<p><strong>ಕೆಜಿಎಫ್:</strong> ಕೃಷಿ ಹೊಂಡ ಎಂತಹ ಸಹಾಯವನ್ನು ರೈತರಿಗೆ ನೀಡುತ್ತಿದೆ ಎಂಬುದಕ್ಕೆ ಗೊಲ್ಲಹಳ್ಳಿಯ ರೈತ ವೇಣುಗೋಪಾಲ್ ಕೃಷಿ ಸಾಧನೆ ಉದಾಹರಣೆಯಾಗಿದೆ.</p>.<p>ನಗರಕ್ಕೆ ಹೊಂದಿಕೊಂಡಂತೆ ಇರುವ ಗೊಲ್ಲಹಳ್ಳಿ ಬಳಿ ಮಸ್ಕಂ ರೈತ ವೇಣುಗೋಪಾಲ್ ಮೂರೂವರೆ ಎಕರೆ ಜಮೀನಿನಲ್ಲಿ ಬೆಳೆದಿರುವ ಬಜ್ಜಿ ಮೆಣಸಿನಕಾಯಿ, ಎಲಕೋಸು, ಟೊಮೆಟೊ ಮತ್ತು ಚೆಂಡು ಹೂ ಬಂಪರ್ ಲಾಭವನ್ನು ತಂದುಕೊಟ್ಟಿದೆ.</p>.<p>ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ತಮ್ಮದೇ ಜಮೀನಿನಲ್ಲಿ ಕೊರೆದಿರುವ ಕೊಳವೆಬಾವಿಯಿಂದ ನೀರು ಹಾಯಿಸಲಾಗುತ್ತಿದೆ. ಸಮೀಪದ ಅನೇಕ ಕೊಳವೆಬಾವಿಗಳು ಬತ್ತಿ ಹೋಗಿದ್ದರೂ, ಈ ರೈತನ ಕೊಳವೆಬಾವಿಯಲ್ಲಿ ನೀರು ಇನ್ನೂ ಬರುತ್ತಿರುವುದು ಅವರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ಕೊಳವೆಬಾವಿ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿಕೊಂಡು ಬೇಕಾದಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿದೆ.</p>.<p>ಪ್ಲಾಸ್ಟಿಕ್ ನೆಲಹಾಸು ಮಧ್ಯೆ ಬೆಳೆದು, ಅದಕ್ಕೆ ಹನಿ ನೀರಾವರಿ ಮಾಡಲಾಗಿದೆ. ಈಗ ಮಾರುಕಟ್ಟೆಯಲ್ಲಿ ಬಜ್ಜಿ ಮೆಣಸಿನಕಾಯಿಗೆ ಉತ್ತಮ ಧಾರಣೆ ಇದೆ. ಮಾರ್ಚ್ ತಿಂಗಳಲ್ಲಿ ನಾಟಿ ಮಾಡಿದ್ದ ಮೆಣಸಿನಕಾಯಿ ಈಗಾಗಲೇ ಆರು ಬಾರಿ ಕಟಾವು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 70 ಆಸುಪಾಸಿನಲ್ಲಿ ಬೆಲೆ ಇರುವುದು ಲಾಭ ಎಂದು ವೇಣುಗೋಪಾಲ್ ಹೇಳುತ್ತಾರೆ.</p>.<p>ಸಾಮಾನ್ಯವಾಗಿ ಚೆಂಡು ಹೂಗೆ ಬೇಡಿಕೆ ಬರುವುದು ಕಷ್ಟವೇ. ಆದರೆ ಎಲ್ಲೆಡೆ ನೀರಿನ ಅಭಾವವಿರುವುದರಿಂದ ಚೆಂಡು ಹೂ ಬೆಳೆ ಬೆಳೆಯುವವರು ಕಡಿಮೆಯಾಗಿದ್ದರಿಂದ, ಚೆಂಡು ಹೂ ಕೂಡ ಕೈ ತುಂಬಿಸಲಿದೆ. ಪ್ರಸ್ತುತ ಕೆ.ಜಿ ಗೆ ₹ 80 ಹೂ ಬಿಕರಿಯಾಗುತ್ತಿದೆ. ಚೆಂಡು ಹೂಗಳನ್ನು ವಿ.ಕೋಟೆ ಮಾರುಕಟ್ಟೆಯಲ್ಲಿ ಮಾರುತ್ತೇನೆ. ಅಲ್ಲಿಂದ ಅದು ಗುಂಟೂರು, ರಾಜಮಂಡ್ರಿ ಮತ್ತು ವಿಜಯವಾಡ ಮಾರುಕಟ್ಟೆಗಳಿಗೆ ಹೋಗುತ್ತದೆ ಎಂದು ವೇಣು ವಿತರಣೆ ಜಾಲವನ್ನು ತಿಳಿಸುತ್ತಾರೆ.</p>.<p>ಬಜ್ಜಿ ಮೆಣಸಿನಕಾಯಿ ಮತ್ತು ಚೆಂಡು ಹೂ ಜತೆಗೆ ಟೊಮೆಟೊ ಮತ್ತು ನೆಲಕೋಸಿಗೆ ಕೂಡ ಬೇಡಿಕೆ ಇದೆ. ಅದು ಕೂಡ ಲಾಭವನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯಲ್ಲಿ ಅವರು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ಕೃಷಿ ಹೊಂಡ ಎಂತಹ ಸಹಾಯವನ್ನು ರೈತರಿಗೆ ನೀಡುತ್ತಿದೆ ಎಂಬುದಕ್ಕೆ ಗೊಲ್ಲಹಳ್ಳಿಯ ರೈತ ವೇಣುಗೋಪಾಲ್ ಕೃಷಿ ಸಾಧನೆ ಉದಾಹರಣೆಯಾಗಿದೆ.</p>.<p>ನಗರಕ್ಕೆ ಹೊಂದಿಕೊಂಡಂತೆ ಇರುವ ಗೊಲ್ಲಹಳ್ಳಿ ಬಳಿ ಮಸ್ಕಂ ರೈತ ವೇಣುಗೋಪಾಲ್ ಮೂರೂವರೆ ಎಕರೆ ಜಮೀನಿನಲ್ಲಿ ಬೆಳೆದಿರುವ ಬಜ್ಜಿ ಮೆಣಸಿನಕಾಯಿ, ಎಲಕೋಸು, ಟೊಮೆಟೊ ಮತ್ತು ಚೆಂಡು ಹೂ ಬಂಪರ್ ಲಾಭವನ್ನು ತಂದುಕೊಟ್ಟಿದೆ.</p>.<p>ಜಮೀನಿನಲ್ಲಿರುವ ಕೃಷಿ ಹೊಂಡಕ್ಕೆ ತಮ್ಮದೇ ಜಮೀನಿನಲ್ಲಿ ಕೊರೆದಿರುವ ಕೊಳವೆಬಾವಿಯಿಂದ ನೀರು ಹಾಯಿಸಲಾಗುತ್ತಿದೆ. ಸಮೀಪದ ಅನೇಕ ಕೊಳವೆಬಾವಿಗಳು ಬತ್ತಿ ಹೋಗಿದ್ದರೂ, ಈ ರೈತನ ಕೊಳವೆಬಾವಿಯಲ್ಲಿ ನೀರು ಇನ್ನೂ ಬರುತ್ತಿರುವುದು ಅವರ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ. ಕೊಳವೆಬಾವಿ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿಕೊಂಡು ಬೇಕಾದಷ್ಟು ಪ್ರಮಾಣದಲ್ಲಿ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿದೆ.</p>.<p>ಪ್ಲಾಸ್ಟಿಕ್ ನೆಲಹಾಸು ಮಧ್ಯೆ ಬೆಳೆದು, ಅದಕ್ಕೆ ಹನಿ ನೀರಾವರಿ ಮಾಡಲಾಗಿದೆ. ಈಗ ಮಾರುಕಟ್ಟೆಯಲ್ಲಿ ಬಜ್ಜಿ ಮೆಣಸಿನಕಾಯಿಗೆ ಉತ್ತಮ ಧಾರಣೆ ಇದೆ. ಮಾರ್ಚ್ ತಿಂಗಳಲ್ಲಿ ನಾಟಿ ಮಾಡಿದ್ದ ಮೆಣಸಿನಕಾಯಿ ಈಗಾಗಲೇ ಆರು ಬಾರಿ ಕಟಾವು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 70 ಆಸುಪಾಸಿನಲ್ಲಿ ಬೆಲೆ ಇರುವುದು ಲಾಭ ಎಂದು ವೇಣುಗೋಪಾಲ್ ಹೇಳುತ್ತಾರೆ.</p>.<p>ಸಾಮಾನ್ಯವಾಗಿ ಚೆಂಡು ಹೂಗೆ ಬೇಡಿಕೆ ಬರುವುದು ಕಷ್ಟವೇ. ಆದರೆ ಎಲ್ಲೆಡೆ ನೀರಿನ ಅಭಾವವಿರುವುದರಿಂದ ಚೆಂಡು ಹೂ ಬೆಳೆ ಬೆಳೆಯುವವರು ಕಡಿಮೆಯಾಗಿದ್ದರಿಂದ, ಚೆಂಡು ಹೂ ಕೂಡ ಕೈ ತುಂಬಿಸಲಿದೆ. ಪ್ರಸ್ತುತ ಕೆ.ಜಿ ಗೆ ₹ 80 ಹೂ ಬಿಕರಿಯಾಗುತ್ತಿದೆ. ಚೆಂಡು ಹೂಗಳನ್ನು ವಿ.ಕೋಟೆ ಮಾರುಕಟ್ಟೆಯಲ್ಲಿ ಮಾರುತ್ತೇನೆ. ಅಲ್ಲಿಂದ ಅದು ಗುಂಟೂರು, ರಾಜಮಂಡ್ರಿ ಮತ್ತು ವಿಜಯವಾಡ ಮಾರುಕಟ್ಟೆಗಳಿಗೆ ಹೋಗುತ್ತದೆ ಎಂದು ವೇಣು ವಿತರಣೆ ಜಾಲವನ್ನು ತಿಳಿಸುತ್ತಾರೆ.</p>.<p>ಬಜ್ಜಿ ಮೆಣಸಿನಕಾಯಿ ಮತ್ತು ಚೆಂಡು ಹೂ ಜತೆಗೆ ಟೊಮೆಟೊ ಮತ್ತು ನೆಲಕೋಸಿಗೆ ಕೂಡ ಬೇಡಿಕೆ ಇದೆ. ಅದು ಕೂಡ ಲಾಭವನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯಲ್ಲಿ ಅವರು ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>