಾವಿರ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಕಾರ್ಯಕ್ರಮದಲ್ಲಿ ಕುಲಸಚಿವರಾದ ಸಿ.ಎನ್.ಶ್ರೀಧರ್ (ಆಡಳಿತ), ಪ್ರೊ.ಲೋಕನಾಥ್ (ಮೌಲ್ಯಮಾಪನ), ಹಣಕಾಸು ಅಧಿಕಾರಿ ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಭಾಸ್, ಬಸವರಾಜ್ ಹಳ್ಳೂರು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><blockquote>ನಮ್ಮಲ್ಲಿ ಆ ಮತ ಈ ಮತವೆಂಬ ಭೇದಭಾವ ಬೇಕಿಲ್ಲ. ಗಿಡ ಹುಟ್ಟಿ ಬೆಳಕಿನಡೆ ಎತ್ತರಕ್ಕೆ ಸಾಗುತ್ತದೆ. ಹಾಗೆಯೇ ಶಿಕ್ಷಣವೂ ಬೆಳಕಿದ್ದಂತೆ. ಅದು ತಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ</blockquote><span class="attribution"> ಜಯಂತ ಕಾಯ್ಕಿಣಿ ಸಾಹಿತಿ </span></div>.<div><blockquote>ಉತ್ತರ ವಿಶ್ವವಿದ್ಯಾಲಯದಿಂದ ನೀಡುತ್ತಿರುವ ‘ಉತ್ತರೋತ್ತರ ಪ್ರಶಸ್ತಿ’ ರಾಜ್ಯಮಟ್ಟದ ಘನತೆಯೊಂದಿಗೆ ಕರ್ನಾಟಕದ ಅತಿ ದೊಡ್ಡ ಪ್ರತಿಷ್ಠಿತ ಪ್ರಶಸ್ತಿಯಾಗಲಿ ಎಂಬುದು ನಮ್ಮ ಮಹದಾಸೆಯಾಗಿದೆ</blockquote><span class="attribution"> ಪ್ರೊ.ನಿರಂಜನ ವಾನಳ್ಳಿ ಕುಲಪತಿ ಉತ್ತರ ವಿ.ವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ</strong>: ಮೊಬೈಲ್ ಸಖ್ಯ ವಿಪರೀತವಾಗಿ ಮನುಷ್ಯನ ಸಹಜ ಸಹವಾಸ ಸುಖ, ಒಡನಾಟ ವಂಚಿತರಾದ ಕೆಟ್ಟಕಾಲದಲ್ಲಿದ್ದೇವೆ. ಯುವಕರು ಮೊಬೈಲ್ ಸಖ್ಯದಿಂದ ಹೊರಬಂದು ಸಮತೆ–ಮಮತೆಯ ಶಿಕ್ಷಣವೆಂಬ ದೊಡ್ಡ ಏಣಿ ಹತ್ತಿ ಬದುಕು ರೂಪಿಸಿಕೊಳ್ಳಬೇಕು ಎಂದು ಸಾಹಿತಿ ಜಯಂತ ಕಾಯ್ಕಿಣಿ ಸಲಹೆ ನೀಡಿದರು.</p>.<p>ತಾಲ್ಲೂಕಿನ ಮಂಗಸಂದ್ರದ ಉತ್ತರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಮಾಜದ ವಿಕಾಸ ಹಾವು–ಏಣಿ ಆಟವಿದ್ದಂತೆ. ಸುಮಾರು ವರ್ಷಗಳಿಂದ ನಾವು ಇದರಲ್ಲಿ ಆಟವಾಡುತ್ತ ಗೆಲ್ಲುತ್ತಾ, ಸೋಲುತ್ತಾ ಬರುತ್ತಿದ್ದೇವೆ. ಅಸಮಾನತೆಯ ಹಾವು ನುಂಗಿದಾಗ ವಚನಕಾರರು ಏಣಿಯಂತೆ ಬಂದರು, ನಂತರ ಸೋಲುಗಳು ಎದುರಾದಾಗ ದಾಸ ಸಾಹಿತ್ಯ, ಶಿಕ್ಷಣವೆಂಬ ಏಣಿಗಳನ್ನು ಹತ್ತುತ್ತಾ ಸಾಗಿ ಬಂದಿದ್ದೇವೆ’ ಎಂದರು.</p>.<p>‘ಇದೀಗ ಮಮತೆ–ಸಮತೆ ಬಿಟ್ಟು ಏಣಿ ಹತ್ತಲು ಹೋದರೆ ಮೇಲಿರುವ ದೊಡ್ಡ ಹಾವು ನಮ್ಮನ್ನು ನುಂಗಿದರೆ ಮತ್ತೆ ಶಿಲಾಯುಗಕ್ಕೆ ಬಂದು ತಲುಪುತ್ತೇವೆ. ಆದ್ದರಿಂದ ಎಚ್ಚರಿಕೆಯಿಂದ ಸಮತೆ– ಮಮತೆಯೊಂದಿಗೆ ಮನುಷ್ಯ ಸಹವಾಸದೊಂದಿಗೆ ಬದುಕು ಸಾಗಿಸಬೇಕು’ ಎಂದು ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.</p>.<p>ವಿಜ್ಞಾನ-ಸಾಹಿತ್ಯ ಒಂದಕ್ಕೊಂದು ಸಂಬಂಧವಿದೆ. ಕಲೆ, ಸಾಹಿತ್ಯ ಬೇರೆಯಲ್ಲ; ವಿಜ್ಞಾನ ಬೇರೆಯಲ್ಲ, ವೈದ್ಯಕೀಯ ವಿಜ್ಞಾನ, ಸಾಹಿತ್ಯ ಎರಡೂ ಬೇರೆಯಲ್ಲ. ಎರಡರ ಉದ್ದೇಶವೂ ಮನುಷ್ಯನ ಅಭಿವೃದ್ಧಿಯೇ ಆಗಿದೆ. ಕುವೆಂಪು, ಬೇಂದ್ರೆ ಸೇರಿದಂತೆ ಮಹಾನ್ ಕವಿಗಳು ವಿಜ್ಞಾನದ ಆಸಕ್ತಿ ಹೊಂದಿದ್ದವರೇ ಎಂದು ಉದಾಹರಿಸಿದರು.</p>.<p>ಏಕ ವಿಷಯದ ಅಧ್ಯಯನದಿಂದ ಮೂಲತತ್ವ ಮರೆತು ಬಿಟ್ಟಿದ್ದೇವೆ, ಪುಸ್ತಕಗಳನ್ನು ಓದಿ. ಅದರಿಂದ ದೊಡ್ಡ ಜೀವನಸತ್ವ ತಮ್ಮನ್ನು ಕಾಪಾಡುತ್ತದೆ ಎಂದರು.</p>.<p>ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ‘ವಿಶ್ವವಿದ್ಯಾಲಯದಿಂದ 3 ವರ್ಷಗಳಿಂದ ಉತ್ತರೋತ್ತರ ಪ್ರಶಸ್ತಿ ನೀಡಲಾಗುತ್ತಿದೆ. ಈ ಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನ್ಯಾಯ ಒದಗಿಸಿದಂತಾಗಿದೆ’ ಎಂದು ಹೇಳಿದರು.</p>.<p>ಚಿಕ್ಕಬಳ್ಳಾಪುರ ಬಿ.ಇಡಿ ಕಾಲೇಜಿನ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅವರು ಆಚರಿಸಿದ ಸಂಸ್ಥಾಪನ ದಿನಾಚರಣೆಯಂತೆ ನಾವೂ ಆಚರಿಸಬೇಕೆಂದು ಯೋಚಿಸಿ ನಿರ್ಧಾರ ಕೈಗೊಳ್ಳಲಾಯಿತು ಎಂದರು.</p>.<p>ಕವಿ ಬಿ.ಆರ್.ಲಕ್ಷ್ಮಣರಾವ್, ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್, ತೊಗಲು ಗೊಂಬೆ ಕಲಾವಿದೆ ಸುಮಲತಾ, ಆದರ್ಶ ರೈತ ದಂಪತಿ ಕೃಷ್ಣೇಗೌಡ– ಮಂಜುಳಮ್ಮ ಅವರಿಗೆ ‘ಉತ್ತರೋತ್ತರ ಪ್ರಶಸ್ತಿ’ಗೆ ಪ್ರದಾನ ಮಾಡಿ ಸನ್ಮಾನಿಸಲಾಯಿತು.</p>.<p>ಪ್ರಶಸ್ತಿಯು ₹10 ಸಾವಿರ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು.</p>.<p>ಕಾರ್ಯಕ್ರಮದಲ್ಲಿ ಕುಲಸಚಿವರಾದ ಸಿ.ಎನ್.ಶ್ರೀಧರ್ (ಆಡಳಿತ), ಪ್ರೊ.ಲೋಕನಾಥ್ (ಮೌಲ್ಯಮಾಪನ), ಹಣಕಾಸು ಅಧಿಕಾರಿ ವಸಂತಕುಮಾರ್, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಕುಮುದಾ, ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಭಾಸ್, ಬಸವರಾಜ್ ಹಳ್ಳೂರು, ಬೋಧಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><blockquote>ನಮ್ಮಲ್ಲಿ ಆ ಮತ ಈ ಮತವೆಂಬ ಭೇದಭಾವ ಬೇಕಿಲ್ಲ. ಗಿಡ ಹುಟ್ಟಿ ಬೆಳಕಿನಡೆ ಎತ್ತರಕ್ಕೆ ಸಾಗುತ್ತದೆ. ಹಾಗೆಯೇ ಶಿಕ್ಷಣವೂ ಬೆಳಕಿದ್ದಂತೆ. ಅದು ತಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ</blockquote><span class="attribution"> ಜಯಂತ ಕಾಯ್ಕಿಣಿ ಸಾಹಿತಿ </span></div>.<div><blockquote>ಉತ್ತರ ವಿಶ್ವವಿದ್ಯಾಲಯದಿಂದ ನೀಡುತ್ತಿರುವ ‘ಉತ್ತರೋತ್ತರ ಪ್ರಶಸ್ತಿ’ ರಾಜ್ಯಮಟ್ಟದ ಘನತೆಯೊಂದಿಗೆ ಕರ್ನಾಟಕದ ಅತಿ ದೊಡ್ಡ ಪ್ರತಿಷ್ಠಿತ ಪ್ರಶಸ್ತಿಯಾಗಲಿ ಎಂಬುದು ನಮ್ಮ ಮಹದಾಸೆಯಾಗಿದೆ</blockquote><span class="attribution"> ಪ್ರೊ.ನಿರಂಜನ ವಾನಳ್ಳಿ ಕುಲಪತಿ ಉತ್ತರ ವಿ.ವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>